ಯಲಹಂಕ : ಅತ್ಯಾಧುನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವ ಮೂಲಕ ರಾಷ್ಡ್ರ ಮಟ್ಟದಲ್ಲಿ ಗಮನ ಸೆಳೆದಿರುವ ಯಲಹಂಕ ಕ್ಷೇತ್ರದ ಅರಕೆರೆ ಸ್ವಚ್ಛ ಸಂಕೀರ್ಣ ಘಟಕಕ್ಕೆ ಅಮೇರಿಕಾದ ಗ್ಲೋಬಲ್ ಆರ್ಗ್ಯಾನಿಕ್ ರೀಸೈಕಲ್ ಪ್ರೈ. ಲಿಮಿಟೆಡ್ ಸಂಸ್ಥೆಯ ನಿರ್ದೇಶಕಿ ಪೂಜಾ ಭೇಟಿ ನೀಡಿ, ಘಟಕದಲ್ಲಿನ ಕಸ ವಿಲೇವಾರಿ ಮಾದರಿಯನ್ನು ಪರಿಶೀಲಿಸಿದರು.

ಬೃಹತ್ ಮಟ್ಟದ ಬಯೋ ರಿಫೈನರಿ ಘಟಕ ಸ್ಥಾಪನೆಗೆ ಚಿಂತನೆ :

ಈ ವೇಳೆ ಮಾತನಾಡಿದ ಅವರು ಗ್ಲೋಬಲ್ ಆರ್ಗ್ಯಾನಿಕ್ ರೀಸೈಕಲ್ ಪ್ರೈ.ಲಿಮಿಟೆಡ್ ಸಂಸ್ಥೆಯು ಬಯೋ ರಿಫೈನರಿಗೆ ಸಂಬಂಧಿಸಿದ ಸಂಸ್ಥೆಯಾಗಿದ್ದು, 5 ಸಾವಿರ ಟನ್ ನಷ್ಟು ಕಸವನ್ನು ಒಂದೇ ದಿನದಲ್ಲಿ ವಿಲೇವಾರಿ ಮಾಡಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸುಷ್ಟು ಸಾಮರ್ಥ್ಯ ನಮ್ಮ ಸಂಸ್ಥೆ ಹೊಂದಿದೆ. ಕಸವನ್ನು ಆತ್ಯಾಧುನಿಕ ರೀತಿಯ ತಾಂತ್ರಿಕ ಉಪಕರಣಗಳ ಸಹಕಾರ ದಿಂದ ತ್ವರಿತ ಗತಿಯಲ್ಲಿ ವಿಂಗಡಿಸಿ, ಕಸದಲ್ಲಿನ ಬ್ಯಾಕ್ಟೀರಿಯಾಗಳು ಗಾಳಿಗೆ ಹರಡದಂತೆ, ವಾಸನೆಗೆ ಯಾವುದೇ ಅವಕಾಶ ವಿಲ್ಲದಂತೆ ವಿಲೇವಾರಿ ಮಾಡಿ, ಕಸದಿಂದ ಸಿಎನ್ ಜಿ ಗ್ಯಾಸ್ ಮತ್ತು ಸಾವಯವ ರಸಗೊಬ್ಬರ ತಯಾರಿಸಬಹುದಾಗಿದೆ. 5 ಸಾವಿರ ಟನ್ ಕಸದಿಂದ 285 ಟನ್ ಸಿಎನ್ ಜಿ ಗ್ಯಾಸ್ ಉತ್ಪಾದಿಸಬಹುದಾ ಗಿದ್ದು, ಇದರಲ್ಲಿ ಉತ್ಪಾದನೆಯಾಗುವ ಸಿಎನ್ ಜಿ ಗ್ಯಾಸ್ ನ್ನು ಪಿಎನ್ ಜಿ ಪೈಪ್ ಲೈನ್ ಮೂಲಕ ಸರಬರಾಜು ಮಾಡಬಹುದಾಗಿದೆ ಅಲ್ಲದೆ ಸಿಲಿಂಡರ್ ಗಳಿಗೂ ಸಹ ತುಂಬಿಸಬಹುದಾಗಿದೆ. ಇದರಿಂದ ಉತ್ಪಾದಿಸಲಾಗುವ ಸಾವಯವ ರಸಗೊಬ್ಬರ 16% ನೈಟ್ರೋಜನ್ ಹೊಂದಿರಲಿದ್ದು, ಬರಡು ಭೂಮಿಯನ್ನು ಸಹ ಉತ್ಕೃಷ್ಟ ಭೂಮಿಯನ್ನಾಗಿಸಿ ಪರಿವರ್ತನೆ ಮಾಡುವಷ್ಟು ಫಲವತ್ತತೆ ಹೊಂದಿರುತ್ತದೆ. 

ಗ್ಲೋಬಲ್ ಆರ್ಗ್ಯಾನಿಕ್ ರೀಸೈಕಲ್ ಸಂಸ್ಥೆಯ ವತಿಯಿಂದ ಈಗಾಗಲೇ ಅಮೇರಿಕಾ, ಭಾರತದ ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ  ಗಳಲ್ಲಿ ಇಂಥ ಬಯೋ ರಿಫೈನರಿ ಘಟಕಗಳನ್ನು ಸ್ಥಾಪಿಸಲು ಸಕಲ ರೀತಿಯ ಸಿದ್ಧತೆಗಳು ನಡೆದಿವೆ.5 ಸಾವಿರ ಟನ್ ಕಸವನ್ನು ಒಂದೇ ದಿನದಲ್ಲಿ ಪ್ರತ್ಯೇಕಿಸುವ ಸಾಮರ್ಥ್ಯದ ಈ ಬಯೋ ರಿಫೈನರಿ ಘಟಕ ಸ್ಥಾಪನೆಗೆ 50 ಎಕರೆಯಷ್ಟು ಜಾಗದ ಅಗತ್ಯವಿದ್ದು, ನಮಗೆ ಸರ್ಕಾರ ಭೂಮಿಯನ್ನು ಲೀಸ್ ಗೆ ದೊರಕಿಸಿ ಕೊಡುವಂತಾದರೆ ನಾವು ದೇಶದ ಪ್ರಖ್ಯಾತ ಕಂಪನಿಗಳ ಸಹಯೋಗದೊಂದಿಗೆ 300 ಕೋಟಿ ರು.ವೆಚ್ಛದ ಬಯೋ ರಿಫೈನರಿ ಘಟಕವನ್ನು ಅರಕೆರೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಸ್ಥಾಪಿಸಲು ಸಿದ್ಧರಿರು ವುದಾಗಿ ತಿಳಿಸಿದ ಅವರು ಅರಕೆರೆ ಸ್ವಚ್ಛ ಸಂಕೀರ್ಣ ಘಟಕದ ನಿರ್ವಹಣೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಸತೀಶ್ ಕಡತನಮಲೆ, ಅರಕೆರೆ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಸಿ.ಎಲ್.ಎನ್.ಗೌಡ, ಮುಖಂಡ ರಾದ ಚೊಕ್ಕನಹಳ್ಳಿ ನಾಗೇಶ್,ಅರಸೇಗೌಡ, ಮುನಿಕೃಷ್ಣಪ್ಪ, ದಿಬ್ಬೂರು ಮಧು ಸೇರಿದಂತೆ ಸ್ವಚ್ಛ ಸಂಕೀರ್ಣ ಘಟಕದ ಸಿಬ್ಬಂದಿಗಳಿದ್ದರು.

ನಗರದ ಕಸಕ್ಕೆ ಶಾಶ್ವತ ಮುಕ್ತಿ ಕಾಣಿಸುವ ಯಾವುದೇ ಯೋಜನೆಗೆ ನನ್ನ ಸಹಕಾರವಿದೆ : ಎಸ್ ಆರ್ ವಿಶ್ವನಾಥ್

ಅರಕೆರೆ ಭಾಗದಲ್ಲಿ ಬಯೋ ರಿಫೈನರಿ ಘಟಕ ಸ್ಥಾಪನೆಯ ಪ್ರಸ್ತಾಪ ಕುರಿತು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಅರಕೆರೆ ಸ್ವಚ್ಛ ಸಂಕೀರ್ಣ ಘಟಕ ಅತ್ಯುತ್ತಮ ನಿರ್ವಹಣೆಯ ಮೂಲಕ ದೇಶದ ಗಮನ ಸೆಳೆದಿದ್ದು, ಉನ್ನತ ಮಟ್ಟದ ಹಲವು ಅಧಿಕಾರಿಗಳು, ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿಗೆ ಭೇಟಿ ನೀಡಿ, ಇಲ್ಲಿನ ವ್ಯವಸ್ಥೆ ಯನ್ನು ಪರಿಶೀಲಿಸಿ, ಪ್ರಶಂಸೆಯ ಮಾತುಗಳನ್ನಾಡಿ ದ್ದಾರೆ. ಇಂದು ಅಮೇರಿಕಾದ ಗ್ಲೋಬಲ್ ಆರ್ಗ್ಯಾನಿಕ್ ರೀಸೈಕಲ್ ಪ್ರೈ.ಲಿ. ಸಂಸ್ಥೆಯ ಪ್ರತಿನಿಧಿ ಅರಕೆರೆ ಸ್ವಚ್ಛ ಸಂಕೀರ್ಣ ಘಟಕಕ್ಕೆ ಭೇಟಿ ನೀಡಿ, ಇದೇ ಭಾಗದಲ್ಲಿ ಬೃಹತ್ ಬಯೋ ರಿಫೈನರಿ ಘಟಕ ಸ್ಥಾಪಿಸಲು ಇಂಗಿತ ವ್ಯಕ್ತಪಡಿಸಿರುವುದು ಸಂತೋಷದ ಸಂಗತಿ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಕಸ ವಿಲೇವಾರಿ ಯದ್ದೇ ಬಹುದೊಡ್ಡ ಲಾಬಿಯಾಗಿದ್ದು, ನಗರದ ಕಸಕ್ಕೆ ಶಾಶತ ಮುಕ್ತಿ ಕಾಣಿಸುವ ಯಾವ ಪ್ರಯತ್ನಗಳೂ ಸಹ ನಡೆಯುತ್ತಿಲ್ಲ, ಇಂತಹ ವಿಷಮ ವೇಳೆಯಲ್ಲಿ ನಗರದ ಕಸಕ್ಕೆ ಮುಕ್ತಿ ಕಾಣಿಸುವು ದರ ಜತೆಗೆ ಯಾವುದೇ ಆವಾಂತರಗಳಿಗೂ ಎಡೆ ಮಾಡಿಕೊಡದೆ ಸಿಎನ್ ಜಿ ಗ್ಯಾಸ್ ಉತ್ಪಾದಿಸಲು ಅಮೇರಿಕಾದ ಅನಿವಾಸಿ ಭಾರತೀಯರ ಸಂಸ್ಥೆಯೊಂದು ಮುಂದೆ ಬಂದಿರು ವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ, ಬಯೋ ರಿಫೈನರಿ ಘಟಕ ಸ್ಥಾಪನೆಗೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸುವ ಕುರಿತು ಬಿಬಿಎಂಪಿ ಅಥವಾ ಸಂಬಂಧ ಪಟ್ಟ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ, ಘಟಕ ಸ್ಥಾಪನೆಗೆ ಸಹಕಾರಿಸುವಂತೆ ಸೂಚಿಸಲು ಚಿಂತನೆ ನಡೆಸಿದ್ದೇವೆ. ನಗರದ ಕಸಕ್ಕೆ ಶಾಶ್ವತ ಮುಕ್ತಿ ಕಾಣಿಸುವ ಯಾವುದೇ ಯೋಜನೆಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.

Leave a Reply

Your email address will not be published. Required fields are marked *