











ಯಲಹಂಕ ಸುದ್ದಿ.
ದಿನಾಂಕ 11-06-24 ರಂದು ವೀ ಕಮ್ಯುನಿಟಿ ಸಹಯೋಗದೊಂದಿಗೆ ಮತ್ತು ಆನಂದ್ ಲ್ಯಾಬ್ ಇವರ ವತಿಯಿಂದ ನಡೆದ ಪ್ರೋತ್ಸಾಹ 24 ಕಾರ್ಯಕ್ರಮವು ಯಲಹಂಕ (NES ) ಹತ್ತಿರ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದಂತಹ ಶ್ರೀ ಎಸ್ ಆರ್ ವಿಶ್ವನಾಥ್ ಮಾನ್ಯ ಶಾಸಕರು ಯಲಹಂಕ ವಿಧಾನಸಭಾ ಕ್ಷೇತ್ರ, ಕಾರ್ಯಕ್ರಮ ಉದ್ಘಾಟನೆಯನ್ನು ಮಾಡಿದರು, ಜೊತೆಗೆ ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಮೇಡಂ ರವರ ಆದಂತಹ ಡಾ. ಗೀತಾ ಎನ್ ಮೇಡಂ ರವರು ಹಾಗೂ ನ್ಯೂರೋಬರ್ಗ್ ಆನಂದ್ ಲ್ಯಾಪ್ ಸಂಸ್ಥೆಯ ವೈಸ್ ಪ್ರೆಸಿಡೆಂಟ್ ಅವರಾದ ಶ್ರೀಮತಿ ಎಲಿಜಿಬೆತ್ ಮೇಡಂ ರವರು ಹಾಗೂ ವೀ ಕಮ್ಯುನಿಟಿ ಫೌಂಡರ್ ಆದಂತಹ ಶ್ರೀಮತಿ ಶೈಲಜಾ ವೆಂಕಟ್ ಮೇಡಂ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಈ ಕಾರ್ಯಕ್ರಮದಲ್ಲಿ ಆನಂದ ಲ್ಯಾಬ್ ಅವರ ಸುವರ್ಣ ಕಾರ್ಡ್ ಲಾಂಚಿಂಗ್ ಹಾಗೂ ಬಿಬಿಎಂಪಿ ಪೌರಕಾರ್ಮಿಕರಿಗೆ ಸುವರ್ಣ ಕಾರ್ಡ್ ವಿತರಣೆ ಮತ್ತು ಬಿಬಿಎಂಪಿ ಪೌರ ಕಾರ್ಮಿಕರ ಮಕ್ಕಳಿಗೆ, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಶ್ರೀ ಸಿಂಗಂ ರವಿಪ್ರಸಾದ್ ಸರ್ ರಿಟೈರ್ಡ್ ಡಿಸ್ಟ್ರಿಕ್ಟ್ ಎಜುಕೇಶನ್ ಆಫೀಸರ್ ರವರಿಂದ ಮಕ್ಕಳಿಗೆ ಸನ್ಮಾನಿಸಲಾಯಿತು. ಹಾಗೂ ಬಿಬಿಎಂಪಿ ಪೌರ ಕಾರ್ಮಿಕರಿಗೆ ಚಿಕ್ಕ ಕಿರು ಕಾಣಿಕೆಯನ್ನು ನೀಡಲಾಯಿತು, ಜೊತೆಗೆ ಹೆಲ್ತ್ ಚೆಕಪ್ ಕೂಡ ನಡೆಸಲಾಯಿತು, ಮತ್ತು ಶೂನ್ಯ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಈ ಸುಹಾಸಿನಿ ಮೇಡಂ ರವರು ವಿಶೇಷ ಉಪನ್ಯಾಸವನ್ನು ನೀಡಿ ಜಾಗೃತಿಯನ್ನು ಮೂಡಿಸಿದರು, ಕಾರ್ಯಕ್ರಮದಲ್ಲಿ ವಿಶೇಷ ನೃತ್ಯ, ಗೀತೆ, ನಾಟಕ, ಜನಜಾಗೃತಿ ಕಾರ್ಯಕ್ರಮಗಳನ್ನು ನಿರ್ವಹಿಸಲಾಯಿತು ಈ ಒಂದು ಕಾರ್ಯಕ್ರಮದಲ್ಲಿ ಯಲಹಂಕ ವಾರ್ಡ್ ಪೌರಕಾರ್ಮಿಕರಿಗೆ ಅಭಿನಂದಿಸಲಾಯಿತು. ಮಕ್ಕಳ ಅಣ್ಣಯ್ಯ ಅಣ್ಣಯ್ಯ ಬಾರೋ ನೃತ್ಯ ಬಹಳ ಚೆನ್ನಾಗಿ. ಮೂಡಿಬಂತುಕಾರ್ಯಕ್ರಮ ಬಹಳ ಅದ್ದೂರಿಯಾಗಿ ಮೂಡಿಬಂದಿತ್ತು ಈ ಕಾರ್ಯಕ್ರಮದಲ್ಲಿ ಯಲಹಂಕ G F G C ವಿದ್ಯಾರ್ಥಿಗಳು ಜೊತೆಗೂಡಿ ಉತ್ತೇಜನ ನೀಡಿದರು. ಅನೇಕ. ಗಣ್ಯರು ಭಾಗವಹಿಸಿ ಯಶಸ್ವಿಯಾಗಲು ಕಾರಣರಾದರು ಮುಂದಿನ ದಿನಗಳಲ್ಲಿ ಇದೇ ರೀತಿ ಇನ್ನು ಹೆಚ್ಚಿನ ಕಾರ್ಯಕ್ರಮಗಳು ಮಾಡಿ ನಮ್ಮಿಂದ. ಎಷ್ಟು ಸಾಧ್ಯವಾದಷ್ಟು ಪ್ರಯತ್ನ ಪಡುತ್ತೇನೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಶ್ರೀಮತಿ ಶೈಲಜಾ ವೆಂಕಟ್ ಮೇಡಂ ರವರು ನುಡಿದರು