ಪಟ್ಟಣದ ಎಸ್ಎನ್ ರೆಸಾರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದ ಲೋಕಸಭಾ ಕ್ಷೇತ್ರದ ಬಂಗಾರಪೇಟೆ, ಕೆಜಿಎಫ್,ಮಾಲೂರು, ಕೋಲಾರ, ಮುಲುಬಾಗಿಲು, ಚಿಂತಾಮಣಿ,ಶಿಡ್ಲಘಟ್ಟ,ಶ್ರೀನಿವಾಸಪುರ, ಕ್ಷೇತ್ರದ ಛಲವಾದಿ ಬಲಗೈ ಸಮುದಾಯದ ಬಂಧುಗಳಿಗೆ ತಿಳಿಸುವುದೇನೆಂದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ತೆಗೆದುಕೊಳ್ಳಬೇಕಾದ ತೀರ್ಮಾನಗಳನ್ನ ಚರ್ಚೆ ಮಾಡಲು ದಲಿತ ಸಮುದಾಯದ ಮುಖಂಡರು, ಬಲಗೈ ಸಮುದಾಯದ ಮುಖಂಡರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಮುಂಚೂಣಿಯ ಅಧ್ಯಕ್ಷರು, ವಿವಿಧ ದಲಿತ ಪರ ಸಂಘಟನೆಯವರು, ಅಧ್ಯಕ್ಷರು,ಸದಸ್ಯರು,ಪದಾಧಿಕಾರಿಗಳು ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು, ತಾವು ಎಲ್ಲರೂ ಸಹ ದಯಮಾಡಿ ದಲಿತ ಸಂಘರ್ಷ ಸಮಿತಿ ಕರೆದಿರುವ ಈ ಸಭೆಗೆ ದಿನಾಂಕ 19 ಶುಕ್ರವಾರದಂದು ಪಟ್ಟಣದ ಎಸ್ಎನ್ ರೆಸಾರ್ಟ್ ಗೆ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ನ ನಿರ್ದೇಶಕ ಪಿಚ್ಚ ಹಳ್ಳಿ ಗೋವಿಂದರಾಜು, ಇದ್ದರು.
