




ಸಹಕಾರ ತತ್ವದ ಮೂಲ ಆಶಯಗಳಂತೆ ನಡೆದ ವಾರ್ಷಿಕ ಸಭೆ :
ಬ್ಯಾಟರಾಯನಪುರ : ಕ್ಷೇತ್ರದ ಹುಣಸಮಾರನಹಳ್ಳಿ ಯಲ್ಲಿರುವ ಶ್ರೀ ಅಕ್ಷಯ ಕ್ರೀಡೆಟ್ ಸೌಹಾರ್ದ ಸಹಕಾರಿ ಸಂಘದ 14ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಸಹಕಾರ ತತ್ವದ ಮೂಲ ಆಶಯಗಳಂತೆ ಭಾನುವಾರ ಯಶಸ್ವಿಯಾಗಿ ನಡೆಯಿತು.
ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದ ನಂತರ ಸಹಕಾರಿ ಸಂಘದ ಅಧ್ಯಕ್ಷ ಆರ್.ರವಿಚಂದ್ರ ಮಾತನಾಡಿ ‘ಕೇಂದ್ರ ಸರ್ಕಾರವು ‘ಸಹಕಾರದಿಂದ ಸಮೃದ್ಧಿ’ ಎಂಬ ಘೋಷ ವಾಕ್ಯದೊಂದಿಗೆ ಪ್ರತ್ಯೇಕ ಸಹಕಾರ ಸಚಿವಾಲಯ ಪ್ರಾರಂಭಿಸಿ, ಸಹಕಾರ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಒಳಗೊಂಡ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನತೆಯ ಬದುಕು ರೂಪಿಸಬಲ್ಲ ಹಲವು ಸೌಲಭ್ಯಗಳಿವೆ. ಮಹಿಳಾ ಸಬಲೀಕರಣ ಮತ್ತು ಯುವ ಜನತೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಕ್ಷೇತ್ರಕ್ಕೆ ಆಕರ್ಷಿಸಲು ಸದಸ್ಯತ್ವ ಅಭಿಯಾನದಂತಹ ಹಲವು ವಿಶೇಷತೆಗಳನ್ನು ಈ ಯೋಜನೆ ಒಳಗೊಂಡಿದೆ.
ಕೇಂದ್ರ ಸರ್ಕಾರದ ಮಹತ್ವದ ಈ ಯೋಜನೆಯ ಆಶಯದಂತೆ ಶ್ರೀ ಅಕ್ಷಯ ಕ್ರೀಡೆಟ್ ಸೌಹಾರ್ದ ಸಹಕಾರಿಯು ಸಹ ತನ್ನ ಮುಂದಿನ ಯೋಜನೆಗಳನ್ನು ರೂಪಿಸಿದ್ದು, ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ವಿಶೇಷ ಸಾಲ, ಪ್ರತಿಭಾ ವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಶಿಕ್ಷಣಿಕ ಸಾಲ ಮುಂತಾದ ಹಲವು ಸೌಲಭ್ಯಗಳನ್ನು ನೀಡಲು ಆರಂಭಿಸಿದೆ. ಪ್ರಸಕ್ತ ಸಾಲಿನಲ್ಲಿ ನಮ್ಮ ಸಹಕಾರಿ ಸಂಘ ದಲ್ಲಿ ಗರಿಷ್ಠ ಪ್ರಮಾಣದ ಠೇವಣಿಗಳ ಸಂಗ್ರಹವಾಗಿದೆ, ಸಾಲ ವಸೂಲಾತಿಯಲ್ಲಿ ಸಹ ಗಮನಾರ್ಹ ಸಾಧನೆ ಮಾಡಿದ್ದು, ಕಳೆದ 14 ವರ್ಷಗಳಿಂದ ಷೇರುದಾರರ, ಠೇವಣಿದಾರರ ಹಿತ ಕಾಯುವ ಮೂಲಕ ಸಾಧನೆಯ ಹಾದಿಯಲ್ಲಿ ದಾಪುಗಾಲು ಇಡುತ್ತಿರುವುದು ಸಂತೋಷದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷೆ ಎ. ಎಂ. ಸುಜಾತಾ, ನಿರ್ದೇಶಕರಾದ ಬಿ.ಆರ್.ಭೈರೇಗೌಡ, ಎ.ಸಣ್ಣವೀರಣ್ಣ, ಡಿ.ಸುರೇಶ್, ಪಿ.ಶಿವಕುಮಾರ್, ಲತಾರಾಣಿ, ಮಂಗಳ, ಕೆ.ಜೆ.ಶ್ವೇತ, ಎಚ್.ಜಿ. ಸರಸ್ವತಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಿ.ಎಸ್. ವೆಂಕಟಾಚಲಪತಿ ಸೇರಿದಂತೆ ಇನ್ನಿತರ ನಿರ್ದೇಶಕರಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
ಆರ್ ಹನುಮಂತು
9845085793
7349337989