





ಬೆಂಗಳೂರು
ಯಲಹಂಕ ವೀರಶೈವ ಲಿಂಗಾಯತ ಸಂರಕ್ಷಣಾ ಸಮಿತಿ (ರಿ.) ಬಾಗಲೂರು ಮುಖ್ಯ ರಸ್ತೆ ಬೆಂಗಳೂರು 560063 ವತಿಯಿಂದ
ಪದ್ಮಭೂಷಣ ಕರ್ನಾಟಕ ರತ್ನ ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ 117 ನೇ ಜನುಮ ದಿನಾಚರಣೆ ದಿನಾಂಕ 01/04/2024 ರಂದು ಮಾಡಲಾಯಿತು.ಶಿವಶರಣೆ ಸ್ತ್ರೀಶಕ್ತಿ ಸಂಘದ ಮಹಿಳೆಯರಿಂದ ಪ್ರಾರ್ಥನೆ ಮಾಡಲಾಯಿತು. ಹುಣಸಮಾರನಹಳ್ಳಿ ಮಠದ ಶ್ರೀ ಗುರು ನಂಜೇಶ್ವರ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಜ್ಯೋತಿ ಬೆಳಗುವ ಮುಖಾಂತರ ಪ್ರಾರಂಭಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಗುರುಸ್ವಾಮಿ K P,ಅ. ಭಾ. ವೀ ಮಹಾಸಭಾ ಅಧ್ಯಕ್ಷರು ಬ್ಯಾಟರಾಯನಪುರ ಘಟಕ , ಶ್ರೀ ವಿರೂಪಾಕ್ಷಪ್ಪ ಅಧ್ಯಕ್ಷರು ಅ.ಭಾ.ವೀ. ಮಹಾಸಭಾ ಬೆಂಗಳೂರು ಗ್ರಾಮಾಂತರ , ಶ್ರೀ ಜೈ ಕುಮಾರ್ ಪ್ರಧಾನ ಕಾರ್ಯದರ್ಶಿಗಳು ಅ.ಭಾ. ವೀ. ಮಹಾಸಭಾ ಬ್ಯಾಟರಾಯನಪುರ ಘಟಕ. ನಮ್ಮ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ GS, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಮರೇಶ್, ಖಜಾಂಚಿಗಳಾದ ಶ್ರೀ ನಾಗಪ್ಪ ಲಕ್ಕನಗೌಡ, ಶ್ರೀ ನಾಗಭೂಷಣ K ಶ್ರೀಮತಿ ಹರಿಣಿ SC,ಹಿರಿಯ ಮುಖಂಡರಾದ ಶ್ರೀ ವೀರಷೆಟ್ಟ ಪಾಟೀಲ್, ಅನಿಲ್ ಕುಮಾರ್, ಅಮರ ನಾರಾಯಣ, ಮತ್ತು ಶ್ರೀ ಸುನಿಲ್, ಡಾಕ್ಟರ್ ಮಂಜುನಾಥ್ LH, ನಟರಾಜ್BC.ಇಂದೂಧರ GM.ಡಾಕ್ಟರ್ ಮಲ್ಲಿಕಾರ್ಜುನ. B. ಕೊಡಿಗೇಹಳ್ಳಿ ಶ್ರೀ ರಾಜಣ್ಣ ಮತ್ತು ಸಮಿತಿಯ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿಯ ಸದಸ್ಯರು ಮುಂತಾದವರು ಭಾಗವಹಿಸಿದ್ದರು. ಕಾಯಕಯೋಗಿಗಳಿಗೆ ನೆನಪಿನ ಕಾಣಿಕೆ ಶ್ರೀ ಸಂಜೇಶ್ವರ ಸ್ವಾಮಿಗಳಿಂದ ನೀಡಲಾಯಿತು.ಮತ್ತು ನಮ್ಮ ಸಮಿತಿಯ ವತಿಯಿಂದ ಪ್ರಸಾದ ವಿತರಣೆ ಮಾಡಲಾಯಿತು. ಗ್ರಾಮದ ನಾಗರಿಕರು ,ಮುಖಂಡರುಆಗಮಿಸಿದ್ದರು,ಕಾರ್ಯಕ್ರಮವು ಸಮಿತಿಯ ಸದಸ್ಯರ ಸಹಾಯದಿಂದ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
R ಹನುಮಂತು. 9845085793
7349337989