ಸಮರ್ಪಕ ರೀತಿಯಲ್ಲಿ ತ್ಯಾಜ್ಯ ನಿರ್ವಹಿಸಿ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಕರೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತ್ಯಾಜ್ಯ ನಿರ್ವಹಣೆ ಕುರಿತ ಜಾಗೃತಿ ಕಾರ್ಯಕ್ರಮವನ್ನು ಗ್ರಾ.ಪಂ.ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ ‘ಬೆಟ್ಟಹಲಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶೇ 90% ರಷ್ಟು ಭಾಗ ಘನ ತ್ಯಾಜ್ಯ ನಿರ್ವಹಣೆಯಾಗಿದೆ, ಮುಂದೆಯು ಸಹ ಇದೇ ರೀತಿ ಸಮರ್ಪಕ ರೀತಿಯಲ್ಲಿ ನಿರ್ವಹಣೆಯಾಗಲಿದೆ. ಆದರೆ ಘನ ತ್ಯಾಜ್ಯದ ಸಮರ್ಪಕ ನಿರ್ವಹಣೆಯ ಬಗ್ಗೆ ಹಲವು ಜಾಗೃತಿ ಕಾರ್ಯಕ್ರಮ ಗಳನ್ನು ಆಯೋಜಿಸಿ, ಅರಿವು ಮೂಡಿಸಿದರೂ, ಈ ಕುರಿತು ಪದೇ ಪದೇ ಹೇಳುತ್ತಿದ್ದರೂ ಸಹ ನಾಗರಮಾಡಬಅರ್ಥ ಮಾಡಿಕೊಳ್ಳ ದಿರುವ ಬಗ್ಗೆ ಚಿಕ್ಕದೊಂದು ಬೇಸರವಿದೆ. ಪರಿಸರ ಸ್ವಚ್ಛತೆಯಲ್ಲಿ ತ್ಯಾಜ್ಯ ನಿರ್ವಹಣೆಯ ಪಾತ್ರ ಬಹಳ ದೊಡ್ಡದಿದ್ದು, ತ್ಯಾಜ್ಯ ನಿರ್ವಹಣೆ ಹೆಚ್ಚು ಸಮರ್ಪಕವಾದಷ್ಟು ಪರಿಸರ ಹೇಚ್ಚು ಸ್ವಚ್ಛವಾಗುತ್ತದೆ. ಇದನ್ಮು ಮನಗಂಡು ಜನತೆ ಸ್ವಚ್ಛ ಪರಿಸರದ ಸಂಕಲ್ಪ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಹಸ್ ಸಂಸ್ಥೆಯವರು ಸುಸ್ಥಿರ ಘನ ತ್ಯಾಜ್ಯ ನಿರ್ವಹಣೆ ಕುರಿತು ದೃಶ್ಯಾವಳಿಗಳ ಮೂಲಕ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ.
ಉಪಾಧ್ಯಕ್ಷೆ ವಿಮಲಾ ಗಣೇಶ್, ಸದಸ್ಯರಾದ ಬಿ.ಆರ್.ರಾಮಾಂಜಿನಿ, ಬಿ.ವೈ.ಮಂಜುನಾಥ್, ರತ್ನಮ್ಮ ಆಂಜಿನಪ್ಪ, ಹೇಮಾವತಿ ನಾಗರಾಜ್, ತುಳಸಮ್ಮ ವೆಂಕಟರಮಣಪ್ಪ, ಸಾವಿತ್ರಮ್ಮ ಮುನಿರಾಜು, ಸುವರ್ಣ ಜಯಣ್ಣ, ಮಮತಾ ಪ್ರಶಾಂತ್, ಪ್ರೇಮ, ಮುನಿಕಷ್ಣ, ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಅಮರಯ್ಯ, ಡಿಐಇಸಿ ನವೀನ್ ಬಾಬು ಎನ್., ಪಿಡಿಓ ಗಳಾದ ಲೋಕನಾಥ್, ಮಮತಾ, ಟಿ.ಪಿ.ಸುಮ, ಕಾರ್ಯದರ್ಶಿ ಗಳಾದ ಸುಬ್ರಮಣಿ, ಈರೇಗೌಡ, ಗಣಪತಿ ಹೆಗಡೆ ಸೇರಿದಂತೆ ಇನ್ನಿತರರಿದ್ದರು.

