ಬ್ಯಾಟರಾಯನಪುರ : ಸಹಕಾರ ತತ್ವ ಎಂಬುದು ಸರ್ಕಾರದ ಯಾವುದೋ ಒಂದು ಇಲಾಖೆಗೆ ಅಥವಾ ಯೋಜನೆಗಷ್ಟೇ ಸೀಮಿತವಾಗಿರದೆ ಪ್ರತಿಯೊಬ್ಬ ಮನುಷ್ಯನ ಬದುಕಿನ ಭಾಗವಾಗಬೇಕು ಎಂದು ಮಾಜಿ ಜಿ.ಪಂ‌.ಅಧ್ಯಕ್ಷ, ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಕ್ಕೂರು ರವಿಕುಮಾರ್ ಅಭಿಪ್ರಾಯಪಟ್ಟರು.

ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ನಡೆದ ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2023-24ನೇ ಸಾಲಿನ 6ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಎಲ್ಲಾ ನಿರ್ದೇಶಕರ, ಸಿಬ್ಬಂದಿಗಳ ಪರಿಶ್ರಮದ ಫಲವಾಗಿ ಸೊಸೈಟಿಗೆ 2023-24ನೇ ಸಾಲಿನ ಲೆಕ್ಕ ಪರಿಶೋಧನಾ ವರ್ಗೀಕರಣ ದಲ್ಲಿ ‘ಎ’ ಗ್ರೇಡ್ ದೊರೆತಿದ್ದು, ವಾರ್ಷಿಕ ಮಹಾಸಭೆಯ ಈ ಸುಸಂದರ್ಭದಲ್ಲಿ ಎಲ್ಲಾ ಷೇರುದಾರರು, ನಿರ್ದೇಶಕರು, ಸಿಬ್ಬಂದಿಗಳಿಗೆ ಹೃತ್ಪೂರ್ವಕ ಧನ್ಯವಾದ ಮತ್ತು ಅಭಿನಂದನೆ ತಿಳಿಸಲಿಚ್ಛಿಸುತ್ತೇನೆ. ಸೊಸೈಟಿ ಕಳೆದ ಆರು ವರ್ಷಗಳಿಂದ ಈ ಭಾಗದ ಬಡ ಮತ್ತು ಮಧ್ಯಮ ವರ್ಗದ ಜನರ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಾ ಬಂದಿದೆ.

ಪ್ರಸಕ್ತ ಸಾಲಿನಲ್ಲಿ ಸಾಲ ಪಡೆದು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿರುವ 5 ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಗೌರವ ಸನ್ಮಾನ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಶೇ.60ಕ್ಕಿಂತ ಹೆಚ್ಚಿನ ಅಂಕ ಗಳಿರುವ ಷೇರುದಾರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಹಾಯಧನ ವಿತರಣೆ, ಇದೇ ಸಾಲಿನಲ್ಲಿ ನಿಧನ ಹೊಂದಿದ ಸದಸ್ಯರ ನಾಮಿನಿದಾರರಿಗೆ ಮರಣ ಸಹಾಯಧನ ವಿತರಣೆ, ಪ್ರಸಕ್ತ ಸಾಲಿನ ನಿವ್ವಳ ಲಾಭವನ್ನು ಷೇರುದಾರರಿಗೆ ಹಂಚಿಕೆ ಮಾಡುವುದು ಮುಂತಾದ ಹಲವು ಸವಲತ್ತುಗಳನ್ನು ನೀಡಿದ್ದು, ಸೊಸೈಟಿಯ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಮತ್ತು ಸವಲತ್ತುಗಳನ್ನು ನೀಡುವುದು ನಮ್ಮ ಧ್ಯೇಯವಾಗಿದ್ದು, ಈ ದಿಸೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಬದ್ಧತೆಯನ್ನು ಹೊಂದಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ವಿ.ನಾಗರಾಜಪ್ಪ, ಕಾನೂನು ಸಲಹೆಗಾರರಾದ ಎಸ್.ವಿ.ರಾಮಚಂದ್ರಪ್ಪ, ನಿರ್ದೇಶಕರಾದ ವಿನೋದ್ ಕುಮಾರ್ ವ್ಯಾಸ್, ಬಿ.ಜಿ.ರಮೇಶ್, ಸಿ ಎ ಚಿಕ್ಕಣ್ಣ (ಅಗ್ರಹಾರ ಬಡಾವಣೆ) ರತ್ನಮ್ಮ ದೇವರಾಜು, ಸುಮಿತ್ರಾ ನಾಗೇಶ್, ಇ.ಕೃಷ್ಣಪ್ಪ, ಎಸ್.ಮಾರುತಿ, ಜಿ.ಆಂಜಿನಪ್ಪ, ವೀಣಾ ಆರ್.ವೆಂಕಟೇಶ್, ಬಿ.ಕೆ.ರವೀಂದ್ರನಾಥಗೌಡ, , ಬಿ.ಎಂ.ಚಂದ್ರಶೇಖರ್, ಆರ್.ಮಂಜುನಾಥ್, ಮಾಲಾ ವಿ.ಭಟ್, ಸಿಇಒ ಎಸ್.ಟಿ.ರಾಕೇಶ್, ವ್ಯವಸ್ಥಾಪಕರಾದ ಯಶೋಧ ಸೇರಿದಂತೆ ಸೊಸೈಟಿಯ ಷೇರುದಾರರಿದ್ದರು.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು

9845085793

7349337989

Leave a Reply

Your email address will not be published. Required fields are marked *