ಬೆಂಗಳೂರು

ಪ್ರಮುಖ ಹೃದ್ರೋಗ ತಜ್ಞರು ಮತ್ತು ತಜ್ಞರು ಜೀವನಶೈಲಿ, ಆಹಾರ, ಸ್ಥೂಲಕಾಯತೆ ಮತ್ತು ವ್ಯಾಯಾಮದ ಅವಶ್ಯಕತೆಗಳ ಮೇಲೆ ಬೆಳಕು ಚೆಲ್ಲಿದರು, ಅತ್ಯುತ್ತಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಉಪಕರಣಗಳು ಮತ್ತು ಸಲಹೆಗಳನ್ನು ನೀಡಿದರು

ಬೆಂಗಳೂರು, 28 ಸೆಪ್ಟೆಂಬರ್ 2024: ಹೆಲ್ತ್ ಆಂಡ್ ವೆಲ್ನೆಸ್ ನಾಲೆಡ್ಜ್ ಎಂಟರ್ಪ್ರೈಸ್, ಹ್ಯಾಪಿಯೆಸ್ಟ್ ಹೆಲ್ತ್ ಹಾರ್ಟ್ ಟು ಹಾರ್ಟ್ 2024 ಸಭೆಯನ್ನು ಆಯೋಜಿಸಿತು, ಹೃದ್ರೋಗ ಆರೈಕೆಗೆ ಆದ್ಯತೆ ನೀಡುವ ಮತ್ತು ಜಾಗೃತಿ ಮೂಡಿಸುವ ಕುರಿತು ಹಲವಾರು ಚರ್ಚೆಗಳು ಮತ್ತು ಪ್ರಾಯೋಗಿಕ ಅವಧಿಗಳನ್ನು ಪ್ರಸ್ತುತಪಡಿಸಿತು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಹೃದಯರಕ್ತನಾಳದ ಆರೋಗ್ಯದ ಮೇಲಿನ ಕಾಳಜಿಯನ್ನು ತಿಳಿಸಲಾಯಿತು, ಪಾಲಿಸ ಬೇಕಾದ ಆಳವಾದ ಆರೋಗ್ಯ ಸಲಹೆಗಳನ್ನು ನೀಡಲಾಯಿತು ಮತ್ತು ಭಾಗವಹಿಸುವವರಿಗೆ ಈ ಕ್ಷೇತ್ರದಲ್ಲಿನ ಪ್ರಮುಖ ಟ್ರೆಂಡ್‌ಗಳು ಮತ್ತು ಸಾಧನಗಳನ್ನು ಪರಿಚಯಿಸಲಾಯಿತು. ಆಹಾರ, ಜೀವನಶೈಲಿ, ಮಹಿಳೆಯರ ಆರೋಗ್ಯ, ಆರೋಗ್ಯಕರ ಹೃದಯಕ್ಕಾಗಿ ವ್ಯಾಯಾಮಗಳು ಮತ್ತು ಹೆಚ್ಚಿನವುಗಳ ಒಳನೋಟವನ್ನು ನೀಡುವ ಮೂಲಕ ಹೃದಯದ ಆರೋಗ್ಯದ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಒದಗಿಸುವ ಪ್ರಮುಖ ತಜ್ಞರಿಗೆ ಸಭೆಯು ವೇದಿಕೆಯನ್ನು ಒದಗಿಸಿತು. ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಗೌರವಾನ್ವಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂ ರಾವ್, ಹಲವಾರು ವೈದ್ಯರು, ತಜ್ಞರು ಮತ್ತು ಆರೋಗ್ಯ ಕಾಳಜಿ ಉಳ್ಳವರು ಉಪಸ್ಥಿತರಿದ್ದರು. ಸಭೆಯು 500+ ಕ್ಕೂ ಹೆಚ್ಚು ಪಾಲ್ಗೊಂಡ ಜನರಿಗೆ ಸಾಕ್ಷಿಯಾಯಿತು.

ಹೃದ್ರೋಗವು ಜಾಗತಿಕ ಬಿಕ್ಕಟ್ಟಾಗಿ ವ್ಯಾಪಿಸಿರುವಾಗ, ಹಾರ್ಟ್-ಟು-ಹಾರ್ಟ್ 2024 ಸಮಗ್ರ ಹೃದಯ ಆರೋಗ್ಯದ ಬಗ್ಗೆ ಸರಿಯಾದ ಕಲ್ಪನೆಯನ್ನು ಬಿತ್ತುವುದರೊಂದಿಗೆ ಎಲ್ಲಾ ಭಾಗಿದಾರರಲ್ಲಿ ಸೂಕ್ತ ಅರಿವನ್ನು ನೀಡಲು ಪ್ರಯತ್ನಿಸಿದೆ. ಸಭೆಯು ಹೃದಯದ ಸಮಸ್ಯೆಗಳಿಂದ ದೂರವಿರಲು ಈ ಕುರಿತಂತೆ ಅಗತ್ಯವಿರುವ ಜ್ಞಾನವನ್ನು ಹೊಂದಿರುವ ವ್ಯಕ್ತಿಗಳನ್ನು ಸಜ್ಜುಗೊಳಿಸಿ ಅವರಿಂದ ಜೀವಗಳನ್ನು ಉಳಿಸಬಹುದಾದ ಪೂರ್ವಭಾವಿ ಕ್ರಮಗಳನ್ನು ವಿವರಿಸಲಾಯಿತು. ಪಾಲ್ಗೊಳ್ಳುವವರು ಪ್ರಮುಖ ಹೃದ್ರೋಗಶಾಸ್ತ್ರಜ್ಞರೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಯಿತು, ವಿಷಯದ ಇತ್ತೀಚಿನ ಪ್ರಗತಿಗಳನ್ನು ತಿಳಿದುಕೊಂಡರು ಮತ್ತು CPR ತರಬೇತಿಯನ್ನು ಪಡೆದರು. ಸ್ಟ್ಯಾಂಡ್-ಅಪ್ ಪ್ರದರ್ಶನದೊಂದಿಗೆ ದಿನವು ಮುಕ್ತಾಯವಾಯಿತು.

ಕರ್ನಾಟಕ ಸರ್ಕಾರದ ಗೌರವಾನ್ವಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂ ರಾವ್ ಅವರು ಮುಂಜಾಗೃತಾ ಆರೈಕೆಯ ಅಗತ್ಯತೆ ಮತ್ತು ಆರಂಭಿಕ ಪತ್ತೆಗಾಗಿ ಜನರನ್ನು ಪರೀಕ್ಷಿಸುವಲ್ಲಿ ಸರ್ಕಾರದ ಉಪಕ್ರಮಗಳ ಕುರಿತು ಮಾತನಾಡಿದರು. ‘ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ’ ಸ್ಕೀಮ್ ಅಡಿ ನಾವು ಬೆಂಗಳೂರಿನಲ್ಲಿ ಕೇಂದ್ರ ಹೊಂದಿರುವ 82 ಆಸ್ಪತ್ರೆಗಳನ್ನು ಸಂಪರ್ಕಿಸಿದ್ದೇವೆ ಎಂದು ಸಚಿವರು ಹೇಳಿದರು. ಎದೆಯಲ್ಲಿನ ಸಮಸ್ಯೆಗಳ ಬಗ್ಗೆ ದೂರು ನೀಡುವ ಜನರು ECG ಗಳನ್ನು ಮಾಡಿಸಿಕೊಳ್ಳುತ್ತಾರೆ, ಪ್ರತಿಯೊಂದೂ ಕೂಡ ಬೆಂಗಳೂರು ಕೇಂದ್ರಕ್ಕೆ ಸಂಪರ್ಕ ಹೊಂದಿದೆ. AI ECG ಅನ್ನು ರೀಡ್ ಮಾಡುತ್ತದೆ ಮತ್ತು ವೈದ್ಯರಿಗೆ ಉಲ್ಲೇಖಿಸಲಾದ ವ್ಯತ್ಯಾಸಗಳನ್ನು ಸೂಚಿಸುತ್ತದೆ. ಈ ಹಸ್ತಕ್ಷೇಪದ ಮೂಲಕ ನಾವು ಸುಮಾರು 75 ಜನರನ್ನು ಉಳಿಸಲು ಸಾಧ್ಯವಾಯಿತು, ಅವರಿಗೆ ಸಮಯಕ್ಕೆ ತುರ್ತು ಆರೈಕೆಯನ್ನು ಪಡೆಯಲು ಇದು ಸಹಾಯ ಮಾಡಿದೆ. ತಂತ್ರಜ್ಞಾನದ ಬಳಕೆಯೊಂದಿಗೆ, ನಾವು ಅವುಗಳನ್ನು ಮುಂಚಿತವಾಗಿ ತಡೆಗಟ್ಟುವ ಮತ್ತು ಪತ್ತೆಹಚ್ಚುವ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಹ್ಯಾಪಿಯೆಸ್ಟ್ ಹೆಲ್ತ್ – ನಾಲೆಡ್ಜ್ ಅಂಡ್ ಡಯಾಗ್ನೋಸ್ಟಿಕ್ಸ್‌ನ CEO ಶ್ರೀ ಅನಿಂಧ್ಯಾ ಚೌಧರಿ, ಹೇಳುವಂತೆ “ಹಾರ್ಟ್ -ಟು- ಹಾರ್ಟ್ ಅನ್ನು ಜನರೊಂದಿಗೆ ಪ್ರಾಮಾಣಿಕವಾಗಿ, ತೊಡಗಿಸಿಕೊಳ್ಳುವ ಸಂಭಾಷಣೆಗಳನ್ನು ರಚಿಸಲು ಮತ್ತು ಅವರಿಗೆ ಸರಿಯಾದ ಜ್ಞಾನವನ್ನು ಒದಗಿಸಲು ಕಲ್ಪಿಸಲಾಗಿದೆ. ಹೃದಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲ ಹುಟ್ಟಿಸುವ ಮಾಹಿತಿಗಳಿವೆ, ಅದು ಗಾಬರಿ ಉಂಟುಮಾಡಬಹುದು ಮತ್ತು ಗೊಂದಲಮಯವಾಗಿರಬಹುದು. ನಾವು ಅದನ್ನು ದೂರೀಕರಿಸಲು ಪ್ರಯತ್ನಿಸಿದ್ದೇವೆ ಮತ್ತು ತಮ್ಮನ್ನು ತಾವು ನೋಡಿಕೊಳ್ಳುವುದು ಎಷ್ಟು ಅಗತ್ಯ ಎಂಬುದರ ಅರಿವು ನೀಡುವುದರೊಂದಿಗೆ ಜನರನ್ನು ಪರಸ್ಪರ ಕನೆಕ್ಟ್ ಆಗಿಸಲು ಪ್ರಯತ್ನಿಸಿದ್ದೇವೆ. ಇದನ್ನು ಮಾಡಲು ಒಗ್ಗೂಡಿರುವ ತಜ್ಞರು ಮತ್ತು ವ್ಯಕ್ತಿಗಳ ಸಮುದಾಯಕ್ಕೆ ನಾವು ಕೃತಜ್ಞರಾಗಿರುತ್ತೇವೆ.”

ಡಾ ವಿವೇಕ್ ಜವಳಿ, ಅಧ್ಯಕ್ಷರು – ಕಾರ್ಡಿಯೋವಾಸ್ಕುಲರ್ ಮತ್ತು ಥೋರಾಸಿಕ್ ಸರ್ಜರಿ ಕೌನ್ಸಿಲ್, ಫೋರ್ಟಿಸ್ ಹೆಲ್ತ್‌ಕೇರ್ ಲಿಮಿಟೆಡ್, ಇಂಡಿಯಾ ಮತ್ತು ಕಾರ್ಡಿಯಾಕ್ ಸೈನ್ಸಸ್ ಮತ್ತು ದಿ ಎಕ್ಸಿಕ್ಯೂಟಿವ್ ಕೌನ್ಸಿಲ್, ಫೋರ್ಟಿಸ್ ಆಸ್ಪತ್ರೆಗಳು, ಬೆಂಗಳೂರು, ಯುವ ಭಾರತೀಯರಲ್ಲಿ ಉಂಟಾಗುವ ಹೃದಯಾಘಾತದ ಕುರಿತು ಮುಖ್ಯ ಭಾಷಣ ಮಾಡಿದರು. “ಯುವಕರು ಮತ್ತು ಭಾರತೀಯರು: ಹೃದಯಾಘಾತದ ದುರ್ಬಲತೆ’ ವಿಷಯದ ಕುರಿತು ಮುಖ್ಯ ಭಾಷಣ ಮಾಡಿದರು. ಇದನ್ನು ತಡೆಯುವುದು ಹೇಗೆ.’ ಆನುವಂಶಿಕತೆ, ಉಪ್ಪು ಸೇವನೆ, ಸ್ಥೂಲಕಾಯತೆ ಮತ್ತು ಹೆಚ್ಚಿನವುಗಳಿಂದ ಪ್ರಭಾವಿತವಾಗಿರುವ ಹೃದಯದ ಅಪಾಯಕಾರಿ ಅಂಶಗಳನ್ನು ಅಧಿವೇಶನವು ಚರ್ಚಿಸಿತು.

ಧೂಮಪಾನದಿಂದ ಹೃದಯಕ್ಕೆ ಆಗುವ ಅಪಾಯಗಳ ಕುರಿತು ಮಾತನಾಡಿದ ವೈದ್ಯ ವಿವೇಕ್, “ಒಂದು ಪಫ್ ಅಥವಾ ಎರಡು–ಮೂರು ಫುಲ್ ಪ್ಯಾಕ್ ಸೇದುವುದು ಒಂದೇ. ಇದು ಹೃದಯ ಬಡಿತ ಮತ್ತು ಹೃದಯ ಕಾಯಿಲೆಗಳ ವೇಗವನ್ನು ಸಂಪೂರ್ಣವಾಗಿ ವೇಗಗೊಳಿಸುತ್ತದೆ. ಇದು ಉತ್ತಮ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಹೆಚ್ಚಿಸುತ್ತದೆ, ರಕ್ತನಾಳಗಳ ಸಂಕುಚಿತತೆಯಿಂದ BP ಅನ್ನು ಹೆಚ್ಚಿಸುತ್ತದೆ ಮತ್ತು ಅಧಿಕ ರಕ್ತದೊತ್ತಡದ ಔಷಧಿಗಳಿಗೆ ಕೂಡ ನಿಮ್ಮ ದೇಹ ಪ್ರತಿಕ್ರಿಯಿಸದಂತೆ ದುರ್ಬಲಗೊಳಿಸುತ್ತದೆ. ನೀವು ಕಡಿಮೆ ಮಟ್ಟದ ಧೂಮಪಾನಿ ಅಥವಾ ಅಧಿಕ ಮಟ್ಟದ ಧೂಮಪಾ – ಇವೆರಡರ ನಡುವೆ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಬೀರುವ ಪರಿಣಾಮ ಒಂದೇ ಆಗಿದೆ ಎಂದರು.

‘ಡಯಟ್ ಫಾರ್ ದಿ ಹಾರ್ಟ್’ ಎಂಬ ಪ್ಯಾನೆಲ್ ಚರ್ಚೆಯು, ಇಂಟರ್‌ವೆನ್ಷನಲ್ ಕಾರ್ಡಿಯಾಲಜಿ, ಬೆಂಗಳೂರು, ಮಣಿಪಾಲ್ ಆಸ್ಪತ್ರೆ ಇಲ್ಲಿನ ಎಚ್‌ಒಡಿ ಮತ್ತು ಸಲಹೆಗಾರ -ಡಾ ರಂಜನ್ ಶೆಟ್ಟಿ, ಇಂಟರ್ವೆನ್ಷನಲ್ ಕಾರ್ಡಿಯಾಲಜಿ, ಕಾವೇರಿ ಆಸ್ಪತ್ರೆ, ಬೆಂಗಳೂರು ಇಲ್ಲಿನ ಎಚ್‌ಒಡಿ – ಡಾ ದೀಪಕ್ ಕೃಷ್ಣಮೂರ್ತಿ ಮತ್ತು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (S-VYASA) ಬೆಂಗಳೂರು ಇಲ್ಲಿನ ಉಪಕುಲಪತಿ ಡಾ ಮಂಜುನಾಥ್ ಎನ್ ಕೆ ಮುಂತಾದವರು ಕಾರ್ಯಕ್ರಮವನ್ನು ವೈಶಿಷ್ಟ್ಯಪೂರ್ಣವಾಗಿಸಿದರು. ರೋಗ ಮತ್ತು ಒತ್ತಡದಿಂದ ಹೃದಯವನ್ನು ರಕ್ಷಿಸಲು ಸಹಾಯ ಮಾಡುವ ಆಹಾರ ಪದ್ಧತಿಗಳ ವಿಷಯದ ಮೇಲೆ ಅಧಿವೇಶನವು ಕೇಂದ್ರೀಕರಿಸಿತು .

ಹರ್ ಹಾರ್ಟ್ ಮ್ಯಾಟರ್ಸ್ ಶೀರ್ಷಿಕೆಯ ಮತ್ತೊಂದು ಪ್ಯಾನೆಲ್ ಚರ್ಚೆಯಲ್ಲಿ ನ್ಯೂಮೆನ್ ಹೆಲ್ತ್‌ನ ಸ್ಥಾಪಕ ಪಾಲುದಾರ ಮತ್ತು ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ ಅಲ್ಬೆನ್ ಸಿಗಮಣಿ, ಶ್ರೀ ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (SJICR) ನಿರ್ದೇಶಕ ಡಾ ಕೆ ಎಸ್ ರವೀಂದ್ರನಾಥ್ ಮತ್ತು ರಾಮಯ್ಯ ಮೆಮೋರಿಯಲ್ ಆಸ್ಪತ್ರೆ, ಬೆಂಗಳೂರಿನ ಹೃದ್ರೋಗ ತಜ್ಞ ಡಾ ಅನುಪಮಾ ವಿ ಹೆಗ್ಡೆ ಭಾಗವಹಿಸಿದ್ದರು. ಪ್ಯಾನೆಲ್, ಮಹಿಳೆಯರ ಹೃದಯ ಸ್ವಸ್ಥತೆಯ ಸುತ್ತಲಿನ ವಿಷಯಗಳ ಮೇಲೆ ಬೆಳಕು ಚೆಲ್ಲಿತು.
ಹಾರ್ಟ್-ಟು-ಹಾರ್ಟ್ 2024 ಮತ್ತು ಹ್ಯಾಪಿಯೆಸ್ಟ್ ಹೆಲ್ತ್‌ನ ಇತರ ಅದೇ ರೀತಿಯ ಕಾರ್ಯಕ್ರಮಗಳು ಪರಸ್ಪರ ಕಲಿಯಬಹುದಾದ ಆರೋಗ್ಯ ಪ್ರಜ್ಞೆಯ ವ್ಯಕ್ತಿಗಳ ಸಮುದಾಯವನ್ನು ರಚಿಸಲು ಪ್ರಯತ್ನಿಸುತ್ತವೆ. ಆರೋಗ್ಯದ ಬಗ್ಗೆ ಹಂಚಿಕೊಂಡ ಅನುಭವಗಳು ಜನರನ್ನು ಸಬಲಗೊಳಿಸಬಹುದು ಮತ್ತು ಅವರು ತಮ್ಮ ಸ್ವಸ್ಥತೆಯನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬುದರ ದೃಷ್ಟಿಕೋನವನ್ನು ಬದಲಾಯಿಸಬಹುದು. ಹ್ಯಾಪಿಯೆಸ್ಟ್ ಹೆಲ್ತ್ ತನ್ನ ಆಳವಾದ ಪರಿಣತಿ ಮತ್ತು ಆರೋಗ್ಯ ರಕ್ಷಣೆಗೆ ಸಮಗ್ರ ವಿಧಾನದ ಮೂಲಕ ಈ ಸಮುದಾಯವನ್ನು ಮುನ್ನಡೆಸುವುದನ್ನು ಮುಂದುವರಿಸುತ್ತದೆ.

Leave a Reply

Your email address will not be published. Required fields are marked *