

ದಿನಾಂಕ 21-5, 2024 ರ ಮಂಗಳವಾರ 11 ಗಂಟೆಗೆ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಇಲ್ಲಿನ ಮಹಾಮನೆ ಕನ್ನಡ ಸಂಘ ಹಾಗೂ ಶ್ರೀ ಬಸವೇಶ್ವರ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರವು ಎರ್ಪಡಿಸಿದ್ದ “ವಚನ, ಮತ್ತು ಅನುವಾದ” ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಶ್ರೀಬಸವರಾಜ ಎಲಿಗಾರ್ – – – ಡಿವೈಎಸ್ ಪಿ ಅವರು ವಚನ ಮತ್ತು ಅನುವಾದ ವಿಷಯವನ್ನು ಕುರಿತು ಭಾಷಾಂತರದ ಲಕ್ಷಣ ಸ್ವರೂಪವನ್ನು ವಿವರಿಸಿದರು. ಶ್ರೀ ರಾಜಶೇಖರ ಮಠಮತಿ ಅವರು ಕನ್ನಡಪ್ರಜ್ಞೆಯ ಮೂಲಕ ವಚನದ ಅನುಸಂಧಾನವನ್ನು ನಡೆಸುತ್ತಾ ನಡೆನುಡಿ ತತ್ತ್ವವನ್ನು ತಿಳಿಸಿದರು. ಶ್ರೀ ಸಂಗಮೇಶ ಗೌಡಪ್ಪನವರ್ ಅವರು ವಚನ ಮತ್ತು ಪ್ರಸ್ತುತತೆ ವಿಷಯವನ್ನು ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀಎಸ್ ಎಸ್ ದೊಡ್ಡಣ್ಣವರ ಅವರು ವಿಚಾರ ಸಂಕಿರಣವನ್ನು ವಿವರವಾಗಿ ವಚನದ ಮೂಲಕ ಚರ್ಚಿಸಿದರು. ಡಾ. ಶೀಲಾದೇವಿ ಎಸ್ ಮಳೀಮಠ ಪ್ರಾಂಶುಪಾಲರು ಪ್ರಾಸ್ತಾವಿಕ ನುಡಿಗಳ ಮೂಲಕ ವಚನ ತತ್ತ್ವವನ್ನು ವಿವರಿಸಿ ವಿಚಾರ ಸಂಕಿರಣದ ದಿಕ್ಸೂಚಿ ನುಡಿಗಳನ್ನು ಸಭೆಗೆ ತಿಳಿಸಿದರು – ಸಂಚಾಲಕರಾದ ಶ್ರೀಗಿರೀಶ ಪಿ ಎಚ್ – – ಶ್ರೀ ಗಿರೀಶ ವೈ-ವಿದ್ಯಾರ್ಥಿ ಮಿತ್ರರು.. ಪ್ರಾರ್ಥನೆ ಗೀತೆಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶರಣು ಸೊರಭ ಹಾಗೂ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮಂಜುನಾಥ ಹೆಚ್ ಇವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.