Month: September 2023

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಣೆ : ಕೆಜಿಎಫ್ :ಕೆಜಿಎಫ್ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಹಾಗೂ ಭಾರತದ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾಗೂ ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ನಂತರ ಸಹಾಯಕ ಪ್ರಾಧ್ಯಾಪಕರಾದ ಡಾ.ವೆಂಕಟೇಶ ವಿ ರವರು ಸಂವಿಧಾನ ಪೀಠಿಕೆಯನ್ನು ಎಲ್ಲರಿಗೂ ಬೋಧಿಸಿ, ಸಂವಿಧಾನ ಪೀಠಿಕೆಯ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ ನಾರಾಯಣ ರವರು ಪ್ರಜಾಪ್ರಭುತ್ವದ ಪ್ರಾಮುಖ್ಯತೆ ಹಾಗೂ ಸಂವಿಧಾನವನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೊ. ವಿಶ್ವೇಶ್ವರ ಬಿ ವೈ, ಡಾ. ಕೌಸರ್ ಉನ್ನೀಸ, ಪ್ರೊ ಶ್ರೀನಿವಾಸ ಮೂರ್ತಿ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಮತ್ತು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಪ್ರದಾಯ ಮತ್ತು ಆಧುನಿಕತೆಯ ಸಂಯೋಜನೆ ಬಿಂಬಿಸುವ ಕೊರಾದ 18ನೇ ಮಳಿಗೆಯ ಅದ್ಧೂರಿ ಪ್ರಾರಂಭ

ಬೆಂಗಳೂರು, ಸೆಪ್ಟೆಂಬರ್ 17, 2023: ನೀಲೇಶ್ ಛಡ್ವಾ ಮತ್ತು ಮಿತೇಶ್ ಸುಂಬದ್ ಅವರ ಸೃಷ್ಟಿಯಾದ ಕೊರಾ ಸೆಪ್ಟೆಂಬರ್ 17ರಂದು ತನ್ನ 18ನೇ ಮಳಿಗೆ ಪ್ರಾರಂಭಿಸುವ ಮೂಲಕ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಹಿಂದೆಂದೂ ಕಾಣದಂತೆ ಸಂಪ್ರದಾಯ ಮತ್ತು ಆಧುನಿಕತೆಯ ಸಂಯೋಜನೆಯಾದ ಕೊರಾ ಬೈ…

ಬಂಗಾರಪೇಟೆ: ಸಂಸದ ಎಸ್. ಮುನಿಸ್ವಾಮಿ ಇನ್ನೂ ರೌಡಿಸಂ,ಬ್ಲಾಕ್ ಮೇಲ್, ಗುಡಿಸಿಲು ಹಾಕುವುದು, ಬೆದರಿಕೆ ಹಾಕುವುದು ಬಿಟ್ಟಿಲ್ಲ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆರೋಪ ಮಾಡಿದರು.

ಪಟ್ಟಣದ ಎಸ್. ಎನ್. ರೆಸಾರ್ಟ್ ನಲ್ಲಿ ಬಂಗಾರಪೇಟೆ ಮತ್ತು ಕೆಜಿಎಫ್ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ 83 ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಆಟೋ ಓಡಿಸಿಕೊಂಡು ಯೂನಿಯನ್ ಮಾಡಿಕೊಂಡು…

ನಿಫಾ ವೈರಸ್: ಆತಂಕ ಬೇಡ, ಮುನ್ನೆಚ್ಚರಿಕೆ ಅನುಸರಿಸಿ

ಬಳ್ಳಾರಿ,ಸೆ.16ನಿಫಾ ವೈರಸ್‍ಗೆ ಸಂಬಂಧಿಸಿದಂತೆ, ಜನರು ಆತಂಕ ಪಡಬಾರದು. ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು ಅವರು ಹೇಳಿದ್ದಾರೆ.ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ನಿಫಾ ವೈರಸ್‍ವು ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯಲ್ಲಿ…

ವಿಎಸ್‍ಕೆ ವಿವಿಯಲ್ಲಿ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ಅಂಗವಾಗಿ ಸಂವಿಧಾನ ಓದು’ ಕಾರ್ಯಕ್ರಮ
ಸಂವಿಧಾನ ನಮ್ಮ ಧರ್ಮಗ್ರಂಥ: ರುದ್ರೇಶ.ಎಸ್.ಎನ್

ಬಳ್ಳಾರಿ,ಸೆ.1ಭಾರತ ಸಂವಿಧಾನವು ನಮ್ಮ ಧರ್ಮಗ್ರಂಥವಿದ್ದಂತೆ, ಅದನ್ನು ಪವಿತ್ರವಾಗಿ ಕಾಣಬೇಕು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರಾದ ರುದ್ರೇಶ ಎಸ್.ಎನ್ ಹೇಳಿದರು.ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ಅಂಗವಾಗಿ ಸಂವಿಧಾನ ಓದು’…

‘ಡೆಂಗ್ಯೂ ಜಾಗೃತಿ ರಥ’ಕ್ಕೆ ಚಾಲನೆ
ಡೆಂಗ್ಯೂ ನಿಯಂತ್ರಿಸಲು ಸಮುದಾಯದ ಸಹಭಾಗಿತ್ವ ಅಗತ್ಯ: ಡಿಹೆಚ್‍ಒ ಡಾ.ವೈ ರಮೇಶ್‍ಬಾಬು

ಬಳ್ಳಾರಿ,ಸೆ.16ಡೆಂಗ್ಯೂ ನಿಯಂತ್ರಿಸಲು ಸಮುದಾಯ ಮಟ್ಟದಲ್ಲಿ ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಆರೋಗ್ಯ ಇಲಾಖೆಯ ಜೊತೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ…

ಭಾರತ ಆರ್ಥಿಕವಾಗಿ ಬಲಿಷ್ಟವಾಗಲು ಇಂಜಿನಿಯರ್ಸ್ ಶ್ರಮ ಬಹಳಷ್ಟಿದೆ: ರಹಿಮ್ ಖಾನ್

ಬೀದರ್: ಭಾರತ ವಿಶ್ವದಲ್ಲಿ ಆರ್ಥಿಕವಾಗಿ ಬಲಿಷ್ಟ ರಾಷ್ಟ್ರವಾಗಿ ಹೊರಹೊಮ್ಮಲು ಇಲ್ಲಿಯ ಇಂಜಿನಿರ‍್ಸ್ಗಳ ಪರಿಶ್ರಮ ಬಹಳಷ್ಟಿದೆ ಎಂದು ರಾಜ್ಯದ ಪೌರಾಡಳಿತ ಸಚಿವರು ಹಾಗೂ ಸ್ಥಳಿಯ ಶಾಸಕ ರಹಿಮ್ ಖಾನ್ ಅಭಿಪ್ರಾಯ ಪಟ್ಟರು.ಶುಕ್ರವಾರ ರಾತ್ರಿ ಗುರುದ್ವಾರ ಹತ್ತಿರದ ಲಾವಣ್ಯ ಕನ್ವೆನಶನ್ ಹಾಲ್‌ನಲ್ಲಿ ಸರ್ ಮೋಕ್ಷಗುಂಡಮ್…

ರೋಟರಿ ಸೆಂಟ್ರಲ್ ವತಿಯಿಂದ ಶಾಲಾ ಮಕ್ಕಳಿಗೆ ತಟ್ಟೆ ಹಾಗೂ ಮಾಸ್ಕ್ ವಿತರಣೆ

ಕೋಲಾರ :- ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಉತ್ತಮ ಶಿಕ್ಷಣ ನೀಡುತ್ತಿದ್ದು ಮಕ್ಕಳು ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆದರೆ ಅದೇ ನಿಮ್ಮ ತಂದೆ ತಾಯಿಗಳಿಗೆ ನೀವೂ ನೀಡುವ ಕೊಡುಗೆ ಎಂದು ಕೋಲಾರ ರೋಟರಿ ಸೆಂಟ್ರಲ್ ಅಧ್ಯಕ್ಷ ಕೆ.ಎನ್.ಪ್ರಕಾಶ್ ಹೇಳಿದರು. ನಗರದ ಹೃದಯ…

ಹೊಸಕೋಟೆ ಕಳವಾಗಿದ್ದ ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಅವುಗಳನ್ನು ಮೂಲ ವಾರಸುದಾರರಿಗೆ ಹೊಸಕೋಟೆ ಸರ್ಕಲ್‌ ಇನ್ಸ್‌ಪೆಕ್ಟರ್ ಅಶೋಕ್ ಹಿಂದಿರುಗಿಸಿದ್ದಾರೆ. ಇದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಹೊಸಕೋಟೆ ನಗರ ಐಬಿ ಸರ್ಕಲ್, ಬಸ್ ನಿಲ್ದಾಣದಲ್ಲಿ ಮಹಿಳೆಯರ ಗಮನ ಬೇರೆಡೆ ಸೆಳೆದು ಬಸ್ ಹತ್ತುವ, ಇಳಿಯುವ ವೇಳೆ ಮೊಬೈಲ್ ಕಳ್ಳತನ ಮಾಡುತ್ತಿದ್ದವನನ್ನು ಪೊಲೀಸರು ಬಂಧಿಸಿ ಆತನಿಂದ ವಶಪಡಿಸಿಕೊಂಡಿದ್ದರು.