





ಲೇಖನ ಅವರ ಭರತ ನಾಟ್ಯ ರಂಗಪ್ರವೇಶ ಬೆಂಗಳೂರಿನ ತೆಲುಗು ವಿಜ್ಞಾನ ಸಮಿತಿಯ ಶ್ರೀ
ಕೃಷ್ಣದೇವರಾಯ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಡಿ.ಆರ್ .ಲೇಖನ ಅವರ ರಂಗಪ್ರವೇಶ ಕಾರ್ಯಕ್ರಮಕ್ಕೆ ವಿದೂಷಿ ಶ್ರೀಮತಿ ಗೀತಾ ಶ್ರೀನಾಥ್, ಶ್ರೀಯುತ ಶ್ರೀನಾಥ್, ಜಾನಪದ ನೃತ್ಯಗಾರ ಶ್ರೀಯುತ ಹಿದಾಯತ್ ಅಹಮದ್, ಬಿ.ಜಿ.ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಶಮಂತ ನಾಗರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಲಾವಿದೆಯನ್ನು ಆಶಿರ್ವದಿಸಿದರು.
ರತ್ನ. ಟಿ, ಡಿ. ಆರ್ ರಂಗಸ್ವಾಮಿ ಪುತ್ರಿಯಾದ ಕುಮಾರಿ ಲೇಖನ ಆರನೇ ವರ್ಷದಲ್ಲೇ ಭರತನಾಟ್ಯ ಅಭ್ಯಾಸ ಆರಂಭಿಸಿದ್ದು, ಶ್ರೀಕೃಷ್ಣ ಕಲಾಲಯದ ವಿದುಷಿ ಶ್ರೀಮತಿ ಸುನೀತ ಸುಕುಮಾರನ್ ಅವರ ಬಳಿ ಭರತ ನಾಟ್ಯ ಅಭ್ಯಾಸ ಪರಿಪೂರ್ಣವಾಗಿ ಮುಗಿಸಿ ರಂಗಪ್ರವೇಶಕ್ಕೆ ಸಜ್ಜಾಗಿದ್ದಾರೆ. ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಕಲೆ ಕುರಿತು ತರಬೇತಿ ಪಡೆದಿರುವ ಉತ್ತಮ ಚಿತ್ರಕಲಾವಿದೆಯಾಗಿ ಹೊರಹೊಮ್ಮಿದ್ದಾರೆ.