ವರದಿ: ಮುಬಷೀರ್ ಅಹಮದ್

ಚಿಕ್ಕಬಳ್ಳಾಪುರ: ಯಸ್ವಂತ್ ಅಕಾಡೆಮಿ ಆಫ್ ಕಲ್ಚರಲ್ ಫಿಲಂ ಸೈನ್ಸಸ್ ಅಂಡ್ ರೀಸರ್ಚ್ ಇನ್ಸ್ಟಿಟ್ಯೂಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು
ಇವರ ಸಹಯೋಗ ದಿಂದ ಸಾಂಸ್ಕೃತಿಕ ಸುಗ್ಗಿ ಮತ್ತು ಸಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಶನಿವಾರ ಡಾ.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ಕೆ.ಪಿ.ಬಚ್ಚೆಗೌಡ,
ಹೈ ಕೋರ್ಟ್ ವಕೀಲ ಪಾವಗಡ ಶ್ರೀರಾಮ್, ಅಭಿಲಾಷ್.ಕೆ.ವಿ. ವಕೀಲರು, ಮಾಜಿ ಜಿಲ್ಲಾ
ಪಂಚಾಯತಿ ಸದ್ಯಸ ಕೆ.ಸಿ. ರಾಜಕಾಂತ್, ಹೈ ಕೋರ್ಟ್ ವಕೀಲರು ಅಪರ್ಣ,ಯಸ್ವಂತ್ ಅಕಾಡೆಮಿ ಆಫ್ ಕಲ್ಚರಲ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಹಾಗೂ ನೃತ್ಯ ನಿರ್ದೇಶಕರು ಮಂಚನಬಲೆ ಡ್ಯಾನ್ಸ್ ಶ್ರೀನಿವಾಸ್,ವೆಂಕಟರಮಣಪ್ಪ ದೀಪಾ ಬೆಳಗಿಸಿ ಉದ್ಘಾಟಿಸಿದರು.
ಮಾಜಿ ಶಾಸಕ ಕೆಪಿ ಬಚ್ಚೇಗೌಡ ಮಾತನಾಡಿ ಮಂಚನಬಲೆ ಶ್ರೀನಿವಾಸ್ ರವರು ತುಂಬಾ ಹಳೆಯ ಕಲಾವಿದರಲ್ಲಿ ಒಬ್ಬರಾಗಿದ್ದು ಕಲಾವಿದರ ನೋವು ನಲುವಿಗಳನ್ನ ನೋಡಿ ನಂತರ ಅವರಿಗೆ ವೇದಿಕೆಗಳನ್ನ ಸೃಷ್ಟಿ ಮಾಡುವುದರಲ್ಲಿ ತುಂಬಾ ಪರಿಣಿತರಾಗಿದ್ದಾರೆ ಇದಲ್ಲದೆ ಸಮಾಜದ ಅಭಿವೃದ್ಧಿ ಪಡಿಸುವಲ್ಲಿ ಶ್ರೀನಿವಾಸ್ ಮತ್ತು ತಂಡದವರ ಪಾತ್ರ ತುಂಬಾ ಅಮೂಲ್ಯವಾದದ್ದು ಇವರ ಸಂಸ್ಥೆಯು ಒಳ್ಳೆ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾರೆ ಎಂದು ತಿಳಿಸಿದರು.ಇಂದಿನ ಕಾರ್ಯಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿ ಶ್ರೀನಿವಾಸ್ ರವರನ್ನ ಶ್ಲಾಘಿಸಿದರು.

ಹೈ ಕೋರ್ಟ್ ವಕೀಲರು ಪಾವಗಡ ಶ್ರೀರಾಮ್ ಮಾತನಾಡಿ ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ಕೊಡ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಮಂಚನಬಲೆ ಶ್ರೀನಿವಾಸ್ ಇಂತಹ ಮೂಲಭೂತ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದೆ ಬಂದಿರುವುದು ಅಭಿನಂದನೆ ಹಾಗೂ ಶ್ಲಾಘನೀಯ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಕಾಂತ್ ಮಾತನಾಡಿ ವರ್ಷಕ್ಕೆ ನಾಲ್ಕರು ಕಾರ್ಯಕ್ರಮಗಳನ್ನ ಆಯೋಜಿಸತ್ತ ಉತ್ತಮ ಸಮಾಜ ಸೇವೆ ಶ್ರೀನಿವಾಸ್ ಮಾಡುತ್ತಿದ್ದು ಇಂದು ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಸನ್ಮಾನ ಮಾಡಿ ಅಭಿನಂದನೆಯನ್ನು ಸಲ್ಲಿಸಿ ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದ ಈ ಸಂಸ್ಥೆಯು ಇನ್ನು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ
ಕಲಾ ತಂಡಗಳಾದ ಮಮತ ಮತ್ತು ತಂಡ, ಭರತನಾಟ್ಯ ಮಹಾಲಿಂಗಯ್ಯ ಮತ್ತು ತಂಡ ,ಸುಗಮ ಸಂಗೀತ, ಸಾಮಾಜಿಕ ನಾಟಕ ವೇಣು ಮತ್ತು ತಂಡ ,ಜಾನಪದ ನೃತ್ಯ ಗಂಗಾಧರ್ ಮತ್ತು ತಂಡ ,ಜಾನಪದ ಗಾಯನ ಗಂಗರಾಜು ಮತ್ತು ತಂಡ ಬಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆ ಸೊಸು ನಾಗೇಂದ್ರನಾಥ್ ನೆರವೇರಿಸಿದರು. ಆಶಯ ನುಡಿ ಅಭಿಲಾಷ್, ಯಸ್ವಂತ್ ಸಂಸ್ಥೆಯ ಕಾರ್ಯದರ್ಶಿ ರಾಮಾಲಕ್ಷ್ಮಮ್ಮ ,ಖಜಾಂಚಿ ನಾರಾಯಣಸ್ವಾಮಿ ಮತ್ತು ಇತರರು ಹಾಜರಿದ್ದರು.

ಬಾಕ್ಸ್….

ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ಮುಖ್ಯ ನಮ್ಮ ಸಂಸ್ಥೆ ಕಳೆದ 16 ವರ್ಷಗಳಿಂದ ಈ ಕಾರ್ಯವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಈ ವರ್ಷವೂ ಕೂಡ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಅಭಿನಂದನೆ ಪ್ರೋತ್ಸಾಹ ಧನ ಮತ್ತು ಸನ್ಮಾನ ಮಾಡಿ ಅಭಿನಂದನೆಯನ್ನು ಸಲ್ಲಿಸಲಾಗಿದೆ ಇದಲ್ಲದೆ ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಮಾಡಿದ್ದೇವೆ.

ಮಂಚನಬಲೆ.ಎಂ ಶ್ರೀನಿವಾಸ್ ಅಧ್ಯಕ್ಷರು ಯಶ್ವಂತ್ ಅಕಾಡೆಮಿ ಆಫ್ ಕಲ್ಚರಲ್ ಫಿಲಂ ಸೈನ್ಸಸ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ಚಿಕ್ಕಬಳ್ಳಾಪುರ.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು

9845085793

7349337989

9035282296

Leave a Reply

Your email address will not be published. Required fields are marked *