.


ದಾಸರಹಳ್ಳಿಯಲ್ಲಿ 9 ದಿನಗಳ ಕರಗದೇವರ ಮಹೋತ್ಸವ(ಊರಹಬ್ಬ) :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಹೆಬ್ಬಾಳ ದಾಸರಹಳ್ಳಿಯಲ್ಲಿ ಏ.23ರಿಂದ ಮೇ.1ರ ಬುಧವಾರದ ವರೆಗೆ ಗ್ರಾಮ ದೇವತೆಗಳಾದ ಕರಗದಮ್ಮ, ಚೌಡೇಶ್ವರಿದೇವಿ, ಅನ್ನಪೂರ್ಣೇಶ್ವರಿ, ವೀರಭದ್ರಸ್ವಾಮಿ ದೇವರುಗಳ ವಿಜೃಂಭಣೆಯ ಕರಗ ಮಹೋತ್ಸವ (ಊರಹಬ್ಬ) ನಡೆಯಲಿದೆ.
ಕರಗ ಮಹೋತ್ಸವದ ಪ್ರಯುಕ್ತ 23ರ ಮಂಗಳವಾರ ಕಂಬದರಾಯ ಸ್ವಾಮಿ ಪ್ರತಿಷ್ಠಾಪನೆ, ಚೌಡೇಶ್ವರಿ ದೇವಾಲಯದಲ್ಲಿ ತಳಿಗೆ, 101 ಎಡೆಗಳು ಮತ್ತು ಸಾಂಬ್ರಾಣಿ ಹಾಕುವ ಕಾರ್ಯ ನೆರವೇರಿಸ ಲಾಗಿದ್ದು, ಬುಧವಾರದಿಂದ ಭಾನುವಾರದ ವರೆಗೆ ಪ್ರತಿದಿನ ಸಂಜೆ 4.30ಕ್ಕೆ ಕಂಬದರಾಯನಿಗೆ ಹರಿಶಿನ ಶಾಸ್ತ್ರ ನೆರವೇರಿಸಲಾಗಿದೆ.
ಏ.29ರ ಸೋಮವಾರ ಬೆಳಿಗ್ಗೆ 10.30ಕ್ಕೆ ಆಂಜನೇಯ ಸ್ವಾಮಿ, ಕರಗದಮ್ಮ, ಅನ್ನಪೂರ್ಣೇಶ್ವರಿ, ವೀರಭದ್ರ ಸ್ವಾಮಿ ದೇವರುಗಳಿಗೆ ಗ್ರಾಮಸ್ಥರಿಂದ ಬೆಲ್ಲದ ಆರತಿ ನೆರವೇರಿಸಲಾಗುವುದು. ಮಂಗಳವಾರ ಬೆಳಿಗ್ಗೆ 10ರಿಂದ 5.30ರವರೆಗೆ ಕಾಟೇರಮ್ಮ, ದೊಡ್ಡಮ್ಮ, ಸಪ್ಪಲಮ್ಮ, ಕರಗದಮ್ಮ ಸೇರಿದಂತೆ ಗ್ರಾಮದ ಹಸಿರು ಗುಡಿಗಳಿಗೆ ದೀಪಾರತಿ ಸೇವೆ, ಬಲಿ ಮಹೋತ್ಸವ, ಮಹಾಮಂಗಳಾರತಿ ನೆರವೇರಿಸಲಿದ್ದು, ನಂತರ ಕರಗದಮ್ಮ ದೇವಾಲಯದಿಂದ ಚೌಡೇಶ್ವರಿದೇವಿ ದೇವಾಲಯದ ವರೆಗೆ ಕರಗ ಮಹೋತ್ಸವ ನಡೆಯ ಲಿದ್ದು, ಈ ವೇಳೆ ತಣಿಗೆಗಳು, ಆರತಿಗಳನ್ನು ತೆಗೆದು ಕೊಂಡು ಅಗ್ನಿ ಪ್ರವೇಶ, ಬಲಿ ಮಹೋತ್ಸವ, ಮಹಾ ಮಂಗಳಾರತಿ ನೆರವೇರಲಿದೆ. ಈ ವೇಳೆ ಜಗಮಗಿಸುವ ವಿದ್ಯುತ್ ದೀಪಾಲಂಕಾರದೊಂದಿಗೆ ವಿವಿಧ ಜಾನಪದ ಕಲಾತಂಡಗಳಿಂದ ನೃತ್ಯ, ಗಾಯನ ಪ್ರದರ್ಶನದ ನಡುವೆ ಗ್ರಾಮದ ವಿವಿಧ ದೇವರುಗಳ ಮೆರವಣಿಗೆ ಸಾಗಲಿದೆ. ಈ ದೈವ ಉತ್ಸವದಲ್ಲಿ ಗ್ರಾಮಸ್ಥರು ಹಾಗೂ ಕುಲಬಾಂಧವರು ಸಾಮೂಹಿಕವಾಗಿ ದೇವರಿಗೆ ದೀಪಾರತಿ ಸೇವೆ ಮಾಡಲಿದ್ದಾರೆ.
ಮೇ.1ರ ಬುಧವಾರ ಬೆಳಿಗ್ಗೆ 10.30ಕ್ಕೆ ಗ್ರಾಮದ ಮಕ್ಕಳಿಗೆ ಕರ್ಣಭೂಷಣ ಕಾರ್ಯಕ್ರಮ ಇರಲಿದ್ದು, ಸಂಜೆ 5.30ಕ್ಕೆ ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ, ರಾತ್ರಿ 8.30ಕ್ಕೆ ವಿಶೇಷ ವಾದ್ಯಗಳೊಂದಿಗೆ ಚೌಡೇಶ್ವರಿ ದೇವಿ ಮೆರವಣಿಗೆ ಏರ್ಪಡಿಸಿದ್ದು, ಈ ದೈವ ಕಾರ್ಯ ದಲ್ಲಿ ಗ್ರಾಮಸ್ಥರು, ಭಕ್ತಾದಿಗಳು ಭಕ್ತಿ ಮತ್ತು ಉತ್ಸಾಹ ಪೂರ್ವಕವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಗ್ರಾಮದ ಮುಖಂಡರು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕರಾದ ದಾ.ಕೃ.ದೇವರಾಜ್, ದಾ.ಪಿ. ಆಂಜಿನಪ್ಪ, ವಕೀಲರಾದ ಹರಿಪ್ರಸಾದ್ ಕರಗ ಮಹೋತ್ಸವ ಕುರಿತು ಮಾಹಿತಿ ನೀಡಿದ್ದಾರೆ.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ ಆರ್ ಹನುಮಂತು 98450 85793