

ಯಲಹಂಕ : ಬೆಂ. ನಗರ ಜಿಲ್ಲಾಡಳಿತ, ಬೆಂ. ಉತ್ತರ ತಾ.ಪಂ., ಯಲಹಂಕ ತಾ.ಪಂ., ಹಾಗೂ ವಿಕಲಚೇತನರ-ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಹಭಾಗಿತ್ವದಲ್ಲಿ ಶನಿವಾರ ಏರ್ಪಡಿಸಿದ್ದ ವಿಕಲಚೇತನರ ಮತದಾನ ಜಾಗೃತಿ ಬೈಕ್ ರ್ಯಾಲಿಗೆ ಬೆಂ.ಉತ್ತರ ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ರಮೇಶ್ ಡಿ.ಓ., ಯಲಹಂಕ ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಅಪೂರ್ವ ಎ.ಕುಲಕರ್ಣಿ, ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಯಮುನಾ
ಹೆಸರಘಟ್ಟದಲ್ಲಿ ಚಾಲನೆ ನೀಡಿದರು.
ಹೆಸರಘಟ್ಟದ ವ್ಯಾಸ ಮಹರ್ಷಿ ವೃತ್ತದಿಂದ ಆರಂಭಗೊಂಡ ‘ವಿಕಲಚೇತನರ ಮತದಾನ ಜಾಗೃತಿ ಬೈಕ್ ರ್ಯಾಲಿ’ ಹುರಳಿಚಿಕ್ಕನಹಳ್ಳಿ, ಹುಸ್ಕೂರು ಮತ್ತು ಗೋಪಾಲಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಮೂಲಕ ಸಾಗಿತು, ರ್ಯಾಲಿಯಲ್ಲಿ ಮತದಾನ ಜಾಗೃತಿ ಕುರಿತ ವಿವಿಧ ಘೋಷ ವಾಕ್ಯಗಳನ್ನು ಒಳಗೊಂಡ ಪ್ಲೆಕಾರ್ಡ್ ಗಳು, ಬಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ನಾಗರೀಕರಿಗೆ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು.
ರ್ಯಾಲಿ ಉದ್ದೇಶಿಸಿ ಬೆಂ. ಉತ್ತರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ರಮೇಶ್ ಡಿ.ಓ.ಮಾತನಾಡಿ




ಏಪ್ರಿಲ್ 26ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನದ ದಿನದಂದು ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವ ದಿಸೆಯಲ್ಲಿ ಶೇಕಡಾ 100% ರಷ್ಟು ಮತದಾನ ಮಾಡಬೇಕೆಂದು ನಾಗರಿಕರಲ್ಲಿ ಮನವಿ ಮಾಡಿದ ಅವರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ಸಂದರ್ಭದಲ್ಲಿ ಯಲಹಂಕ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಅಪೂರ್ವ ಎ. ಕುಲಕರ್ಣಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಳಾದ ರಾಜೇಶ್ ಹೆಚ್.ಆರ್, ಸಿದ್ದಪ್ಪ, ರೇವಿನಾ ಡಿ.ಜಿ , ಜಿಲ್ಲಾ ಐಇಸಿ ಸಂಯೋಜಕ ನವೀನ್ ಬಾಬು, ವಾಯ್ಸ್ ಆಫ್ ನೀಡಿ ಸಂಘದ ಸಂಸ್ಥಾಪಕ ಅರುಣ್ ಕುಮಾರ್, ಈರಪ್ಪ ಕುಂಬಾರ ಸೇರಿದಂತೆ ಗ್ರಾ. ಪಂ. ಸಿಬ್ಬಂದಿ ವರ್ಗ, ವಿಕಲ ಚೇತನರ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
R ಹನುಮಂತು 9845085793