ಮೂಡಲಗಿ 17: ಬೇಸಿಗೆ ರಜಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಇಲಾಖೆ ಬಿಸಿಯೂಟ ನೀಡುತ್ತಿರುವ ಸಂದರ್ಭದಲ್ಲಿ ಗೋಕಾಕದ ಶಿವಾ ಪೌಡೇಶನ್ ಸಂಸ್ಥಾಪಕರು ಅಧ್ಯಕ್ಷರೂ ಆದ ರಮೇಶ ಮಾಡೇರಿರವರು ತಮ್ಮ ಸಂಸ್ಥೆಯವತಿಯಿಂದ ವಿದ್ಯಾರ್ಥಿಗಳಗೆ ಬೂಸ್ಟ್ ಪಾಕೆಟ್ಟುಗಳನ್ನು ನೀಡಿರುವದು ಶ್ಲಾಘನೀಯ ಎಂದು ಶಾಲೆಯ ಪ್ರಧಾನ ಗುರುಗಳಾದ ಎ. ಗಿರೆಣ್ಣವರ ಹೇಳಿದರು. ಶಿವಾ ಪೌಂಡೇಶವರು ತಮ್ಮ ಸಂಸ್ಥೆಯವತಿಯಿಂದ ತುಕ್ಕಾನಟ್ಟಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಾಲಿನೊಂದಿಗೆ ಬೂಸ್ಟ್ ನೀಡಿರುವ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಈ ಸಂಸ್ಥೆ ಅನಾಥ ಮಕ್ಕಳಿಗೆ ಆಶ್ರಯ ನೀಡುವುದರ ಜೊತೆಗೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ನಂತರ ಶಾನೂರ ಹಿರೇಹೊಳಿಯವರು ಮಾತನಾಡಿ ಅಕ್ಷರ ದಾಸೋಹ ಸರಕಾರದ ಉತ್ತಮ ಕಾರ್ಯಕ್ರಮವಾಗಿದ್ದು ಅದರಲ್ಲೂ ಬರಗಾಲದ ಹಿನ್ನೆಲೆಯಲ್ಲಿ ರಜಾ ಅವಧಿಯಲ್ಲೂ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುತ್ತಿರುವದು ಶಿಕ್ಷಣ ಇಲಾಖೆಯ ಕಾರ್ಯಕ್ರಮ ಅಭಿನಂದನೀಯ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಪಾಠಾಭ್ಯಾಸ ಕೂಡ ಮಾಡುತ್ತಿರುವ ಶಿಕ್ಷಕರ ಕಾರ್ಯ ಮೆಚ್ಚುವಂತದ್ದು ಎಂದರು. ಈ ಸಂದರ್ಭದಲ್ಲಿ ಶಿಕ್ಷಕರಾದ ವಿಮಲಾಕ್ಷಿ ತೋರಗಲ, ಖಾತನ ನದಾಪ, ಸೋಮಶಖರ ಉಪಸ್ಥಿತರಿದ್ದರು.