ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಹೆಬ್ಬಾಳ ದಾಸರಹಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯ ಸಮಿತಿ, ಶ್ರೀ ಕರಗದಮ್ಮ ದೇವಾಲಯ ಸೇವಾ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಏರ್ಪಡಿಸಿದ್ದ ಗ್ರಾಮ ದೇವತೆಗಳಾದ ಕರಗದಮ್ಮ, ಚೌಡೇಶ್ವರಿದೇವಿ, ಅನ್ನಪೂರ್ಣೇಶ್ವರಿ, ವೀರಭದ್ರಸ್ವಾಮಿ ದೇವರುಗಳ ಕರಗ ಮಹೋತ್ಸವ (ಊರಹಬ್ಬ)  ಅಪಾರ ಸಂಖ್ಯೆಯ ಜನಸ್ತೋಮದ ನಡುವೆ ಮಂಗಳವಾರ ವಿಜೃಂಭಣೆ ಯಿಂದ ನೆರವೇರಿತು.

ಕರಗದ ಪ್ರಯುಕ್ತ ಗ್ರಾಮವನ್ನು  ತಳಿರು ತೋರಣ, ಜಗಮಗಿಸುವ ವಿದ್ಯತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿದ್ದು, ಏ.23ರಿಂದಲೂ ಹಲವು ದೇವತಾ ಕಾರ್ಯಗಳನ್ನು ನೆರವೇರಿಸಲಾಗಿದ್ದು, ಮಂಗಳವಾರ ಬೆಳಗಿನಿಂದ ಸಂಜೆಯವರೆಗೆ ಗ್ರಾಮ ದೇವತೆಗಳಾದ ಕಾಟೇರಮ್ಮ, ದೊಡ್ಡಮ್ಮ, ಸಪ್ಪಲಮ್ಮ, ಕರಗದಮ್ಮ ಸೇರಿದಂತೆ ಗ್ರಾಮದ ಹಸಿರು ಗುಡಿಗಳಿಗೆ ದೀಪಾರತಿ ಸೇವೆ, ಬಲಿ ಮಹೋತ್ಸವ, ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ರಾತ್ರಿ 9 ಗಂಟೆಯಿಂದ ಗ್ರಾಮದ ಕರಗದಮ್ಮ ದೇವಾಲಯದಿಂದ ಹೊರಟ ಕರಗ ಉತ್ಸವ  ಚೌಡೇಶ್ವರಿದೇವಿ ದೇವಾಲಯದ ವರೆಗೆ ಸಾಗಿತು. ಈ ವೇಳೆ ಗ್ರಾಮದ ಮಹಿಳೆಯರು ಸರ್ವಾಲಂಕಾರ ಭೂಷಿತರಾಗಿ ತಣಿಗೆಗಳು, ಆರತಿ ಗಳನ್ನು ಹೊತ್ತು ಕರಗದೊಂದಿಗೆ ಸಾಗಿದರು. ನಂತರ ಅಗ್ನಿಕುಂಡ, ಬಲಿ ಮಹೋತ್ಸವ, ಮಹಾಮಂಗಳಾರತಿ ನೆರವೇರಿಸಲಾಯಿತು. ಈ ವೇಳೆ ವಿವಿಧ ಜಾನಪದ ಕಲಾತಂಡ ಗಳಿಂದ ನೃತ್ಯ, ಗಾಯನ ಪ್ರದರ್ಶನದ ನಡುವೆ ಕರಗ ಸಾಗಿತು. 

ಈ ದೈವ ಉತ್ಸವದಲ್ಲಿ ಗ್ರಾಮಸ್ಥರು, ಕುಲಬಾಂಧವರು ಸಾಮೂಹಿಕವಾಗಿ ದೇವರಿಗೆ ದೀಪಾರತಿ ಸೇವೆ ಮಾಡಿ, ಕರಗದಮ್ಮ ಮತ್ತು ಚೌಡೇಶ್ವರಿದೇವಿ ಸೇರಿದಂತೆ ಗ್ರಾಮ  ದೇವತೆಗಳಿಗೆ ಭಕ್ತಿಯಿಂದ ನಮಿಸಿದರು, ಈ ದೈವ ಕಾರ್ಯದಲ್ಲಿ ಶ್ರೀ ಚೌಡೇಶ್ವರಿ ದೇವಾಲಯ ಸಮಿತಿ, ಶ್ರೀ ಕರಗದಮ್ಮ ದೇವಾಲಯ ಸೇವಾ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಕ್ತಿ ಮತ್ತು ಉತ್ಸಾಹ ಪೂರ್ವಕ ವಾಗಿ ಪಾಲ್ಗೊಳ್ಳುವ ಮೂಲಕ ಕರಗ ಮಹೋತ್ಸವವನ್ನು ಯಶಸ್ವಿಗೊಳಿಸಿ ದ್ದಾರೆ ಎಂದು ಗ್ರಾಮ ಮುಖಂಡರು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕರಾದ ದಾ.ಕೃ. ದೇವರಾಜ್ ಮಾಹಿತಿ ನೀಡಿದರು

Leave a Reply

Your email address will not be published. Required fields are marked *