






ಶಾಸಕ ಎಸ್ ಆರ್ ವಿಶ್ವನಾಥ್, ಹಲವು ಗಣ್ಯರ ಶುಭ ಹಾರೈಕೆ :
ಯಲಹಂಕ : ಯಲಹಂಕ ಕ್ಷೇತ್ರ ವ್ಯಾಪ್ತಿಯ ಅಟ್ಟೂರು ವಾರ್ಡ್ ಬಿಜೆಪಿ ಅಧ್ಯಕ್ಷ ನಾರಾಯಣಸ್ವಾಮಿ ಅವರ 43ನೇ ಜನ್ಮದಿನದ ಪ್ರಯುಕ್ತ ಯಲಹಂಕ ಉಪನಗರದ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ರವರು ಸೇರಿದಂತೆ ಹಲವು ಬಿಜೆಪಿ ಮುಖಂಡರು, ಕಾರ್ಯಕರ್ತರು, ಸ್ನೇಹಿತರು, ಅಭಿಮಾನಿಗಳು, ಬಂದು ಬಾಂಧವರು ನಾರಾಯಣಸ್ವಾಮಿ ರವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.
ಇದೇ ವೇಳೆ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಅಪ್ರತಿಮ ದೇಶಭಕ್ತ ದೀನ ದಯಾಳ್ ಉಪಾಧ್ಯಾಯ ರವರ ಜನ್ಮದಿನದ ಸುದಿನದಂದೇ ನಾರಾಯಣಸ್ವಾಮಿ ಜನ್ಮದಿನ ಇರುವುದು ಒಂದು ವಿಶೇಷತೆ ಎನ್ನಬಹುದು. ನಾರಾಯಣಸ್ವಾಮಿ ಯಲಹಂಕ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಶಿಸ್ತಿನ ಕಾರ್ಯಕರ್ತರಾಗಿ, ಮುಖಂಡರಾಗಿ ಸೇವೆ ಸಲ್ಲಿಸಿದ್ದು, ಬಿಜೆಪಿ ಪಕ್ಷದ ಬಲವರ್ಧನೆಗೆ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಶ್ರಮಿಸಿದ್ದಾರೆ, ಪ್ರಸ್ತುತವಾಗಿ ಅಟ್ಟೂರು ವಾರ್ಡ್ ನ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅವರಿಗೆ ಭಗವಂತ ಒಳ್ಳೆಯ ಆಯುರಾರೋಗ್ಯ ಕರುಣಿಸಲಿ. ಬಿಜೆಪಿ ಪಕ್ಷದಲ್ಲಿ ಅವರಿಗೆ ಇನ್ನೂ ಉನ್ನತ ಸ್ಥಾನಮಾನ ದೊರೆಯುವ ಮೂಲಕ ಜನಸೇವೆಯ ಭಾಗ್ಯ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್ ಎನ್ ರಾಜಣ್ಣ, ಸಚ್ಚಿದಾನಂದ ಮೂರ್ತಿ, ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಸತೀಶ್, ಬಿಜೆಪಿ ಮುಖಂಡರಾದ ಎ.ಸಿ.ಮುನಿಕೃಷ್ಣಪ್ಪ, ನಟರಾಜ್, ಮುನಿರಾಜು, ಶ್ರೀಕಾಂತ್, ಬೆಟ್ಟಹಳ್ಳಿ ಬೈರೇಗೌಡ, ಬೈಲಪ್ಪ ಬೆಟ್ಟಹಳ್ಳಿ, ಮುರಾರಿ ರಾಮು, ಶಿವಕುಮಾರ್ ಗೌಡ, ಶೇಷಾದ್ರಿ, ಪವನ್, ಆಟೋಶಿವು, ಶರತ್ ರೆಡ್ಡಿ, ಅಕ್ಷತ್, ಗುರುಮೂರ್ತಿ ಸೇರಿದಂತೆ ಹಲವು ಗಣ್ಯರಿದ್ದು, ನಾರಾಯಣ ಸ್ವಾಮಿ ರವರಿಗೆ ಜನ್ಮದಿನದ ಶುಭ ಹಾರೈಸಿದರು.