ಯಲಹಂಕ : ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾಗಿದ್ದ ಯಲಹಂಕ ಕ್ಷೇತ್ರದ ಶಿವಕೋಟೆ ಗ್ರಾ.ಪಂ‌.ಅಧ್ಯಕ್ಷ ಮತ್ಕೂರು ಗ್ರಾಮದ ಎಚ್.ಸಂಜೀವಯ್ಯ ಗುರುವಾರ ತಮ್ಮ ಅಧ್ಯಕ್ಷ ಸ್ಥಾನದ ಪದಗ್ರಹಣ ಮಾಡಿದರು.

ನಂತರ ಮಾತನಾಡಿದ ಅವರು ‘ಶಾಸಕ ಎಸ್ ಆರ್ ವಿಶ್ವನಾಥ್ ರವರ ಸಲಹೆ, ಸಹಕಾರ ಮತ್ತು ಗ್ರಾ.ಪಂ‌.ಯ 18 ಜನ ಸದಸ್ಯರ ಬೆಂಬಲದಿಂದಾಗಿ ಅವಿರೋಧವಾಗಿ ಅಧ್ಯಕ್ಷರಾಗಲು ಸಾಧ್ಯವಾಗಿದೆ. ನನಗೆ ಅಧ್ಯಕ್ಷ ಸ್ಥಾನದ ಪದವಿ ದೊರೆಯುವಲ್ಲಿ ಹಲವು ಜನ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ್ದಾರೆ, ಪದಗ್ರಹಣ ಸಮಾರಂಭದ ಈ ಶುಭ ವೇಳೆಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ತಿಳಿಸಲಿಚ್ಚಿಸುತ್ತೇನೆ.

ಗ್ರಾಮ ಪಂಚಾಯತಿ ಯಲ್ಲಿ ಅನುದಾನದ ಕೊರತೆಯಿದೆ ಆದರೂ ಲಭ್ಯವಿರುವ ಅನುದಾನದಲ್ಲೇ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿಗೆ ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಅಭಿವೃದ್ಧಿ ಕಾರ್ಯಗಳ ವಿಷಯದಲ್ಲಿ ಗ್ರಾ.ಪಂ‌.ಯ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಲಹೆ, ಮಾರ್ಗದರ್ಶನದ ಮೇರೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ಟಿ.ರಮೇಶ್, ಉಪಾಧ್ಯಕ್ಷೆ ಗೌರಮ್ಮ ನಾರಾಯಣಸ್ವಾಮಿ, ಹೆಸರುಘಟ್ಟ ರೈತ ಸೇವಾ ಸಹಕಾರ ಸಂಘದ ನಿರ್ದೇಶಕ ಮಾದಪ್ಪನ ಹಳ್ಳಿ ಕೃಷ್ಣಮೂರ್ತಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕೆ.ಪಿ.ಮಂಜುನಾಥ್, ಗ್ರಾ.ಪಂ. ಸದಸ್ಯರಾದ ಎಸ್.ಟಿ.ಮುನಿರಾಜು, ಮಂಜುಳ ಕೆಂಪಣ್ಣ, ಲಕ್ಷ್ಮೀನಾರಾಯಣ, ಮುನಿಯಲ್ಲಪ್ಪ ಎಂ.ವಿ., ಪ್ರಮಿಳ ವಾಸುದೇವ, ಎಸ್.ಆರ್. ಸುರೇಶ್, ಸವಿತಾ ಜಿ.ಮಧು, ಸುಜಾತ ಸಿದ್ಧರಾಜು, ಶಾಂತಮ್ಮ ಪಾಪಯ್ಯ, ವಿಜಯಕುಮಾರ್ ಎಸ್.,ಉಮೇಶ್ ಎಂ.ಸಿ., ಕಿರಣ್ ಕೆ., ಮುನಿರತ್ನಮ್ಮ ಮುನಿಬೈಲಪ್ಪ, ಇಂದ್ರಮ್ಮ ರಾಮಾಂಜಿನಪ್ಪ, ನಾಗರತ್ನಮ್ಮ ನಾರಾಯಣಸ್ವಾಮಿ, ಮಾಜಿ ಸದಸ್ಯರಾದ ಎಂ.ಪಿ. ರವಿಕುಮಾರ್, ಪ್ರಸನ್ನ ಸೇರಿದಂತೆ ಗ್ರಾ.ಪಂ.ಸಿಬ್ಬಂದಿಗಳಿದ್ದರು.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು ಕೋಗಿಲು ಬಡಾವಣೆ

9845085793

7349337989

Leave a Reply

Your email address will not be published. Required fields are marked *