




ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಶಾಸಕರು, ಕಂದಾಯ ಸಚಿವರಾದ ಕೃಷ್ಣಬೈರೇಗೌಡ ರವರ ಸಮ್ಮುಖ ದಲ್ಲಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ದಾನೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ನಾಗರಾಜ್, ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ. ಮಹೇಶ್ ಕುಮಾರ್ ನೇತೃತ್ವದಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಮುಖಂಡ, ದಾಸನಾಯಕನಹಳ್ಳಿ ಸಾಯಿ ಲಕ್ಷ್ಮೀನಾರಾಯಣ್ (ಎಸ್.ಎಲ್.ಎನ್) ಹಾಗೂ ಅವರ ಹಲವು ಬೆಂಬಲಿಗರು ಶಾಸಕರ ಗೃಹಕಚೇರಿಯಲ್ಲಿ ಬಿಜೆಪಿ ತೊರೆದು ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇದೇ ಸಂದರ್ಭದಲ್ಲಿ ಮಾರೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಚೊಕ್ಕನಹಳ್ಳಿ ನಂಜೇಗೌಡ, ಮಾಜಿ ಅಧ್ಯಕ್ಷ ಡಿ.ಎಂ.ಚೌಡಪ್ಪ, ಹೊಸಹಳ್ಳಿ ಕೃಷ್ಣಮೂರ್ತಿ, ಜಿಲ್ಲಾ ಕೆಡಿಪಿ ಸದಸ್ಯ ಬಿ.ಕೆ.ನಾರಾಯಣಸ್ವಾಮಿ (ಎಲ್.ಐ.ಸಿ.), ಯಡಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಾಂತಕುಮಾರ್, ಬ್ಯಾಟರಾಯನಪುರ ಕ್ಷೇತ್ರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶೂಕೂರ್ ಅಹಮದ್ ಖಾನ್, ಸಾತನೂರು ಮುನಿರಾಜು, ಸುಬ್ರಮಣಿ, ಬೈರೇಗೌಡ, ಮಾರೇನಹಳ್ಳಿ ವಿ.ಎಸ್.ಎಸ್.ಎನ್. ಅಧ್ಯಕ್ಷ ದಾಸನಾಯಕನಹಳ್ಳಿ ಎನ್.ಜಗದೀಶ್, ಕಾಂಗ್ರೆಸ್ ಮುಖಂಡರಾದ ಗೋಪಾಲಪುರ ಸತೀಶ್, ಅವಿನಾಶ್, ಈರೇಗೌಡ, ಜೈಕುಮಾರ್, ಡಿ.ವಿ.ಗೋಪಾಲ್, ಡಿ.ಸಿ.ಪ್ರೇಮ್ ಕುಮಾರ್, ಚಿದಾನಂದ, ದೊಡ್ಡೇಗೌಡ, ಮುನಿರಾಜು, ಮಂಜುನಾಥ್ (ಪೊಲೀಸ್), ಗ್ರಾ.ಪಂ.ಸದಸ್ಯರಾದ ರಾಹುಲ್, ಆನಂದಕುಮಾರ್, ನಂಜಪ್ಪ, ಮುರಳಿ ಸೇರಿದಂತೆ ಇನ್ನಿತರರಿದ್ದರು.