
: ದಿನಾಂಕ 26-5 – 2024 ರ ಭಾನುವಾರ 11.00 ಗಂಟೆಗೆ ಕನ್ನಡಯುವ ಜನಸಂಘ ವಿಲ್ಸನ್ ಗಾರ್ಡನ್ ಬೆಂಗಳೂರು ಇಲ್ಲಿ ಪ್ರಕೃತಿ ಕಲಾ ವೇದಿಕೆ ಹಾಗೂ ವಿಶ್ವ ಚೇತನ ಬಳಗ ಸಾಂಸ್ಕೃತಿಕ ಸಂಘಟನೆಗಳು ಆಯೋಜಿಸಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ “ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಕ್ಕೆ ಎಸ್ ಪಿ ಬಾಲಸುಬ್ರಹ್ಮಣ್ಯಂ ರವರ ಕೊಡುಗೆ” ವಿಷಯವನ್ನು ಕುರಿತು ವಿಷಯ ಮಂಡಿಸಿದ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಬೆಂಗಳೂರು ಇಲ್ಲಿನ ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳೀಮಠರವರ ವಿಚಾರಧಾರೆಗೆ ಕೇಳುಗರು ಭಾವಪರವಶರಾದರು. ಎಸ್ ಪಿ ಬಾಲಸುಬ್ರಹ್ಯಣ್ಯಂ ರವರ ಗಾಯನಕ್ಕೆ ನಟ ನಟಿಯರು ಅಭಿನಯಿಸುವುದು ಸವಾಲಾಗಿತ್ತೆಂದು, ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಗಾಯನ ಜಂಗಮ ಎಂದು ವಿಚಾರ ಮಂಡಿಸಿದರು. ಕನ್ನಡಯುವ ಜನಸಂಘದ ಅಧ್ಯಕ್ಷರೂ ಶ್ರೀಜಗದೀಶ ರೆಡ್ಡಿಯವರು – ಶ್ರೀನಾಗಭೂಷಣರವರು – ಅಧ್ಯಕ್ಷರು ಪ್ರಕೃತಿ ಕಲಾ ವೇದಿಕೆ ಹಾಗೂ ಅಧ್ಯಕ್ಷರು ವಿಶ್ವಚೇತನ ಬಳಗದ ಶ್ರೀಶಿವಸ್ವಾಮಿಯವರು ಶ್ರೀ ಜರಗನಹಳ್ಳಿ ಸದಾಶಿವಯ್ಯನವರು ಉಪಸ್ಥಿತರಿದ್ದರು. ಸಹ ವಿಚಾರ ಮಂಡನೆಗಾಗಿ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಅಂಬಿಕಾ ಹಾಗೂ ಶ್ರೀಮತಿ ವಸಂತ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.