
ದಿನಾಂಕ 17-3, 2024ರ ಭಾನುವಾರ 4.30 ಗಂಟೆಗೆ ಗೋವಿಂದರಾಜ ನಗರದ ಬಿಬಿಎಂಪಿ ವಾರ್ಡ್ ಚಿದಾನಂದ ಮೂರ್ತಿ ಸಭಾಂಗಣದಲ್ಲಿ ತರಂಗ್ ಕ್ರಿಯೇಟರ್ಸ್ ಸಂಸ್ಥೆ ಆಯೋಜಿಸಿದ ಅಪ್ಪುಸ್ಮರಣಾರ್ಥ ಆಯೋಜಿಸಿದ ಪುನೀತ್ ರಾಜಕುಮಾರ ರವರ ಹಾಡುಗಳ ರಸಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿದ – ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳೀಮಠರವರು ಉದ್ಘಾಟಿಸಿ ಡಾಪುನೀತ್ ನಮ್ಮೆಲ್ಲರ ಮಹಾಮನೆಯ ಮಗಎಂದು ಅಭಿಪ್ರಾಯ ವ್ಯಕ್ತಪಡಿಸಿದರು. – ಹಿರಿಯ ಸಾಹಿತಿಗಳು ಪ್ರಾಧ್ಯಾಪಕರಾದ ಶ್ರೀಲಕ್ಷ್ಮಿ ವಿ.ಕೆ. – ಸಮಾಜಸೇವಕರು ಉಮಾಶಂಕರ – ಡಿಸಿಪಿ ನರಸಿಂಹರವರು ಪ್ರಾಧ್ಯಾಪಕ ಹನುಮಂತರಾಯಪ್ಪ- ಸರ್ ಕಲಾವಿದ ಹಾಡುಗಾರ ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದು ಕಲಾವಿದರನ್ನು ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಹಲವಾರು ಯುವ ಪ್ರತಿಭೆ ಕಲಾವಿದರು ಡಾ. ಪುನೀತ್ ರಾಜಕುಮಾರ ರವರ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.