ಸೇವಾ ಸಮಿತಿಯ ವತಿಯಿಂದ ಸಿಂಧಿ ಪದವಿ ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ ಶಿಕ್ಷಕ ದಿನಾಚರಣೆಯಲ್ಲಿ ಈ ವಿದ್ಯಾ ಸಂಸ್ಥೆಯ ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ 15 ವರ್ಷ ಹಿಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಡಾ. ವಿಜಯಕುಮಾರ್ ಸೂರ್ಯವಂಶಿ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾಗಿ 28 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಇವರು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಿಂದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಾಗೆಯೇ ಕರ್ನಾಟಕ ಮಹಿಳಾ ಸಮಿತಿ, ಚಾಮರಾಜಪೇಟೆ, ಬೆಂಗಳೂರು, ಇವರು ಪಂಡಿತ್ ರಾಮೇಶ್ವರ ದಯಾಳ್ ದುಬೆ ಬಿರುದು ನೀಡಿ ಇವರನ್ನು ಗೌರವಿಸಿದ್ದಾರೆ. ಮಹಾತ್ಮ ಗಾಂಧಿ ರಾಜ ಭಾಷಾ ಹಿಂದಿ ಪ್ರಚಾರ ಸಂಸ್ಥಾ, ಪುಣೆ ಇವರು ಅಖಿಲ್ ಭಾರತೀಯ ರಾಜ ಭಾಷಾ ಹಿಂದಿ ಸವಿ ಸಮ್ಮಾನ್ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದಾರೆ. ಹಿಂದಿ ಸೇವಾ ಸಮಿತಿಯ ವತಿಯಿಂದ ಇವರಿಗೆ ಹಾರ್ದಿಕ ಶುಭಾಶಯಗಳು ಸಲ್ಲುತ್ತವೆ.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು

,9845085793

7349337989

Leave a Reply

Your email address will not be published. Required fields are marked *