ನಾಡಪ್ರಭು ಕೆಂಪೇಗೌಡರ ನಗರ ಯೋಜನೆ ಎಂದೆಂದಿಗೂ ಮಾದರಿ : ಎಸ್ ಆರ್ ವಿಶ್ವನಾಥ್

ಯಲಹಂಕ : ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಕೆರೆಗಳ ನಿರ್ಮಾಣ, ವ್ಯಾಪಾರಸ್ಥರಿಗಾಗಿ ಪ್ರತ್ಯೇಕ ಪೇಟೆಗಳ ನಿರ್ಮಾಣ, ಶತೃಗಳ ದಾಳಿಯ ನಿಗಾ ವಹಿಸಲು ನಗರದ ನಾಲ್ಕೂ ದಿಕ್ಕುಗಳಲ್ಲಿ ಕಾವಲು ಗೋಪುರಗಳ ನಿರ್ಮಾಣ ಹೀಗೆ  ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ನಗರ ಯೋಜನೆ  ಇಂದಿಗೂ, ಎಂದೆಂದಿಗೂ ಮಾದರಿಯಾಗಿ ಉಳಿಯುತ್ತದೆ ಎಂದು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ತಿಳಿಸಿದರು.

ನಾಡಪ್ರಭು ಕೆಂಪೇಗೌಡರ 515 ನೇ ಜಯಂತೋತ್ಸವದ ಪ್ರಯುಕ್ತ ಯಲಹಂಕದ ಮಿನಿ ವಿಧಾನಸೌಧದ ಬಳಿಯಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ‘ಕರುನಾಡಿನ ರಾಜಧಾನಿ ಬೆಂಗಳೂರು ನಗರವನ್ನು ನಿರ್ಮಿಸಿ ಲಕ್ಷಾಂತರ ಜನ  ಬದುಕು ರೂಪಿಸಿ ಕೊಳ್ಳಲು ದಾರಿದೀಪವಾದ ಮಹಾನ್ ಚೇತನ ನಾಡಪ್ರಭು ಕೆಂಪೇಗೌಡರು. ಕೃಷಿ, ಕಲೆ, ನಮ್ಮ ನಾಡಿನ ಪರಂಪರೆಗೆ ವಿಶೇಷ ಗೌರವ ನೀಡಿ ಪೋಷಿಸಿದ ಕೆಂಪೇಗೌಡರು ನಮ್ಮ ಯಲಹಂಕದವರು ಎಂಬುದು ಹೆಮ್ಮೆಯ ಸಂಗತಿ. 

500 ವರ್ಷಗಳ ಹಿಂದೆಯೇ ಬೆಂಗಳೂರು ನಗರದ ಬೆಳವಣಿಗೆಯ ಬಗ್ಗೆ ಅರಿತಿದ್ದ ಕೆಂಪೇಗೌಡರು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಗರವನ್ನು ನಿರ್ಮಿಸಿ ದ್ದರು. ಪ್ರತಿ ವ್ಯಾಪಾರಸ್ಥರು, ಉದ್ಯೋಗಸ್ಥರಿಗೆ ಸಮುದಾಯ ವಾರು ಪೇಟೆಗಳನ್ನು ನಿರ್ಮಿಸುವ ಮೂಲಕ ಅಂದಿನ ದಿನಗಳಲ್ಲೇ ಎಲ್ಲಾ ಸಮುದಾಯ ಗಳನ್ನೂ ಸಮಾನ ಗೌರವದಿಂದ ನೋಡಿದ್ದ ಕೆಂಪೇಗೌಡರ ನಡೆ ಎಂದೆಂದಿಗೂ ಆದರ್ಶಪ್ರಾಯ ವಾದುದು. ಇಂತಹ ಮಹಾನ್ ಚೇತನರ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕಿನಲ್ಲಿ ಮುನ್ನಡೆಯುವುದು ನಾವು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದರು.

ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಅಂಗವಾಗಿ ಯಲಹಂಕ ಮಿನಿವಿಧಾನ ಸೌಧದಿಂದ ಕೋಗಿಲು ವೃತ್ತದವರೆಗೆ ಬೆಳ್ಳಿರಥದಲ್ಲಿ ಕೆಂಪೇಗೌಡರ ಕಂಚಿನ ಪುತ್ತಳಿ ಯಿಟ್ಟು, ಅದ್ಧೂರಿ ಮೆರವಣಿಗೆ ಯಲ್ಲಿ ಸಾಗುವ ಮೂಲಕ ಸಂಭ್ರಮ ಆಚರಿಸಲಾಯಿತು.

ಮೆರವಣಿಗೆಯಲ್ಲಿ ಕೆಂಪೇಗೌಡರ ವೇಶ ಧರಿಸಿದ್ದ ಆರ್ ಎಸ್ ಎಸ್ ಸ್ವಯಂಸೇವ, ಯಲಹಂಕ ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಾರಿರಾಮು ಗಮನ ಸೆಳೆದರು.

ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್ ಎನ್ ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ಯಲಹಂಕ ಗ್ರಾಮಾಂತರ ಮಂಡಲ ಅಧ್ಯಕ್ಷ ಎಚ್ ಬಿ ಹನುಮಯ್ಯ, ಯಲಹಂಕ ನಗರ ಮಂಡಲ ಅಧ್ಯಕ್ಷ ಎಂ. ಸತೀಶ್, ಪ್ರಧಾನ ಕಾರ್ಯದರ್ಶಿ ಮುರಾರಿರಾಮು, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಿ.ಜೆ.ಮೂರ್ತಿ, ಯಲಹಂಕ ಗ್ರಾ.ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ. ರಾಜೇಶ್, ಕೆಂಪೇಗೌಡ ವಾರ್ಡ್ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ, ಚೌಡೇಶ್ವರಿ ವಾರ್ಡ್ ಬಿಜೆಪಿ ಮುಖಂಡ ವಿ.ವಿ.ರಾಮಮೂರ್ತಿ ಸೇರಿದಂತೆ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *