

ಯಲಹಂಕ : ಯಲಹಂಕ ಕ್ಷೇತ್ರದ ಹಿರಿಯ ಬಿಜೆಪಿ ಮುಖಂಡ, ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ, ಬೆಂಗಳೂರು ಡೈರಿ ಮತ್ತು ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದಿಬ್ಬೂರು ಜಯಣ್ಣನವರ ಜನ್ಮದಿನದ ಪ್ರಯುಕ್ತ ಅವರ ಸ್ವಗೃಹದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಸೇರಿದಂತೆ ಹಲವು ಗಣ್ಯರು ದಿಬ್ಬೂರು ಜಯಣ್ಣ ನವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.
ದಿಬ್ಬೂರು ಜಯಣ್ಣ ಅವರ ಧರ್ಮಪತ್ನಿ ಶೈಲಜಾ ಜಯಣ್ಣ ಮತ್ತು ಸಹೋದರ ರಾಷ್ಟ್ರೀಯ ಕಿಸಾನ್ ಸಂಘಟನೆಯ ರಾಜ್ಯಾಧ್ಯಕ್ಷ ದಿಬ್ಬೂರು ವಿಜಯಕುಮಾರ್ ಈ ಮೂವರ ಜನ್ಮದಿನ ಒಂದೇ ದಿನ(ಆಗಸ್ಟ್,2) ಇರುವುದು ಅಪರೂಪದಲ್ಲಿ ಅಪರೂಪ. ಕೋಟಿಗೊಬ್ಬರಿಗೂ ಸಹ ಇಂತಹ ಅಪೂರ್ವ ಜನ್ಮದಿನದ ಅವಕಾಶ ದೊರೆಯದಿರುವುದು ಇವರ ಜನ್ಮದಿನದ ವಿಶೇಷತೆಯಾಗಿದೆ.
ಜನ್ಮದಿನದ ಶುಭ ಹಾರೈಸಿದ ನಂತರ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ದಿಬ್ಬೂರು ಜಯಣ್ಣ ಮತ್ತು ನಮ್ಮದು ಸಹೋದರರ ರೀತಿಯ ಸ್ನೇಹ, ದಶಕಗಳಿಂದ ನಮ್ಮೊಂದಿಗೆ ಯಲಹಂಕ ಕ್ಷೇತ್ರದಲ್ಲಿ ಬಿಜೆಪಿ ಕಟ್ಟಾಳುವಾಗಿ ಬಿಜೆಪಿ ಪಕ್ಷವನ್ನು ಕಟ್ಟಿದ ಛಾತಿ ಅವರದ್ದು. ಒಳ್ಳೆಯ ಸ್ನೇಹ, ಉತ್ತಮ ಸಂಬಂಧ, ಬಾಂಧವ್ಯಗಳಿಗೆ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಬೇಕಿಲ್ಲ, ಒಳ್ಳೆಯ ಮನಸ್ಸಿರಬೇಕು. ಹಿಂದೆ, ಇಂದು, ಮುಂದೆಯೂ ಸಹ ನಮ್ಮ ಮತ್ತು ಜಯಣ್ಣನವರ ಸಂಬಂಧ ಹೀಗೆಯೇ ಇರುತ್ತದೆ, ಈ ಬಗ್ಗೆ ಸಂದೇಹಕ್ಕೆ ಅವಕಾಶವೇ ಇಲ್ಲ. ಬೆಂಗಳೂರು ಡೈರಿ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಮತ್ತು ಯಲಹಂಕ ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಗಳಿಸಿರುವ ದಿಬ್ಬೂರು ಜಯಣ್ಣ, ಅವರ ಶ್ರೀಮತಿ ಶೈಲಜಾ ಜಯಣ್ಣ, ಸಹೋದರ ರಾಷ್ಟ್ರೀಯ ಕಿಸಾನ್ ಸಂಘಟನೆಯ ರಾಜ್ಯಾಧ್ಯಕ್ಷ ದಿಬ್ಬೂರು ವಿಜಯಕುಮಾರ್ ರವರಿಗೆ ಈ ಶುಭ ಸಂದರ್ಭದಲ್ಲಿ ದೇವರು ಆಯುರಾರೋಗ್ಯ, ಸಂಪತ್ತು, ಸಮೃದ್ಧಿಯನ್ನು ಕರುಣಿಸಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿಬಿಜೆಪಿ ಮುಖಂಡರಾದ ಬ್ಯಾಲಕೆರೆ ವೆಂಕಟೇಶ್, ಅರಕೆರೆ ವಸಂತ್, ಕೆ.ಸಿ.ಬಾಬು, ಕಿರಣ್ ಕುಮಾರ್,ಯುವ ಮುಖಂಡ ಸಾದೇನಹಳ್ಳಿ ಪ್ರಕಾಶ್ ಗೌಡ ಸೇರಿದಂತೆ ಇನ್ನಿತರರಿದ್ದರು.
ಚಿತ್ರಸುದ್ದಿ : ದಶಕಗಳ ಹಿಂದೆ ಬಿಜೆಪಿ ಪಕ್ಷ ಸಂಘಟನೆಗಾಗಿ ಕ್ಷೇತ್ರ ಪರ್ಯಟನೆ ಮಾಡುವ ವೇಳೆ ಕಾರ್ಯಕರ್ತ ರೊಬ್ಬರ ಮನೆಯಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವ ಎಸ್ ಆರ್ ವಿಶ್ವನಾಥ್, ದಿಬ್ಬೂರು ಜಯಣ್ಣ.