ಕೋಲಾರ: ಗೋದ್ರೇಜ್ ಅಗ್ರೋವೆಟ್ ಲಿಮಿಟೆಡ್ ಇತ್ತೀಚೆಗೆ ಫೆÇೀನ್ ಕರೆಯ ಮೂಲಕ ಬೆಳೆ ರಕ್ಷಣೆಗಾಗಿ ನೈಜ- ಸಮಯದ ಪರಿಣಿತ ಪರಿಹಾರವನ್ನು ಒದಗಿಸಲು ಬಹುಭಾಷಾ ಕೃಷಿ ಸಲಹಾ ಸಹಾಯವಾಣಿ ‘ಹಲೋ ಗೋದ್ರೇಜ್’ ಪ್ರಾರಂಭಿಸಿದೆ.
ಕೃಷಿ ಉತ್ಪಾದನೆ ಸುಧಾರಿಸುವ ಕಂಪನಿ ಪ್ರಯತ್ನಕ್ಕೆ ಪೂರಕವಾಗಿ ಅರಂಭಿಸಿರುವ ಈ ವ್ಯವಸ್ಥೆಯಡಿ ಕನ್ನಡ, ಹಿಂದಿ, ಮರಾಠಿ, ತೆಲುಗು, ತಮಿಳು, ಬೆಂಗಾಲಿ, ಪಂಜಾಬಿ ಮತ್ತು ಇಂಗ್ಲಿಷ್ ಹೀಗೆ ಎಂಟು ಭಾಷೆಗಳಲ್ಲಿ ಸೇವೆ ಲಭ್ಯ. ಸಹಾಯವಾಣಿ: 022 2519 4491 ಗೆ ಕರೆ ಮಾಡುವ ಮೂಲಕ ರೈತರು ಯಾವುದೇ ಸ್ಥಳದಿಂದಲೂ ಕರೆ ಮಾಡಿ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಗೋದ್ರೆಜ್ ಅಗ್ರೋವೆಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಬಲರಾಮ್ ಸಿಂಗ್ ಯಾದವ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
“ಹಲೋ ಗೋದ್ರೆಜ್” ಉಪಕ್ರಮವು ನೈಜ-ಸಮಯದ ವೈಯಕ್ತಿಕಗೊಳಿಸಿದ ಪರಿಹಾರಗಳನ್ನು ನೀಡುವ ಮೂಲಕ ರೈತರು ಮತ್ತು ಕೃಷಿ ತಜ್ಞರ ನಡುವಿನ ಅಂತರವನ್ನು ಕಡಿಮೆ ಮಾಡಲು ನೆರವಾಗಲಿದೆ. “ಹಲೋ ಗೋದ್ರೆಜ್” ಮೂಲಕ, ಭಾರತದಾದ್ಯಂತದ ರೈತರು ಈಗ ನಮ್ಮ ಕೃಷಿ ತಜ್ಞರ ತಂಡದಿಂದ ನೇರ ಸಂವಹನದ ಮೂಲಕ ನೈಜ ಸಮಯದ ಸಲಹೆಯನ್ನು ಪಡೆಯಬಹುದು ಎಂದು ವಿವರಿಸಿದ್ದಾರೆ.
ಕೃಷಿ ಕುಟುಂಬಗಳನ್ನು ಮೇಲೆತ್ತಲು ಗುಣಮಟ್ಟದ ಮತ್ತು ವಿಶ್ವಾಸಾರ್ಹ ಉತ್ಪನ್ನಗಳನ್ನು ಒದಗಿಸುವ ಉದ್ದೇದಿಂದ ದೇಶಾದ್ಯಂತದ ರೈತರನ್ನು ತಲುಪಿ, ಅವರ ವಿಶಿಷ್ಟ ಅಗತ್ಯಗಳು ಮತ್ತು ಸವಾಲುಗಳನ್ನು ಪರಿಹರಿಸಲು ಕಂಪನಿಯು ಉದ್ದೇಶಿಸಿದೆ. ಸುಸ್ಥಿರ ಮತ್ತು ಲಾಭದಾಯಕ ಕೃಷಿಯತ್ತ ಪ್ರಯಾಣದಲ್ಲಿ ಭಾರತೀಯ ರೈತರಿಗೆ ವಿಶ್ವಾಸಾರ್ಹ ಪಾಲುದಾರನಾಗುವ ಕಂಪನಿಯ ಆಶಯವನ್ನು ಇದು ಸಾಕಾರಗೊಳಿಸಲಿದೆ ಎಂದು ಬೆಳೆ ಸಂರಕ್ಷಣಾ ವ್ಯವಹಾರದ ಸಿಇಒ ರಾಜವೇಲು ಎನ್.ಕೆ. ಹೇಳಿದ್ದಾರೆ.

Best Regards,


Udayashankar Bhat

Impress Mediainks

No- 1-T-138/16, Unnati, Maruthi Layout

Devalagudi, Kunjattabail, Mangalore- 575015

Mob: 9449177677, 7019031334, 9448181098

Leave a Reply

Your email address will not be published. Required fields are marked *