
ಜಕ್ಕೂರಿನಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ :
ಬ್ಯಾಟರಾಯನಪುರ : ಉತ್ತಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ, ನಿಯಮಿತ ವ್ಯಾಯಾಮ ಮತ್ತು ಒಳ್ಳೆಯ ಹವ್ಯಾಸಗಳೇ ಮೂಲಾಧಾರವಾಗಿದ್ದು, ಯುವಕರು ದುರ್ವ್ಯಸನ ಗಳಿಂದ ದೂರವಿದ್ದು, ದೈಹಿಕ ಆರೋಗ್ಯದ ಕಡೆಗೆ ಹೆಚ್ಚು ಒತ್ತು ನೀಡಬೇಕೆಂದು ಬೆಂ.ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಜಕ್ಕೂರು ಕ್ರಿಕೆಟ್ ಕೋ-ಆಪ ರೇಟಿವ್ ಸೊಸೈಟಿಯ ಅಧ್ಯಕ್ಷ ಜಕ್ಕೂರು ರವಿಕುಮಾರ್ ಅಭಿಪ್ರಾಯ ಪಟ್ಟರು.
ರಾಷ್ಟ್ರ ಮಟ್ಟದ ಹಿರಿಯ ದೇಹದಾರ್ಢ್ಯ ಪಟು ಎಸ್. ಮನೋಹರ್ ಕ್ಲಾಸಿಕ್ ರವರ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ‘ಮಿ.ಜೈ ಕರ್ನಾಟಕ’ ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತರಾದ ವಿವಿಧ ವಯೋಮಾನದ ದೇಹದಾರ್ಢ್ಯ ಪಟುಗಳಿಗೆ ಟ್ರೋಫಿ, ಪ್ರಮಾಣ ಪತ್ರ ಮತ್ತು ಪದಕ ವಿತರಿಸಿದ ನಂತರ ಮಾತನಾಡಿದ ಅವರು ‘ಕಾಲ ಹಿಂದಿನಂತಿಲ್ಲ, ಆಹಾರ ಪದಾರ್ಥಗಳು ಸೇರಿದಂತೆ ಅಸಲಿಯಾದ ವಸ್ತುಗಳು ಸಿಗುವುದು ಅಪರೂಪ ಎಂಬಂತಿದೆ. ಇಂತಹ ವಿಷಮ ಕಾಲದಲ್ಲಿ ಉತ್ತಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳು ವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಯುವಕರು ದುರ್ವ್ಯಸನ ಗಳಿಂದ ದೂರವಿದ್ದು, ಒಳ್ಳೆಯ ಹವ್ಯಾಸ ಗಳು, ನಿಯಮಿತ ವ್ಯಾಯಾಮ, ಉತ್ತಮ ಆಹಾರ ಸೇವನೆಯ ಮೂಲಕ ದೈಹಿಕ ಆರೋಗ್ಯ ಕಾಪಾಡಿ ಕೊಳ್ಳಬೇಕು ಎಂದು ಸಲಹೆ ನೀಡಿದರು. ಇಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ವಿವಿಧ ವಯೋ ಮಾನದ 50ಕ್ಕೂ ಹೆಚ್ಚು ದೇಹ ದಾರ್ಢ್ಯ ಪಟುಗಳು, ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು, ತಮ್ಮ ದೈಹಿಕ ಸದೃಢತೆಯನ್ನು ವಿವಿಧ ಭಂಗಿಗಳಲ್ಲಿ ನಿಂತು ಅನಾವರಣ ಗೊಳಿಸುತ್ತಿರುವುದನ್ನು ನೋಡಿದಾಗ ನನ್ನ ಬಾಲ್ಯ ಕಣ್ಮುಂದೆ ಬಂದಂತಾಯ್ತು, ಶಾಲಾ ದಿನಗಳಲ್ಲಿ ನಾನೂ ಸಹ ಕುಸ್ತಿ, ಖೋ ಖೋ, ಕಬಡ್ಡಿ ಪಂದ್ಯಗಳಲ್ಲಿ ಜಿಲ್ಲಾ ಮಟ್ಟದ ಆಟಗಾರನಾಗಿ ಹಲವು ಪ್ರಶಸ್ತಿಗಳು, ಪದಕ, ಟ್ರೋಫಿ ಪಡೆದಿದ್ದೆ ಎಂದು ತಮ್ಮ ಬಾಲ್ಯವನ್ನು ಸ್ಮರಿಸಿಕೊಂಡರು.
ಇದೇ ಸಂದರ್ಭದಲ್ಲಿ ಮಿ.ಜೈ ಕರ್ನಾಟಕ ದೇಹದಾರ್ಢ್ಯ ಸ್ಪರ್ಧೆಯ ಸಂಯೋಜಕ ಎಸ್.ಮನೋಹರ್ ಕ್ಲಾಸಿಕ್, ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷೆ ನಾಗರಾಜಪ್ಪ ಸದಸ್ಯರಾದ ವೆಂಕಟೇಶ್, ಆಂಜಿನಪ್ಪ, ಇ.ಕೃಷ್ಣಪ್ಪ, ಕಚೇರಿ ಕಾರ್ಯದರ್ಶಿ ರಾಕೇಶ್, ಯುವ ಮುಖಂಡ ಮುನೇಶ್ ಕುಮಾರ್ ಸೇರಿದಂತೆ ಇನ್ನಿತರರಿದ್ದರು.