Tag: look adalath scam

ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ ಪೀಠದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಕರಣಗಳ ಇತ್ಯರ್ಥ
*** ಧಾರವಾಡ :- ಉಚ್ಚ ನ್ಯಾಯಾಲಯ, ಧಾರವಾಡ ಪೀಠದಲ್ಲಿ ಇಂದಿನ ಜು. 8 ರಂದು ಲೋಕ್ ಅದಾಲತ್‌ದಲ್ಲಿ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್, ಹಿರಿಯ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಪೀಠ, ಧಾರವಾಡ, ಇವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಏರ್ಪಡಿಸಲಾಗಿತ್ತು. ಸದರಿ ಅದಾಲತ್ ನಲ್ಲಿ ಹಿರಿಯ ನ್ಯಾಯಮೂರ್ತಿಗಳೊಂದಿಗೆ ನ್ಯಾಯಮೂರ್ತಿಗಳಾದ ಎಸ್. ವಿಶ್ವಜಿತ್ ಶೆಟ್ಟಿ, ವಿ. ಶ್ರೀಶಾನಂದ, ಅನಿಲ ಬಿ ಕಟ್ಟೆ, ಮತ್ತು ವೆಂಕಟೇಶ ನಾಯ್ಕ ಟಿ. ಹಾಗೂ ಇವರೊಂದಿಗೆ ಲೋಕ ಅದಾಲತ್‌ನ ಸದಸ್ಯರುಗಳಾದ ಎಮ್. ಸಿ ಹುಕ್ಕೇರಿ, ಪ್ರಶಾಂತ ವಿ. ಮೊಗಳಿ, ವಿ. ಜಿ. ದಳವಾಯಿ, ಬಿ. ಎ. ಪಾಟೀಲ ಮತ್ತು ರಾಘವೇಂದ್ರ ಎ. ಪುರೋಹಿತ ಈ ರೀತಿಯಾಗಿ ಒಟ್ಟು ಪೀಠಗಳನ್ನು ಆಯೋಜಿಸಲಾಗಿತ್ತು. ಸದರಿ ಅದಾಲತನಲ್ಲಿ ಒಟ್ಟು 858 ಪ್ರಕರಣಗಳನ್ನು ವಿಚಾರಣೆಗೆಂದು ಗುರುತಿಸಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 375 ಪ್ರಕರಣಗಳನ್ನು 8,78,05,569/- ಮೊತ್ತಕ್ಕೆ ಇತ್ಯರ್ಥ ಪಡಿಸಲಾಯಿತು.

ಈ ಅದಾಲತ್ ನಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ಎಸ್‌. ಜೆ. ಪಂಡಿತ್ ಹಾಗೂ ಸದಸ್ಯರಾದ ಎಮ್. ಸಿ. ಹುಕ್ಕೇರಿ ಇವರನ್ನು ಒಳಗೊಂಡ ಅದಲಾತ್ ಪೀಠವು ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 37 ವರ್ಷಗಳ ಹಳೆಯದಾದ ದಿವಾಣಿ ಪ್ರಕರಣವನ್ನು ವಕೀಲರುಗಳಾದ ಸಂಜಯ ಎಸ್. ಕಟಗೇರಿ ಮತ್ತು…