Month: September 2023

ನವೆಂಬರ್ 26 ರಂದು ಬೆಳಗಾವಿಯಲ್ಲಿ ಮಾಜಿ ಸೈನಿಕರ
ಹಾಗೂ ಅವರ ಅವಲಂಬಿತರ ಕುಂದು ಕೊರತೆ ಸಭೆ

ಧಾರವಾಡ:- ಬೆಳಗಾವಿ ನಗರದ ಮರಾಠಾ ಲೈಟ್ ಇನಫೆಂಟ್ರಿ, ಶಿವಾಜಿ ಸ್ಟೇಡಿಯಂನಲಿ,್ಲ ನವೆಂಬರ 26 ರಂದು ಬೆಳಿಗ್ಗೆ 8-30 ರಿಂದ ಸಂಜೆ 4 ಗಂಟೆವರೆಗೆ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರುಗಳ ಕುಂದು ಕೊರತೆ ನಿವಾರಣಾ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಮಾಜಿ…

ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಎಟಿ & ಟಿ ಸಂಚಾರಿ ವಿಜ್ಞಾನ ಪ್ರಯೋಗಾಲಯ ವತಿಯಿಂದ ಕಿರು ವಿಜ್ಞಾನ ಮೇಳ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ : ದಿನಾಂಕ :7/9/2023ನೇ ಗುರುವಾರ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಎಟಿ & ಟಿ ಸಂಚಾರಿ ವಿಜ್ಞಾನ ಪ್ರಯೋಗಾಲಯ ನೆಲಮಂಗಲ ವಿಭಾಗದ ವತಿಯಿಂದ ಜಿಎಚ್ಎಸ್ ಪ್ರೌಢಶಾಲೆ ಯಂಟಗಾನಹಳ್ಳಿ ಈ ಶಾಲೆಯಲ್ಲಿ ಕಿರು ವಿಜ್ಞಾನ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಟ್ಟು 50 ವಿಜ್ಞಾನ ಮಾದರಿಗಳನ್ನು 62 ಮಾರ್ಗದರ್ಶಕರಿಂದ ವಿವರಣೆಯನ್ನು ಮಾಡಿಸಲಾಯಿತು. ಈ ಕಾರ್ಯಕ್ರಮವನ್ನು ಮುಖ್ಯೋಪಾಧ್ಯರಾದಂತಹ ಶ್ರೀಮತಿ ಶಾರದಾ (ಎಚ್ .ಎಂ.ಜಿಎಚ್ಎಸ್ ಯಂಟಗಾನಹಳ್ಳಿ ಶಾಲೆ)ಇವರು ಉದ್ಘಾಟಿಸಿದರು. ನಂತರ ಕಾರ್ಯಕ್ರಮದ ಬಗ್ಗೆ ಉತ್ತಮ ಮಾತುಗಳನ್ನು ಆಡಿದರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು ಹಾಗೂ ಅಗಸ್ತ್ಯ ಕಾರ್ಯ ವೈಖರಿಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ 3 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು ಒಟ್ಟಾರೆ 53 ಮಾರ್ಗದರ್ಶಕರು 613 ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರು 10 ಪೋಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ ವಲಯ ಅಧಿಕಾರಿಯಾದ ಶ್ರೀಯುತ ಮಂಜುನಾಥ್ ರವರು ಹಾಗೂ .ಅಗಸ್ತ್ಯ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಶ್ರೀಯುತ ಮೌನೇಶ್‍ರವರು, ಐ ಎಂ ಟಿ ಮಹೇಶ್ ರವರು ಯೋಗೇಶ್ ಮತ್ತು ಮೋಹನ್ ರವರು ಉಪಸ್ಥಿತರಿದ್ದರು.

ಹೊಸಕೋಟೆ ತಾ.ಪ್ರಾಥಮಿಕ ಆರೋಗ್ಯ ಕೇಂದ್ರ ನಂದಗುಡಿ,ಸುಗುಣ ಫುಡ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ” ರಕ್ತದಾನ ಶಿಬಿರ ” ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ನಂದಗುಡಿ ಹಾಗೂ ಸುಗುಣ ಫುಡ್ ಪ್ರೈವೇಟ್ ಲಿಮಿಟೆಡ್ ಇವರ ಸಂಯುಕ್ತ ಆಶ್ರಯದಲ್ಲಿ " ರಕ್ತದಾನ ಶಿಬಿರ " ವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಗುರುರಾಜ್ ರವರು ಮಾತನಾಡುತ್ತಾ ಜಗತ್ತಿನ ವೈದ್ಯಕೀಯ ರಂಗದಲ್ಲಿ ಒಬ್ಬರ ರಕ್ತವನ್ನು ಇನ್ನೊಬ್ಬರ ದೇಹಕ್ಕೆ ವರ್ಗಾಯಿಸುವ ಪ್ರಕ್ರಿಯೆಯೇ ಮಹತ್ತರವಾದ ಅನ್ವೇಷಣೆ ಮತ್ತು ರಕ್ತದಾನ - ಶ್ರೇಷ್ಠದಾನ ಎಂದೂ, ರಕ್ತಕ್ಕೆ ಪರ್ಯಾಯವಾದ ಇನ್ನೊಂದು ವಸ್ತುವಿಲ್ಲವೆಂದು ಹಾಗಾಗಿ ಸಾರ್ವಜನಿಕರು ಮುಕ್ತವಾಗಿ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಂಡು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ ಭಾಸ್ಕರ್ ರೆಡ್ಡಿ, ಮತ್ತು ಬೆಂಗಳೂರು ಸರ್ ಸಿವಿ ರಾಮನ್ ಸಾರ್ವಜನಿಕ ಆಸ್ಪತ್ರೆಯ ರಕ್ತ ನಿಧಿ ವಿಭಾಗದ ಮುಖ್ಯಸ್ಥರಾದ ಡಾ. ಶೀಲಾ ಮತ್ತು ಸುನಿಲ್ ಆಚಾರ್ಯರ ತಂಡ ಆಂಬುಲೆನ್ಸ್ ವಾಹನದೊಂದಿಗೆ ಆಗಮಿಸಿ, ಶಿಷ್ಟಾಚಾರದಂತೆ ಕ್ರಮಬದ್ಧವಾಗಿ ರಕ್ತ ಸಂಗ್ರಹಿಸಿ, ಅಭಿನಂದನ ಪ್ರಮಾಣ ಪತ್ರವನ್ನು ರಕ್ತ ದಾನಿಗಳಿಗೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಹೊಸಕೋಟೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಸತೀಶ್ ರವರ ನಿರ್ದೇಶನದ ಮೇರೆಗೆ ರಕ್ತನಿಧಿ ವಿಭಾಗದ ಪ್ರಯೋಗಶಾಲಾ ತಂತ್ರಜ್ಞಾಧಿಕಾರಿಯಾದ ಶ್ರೀ ಸುಭಾನ್, ತಾಲೂಕು ಕ್ಷಯ ರೋಗ ಘಟಕದ ಚಿಕಿತ್ಸಾ ಮೇಲ್ವಿಚಾರಕರಾದ ಮುಖ್ಯಸ್ಥರಾದ ಶ್ರೀ ಸುದೀಪ್ ಮತ್ತು ಆಪ್ತ ಸಮಾಲೋಚಕರಾದ ಶ್ರೀಮತಿ ಅಂಬಿಕಾ ಹಾಜರಿದ್ದು, ಹೆಚ್ಐವಿ ಏಡ್ಸ್ ಕುರಿತಂತೆ ಆರೋಗ್ಯ ಶಿಕ್ಷಣ ನೀಡಿದರು. ಸದರಿ ರಕ್ತದಾನ ಶಿಬಿರದಲ್ಲಿ ಒಟ್ಟು 47 ಯೂನಿಟ್ (350 ಎಮ್ ಲ್ ರಂತೆ ) ರಕ್ತ ಸಂಗ್ರಹಿಸಲಾಯಿತು.ಶಿಬಿರದಲ್ಲಿ ಪಾಲ್ಗೊಂಡ ಸರ್ವರಿಗೂ ಹಣ್ಣುಗಳು, ಬಾದಾಮಿ ಹಾಲು ಮತ್ತು ಊಟ ದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಟೇಕ್ವಾಂಡೋ ಕ್ರೀಡಾಪಟು ಲಕ್ಷ್ಮಿಗೆ ಪಕ್ಷ ಮಹಿಳಾ ಸಂಘದಿಂದ ಸತ್ಕಾರ

ಮೂಡಲಗಿ: ಲೆಬೆನಾನದಲ್ಲಿ ದೇಶದಲ್ಲಿ ಸೆ.8 ರಿಂದ 11 ರವರಿಗೆ ಜರುಗಲಿರುವ ಅಂತರ್‌ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಪ್ಯಾರಾ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಮೂಡಲಗಿಯ ಲಕ್ಷ್ಮೀ ಮಲ್ಲಪ್ಪ ರಡರಟ್ಟಿಯನ್ನು ಪಟ್ಟಣದ ಲಕ್ಷ್ಮೀ ನಗರದ ಪಕ್ಷ ಮಹಿಳಾ ಸಂಘದವರು ಸತ್ಕರಿಸಿ ಗೌರವಿಸಿದರು. ಈ ಸಂಧರ್ಭದಲ್ಲಿ ಸುಧಾ ಕೊಕಟನೂರ…

ಶುದ್ಧ ಕುಡಿಯುವ ನೀರಿನ ಘಟಕಗಳ ಮಾಲೀಕರು ಎಚ್ಚರಿಕೆ ವಹಿಸಲಿ: ಕೆಜಿಎಫ್: ಮಲೀನಗೊಂಡ ನೀರು ಸೇವಿಸಿದರೆ ಅತಿಸಾರ, ಡೆಂಗ್ಯೂ, ಟೇಪ್ಹಾಯ್ಡ್ ಚಿಕನ್ ಗುನ್ಯಾ, ದಂತಹ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ. ಕುಡಿಯುವ ನೀರಿನ ಘಟಕಗಳ ಮಾಲೀಕರು ಎಚ್ಚರಿಕೆ ವಹಿಸಬೇಕು ಎಂದು ತಹಶೀಲ್ದಾರ್ ಬಿ.ನಾಗವೇಣಿ ತಿಳಿಸಿದರು. ಕೆಜಿಎಫ್ ತಾಲೂಕ್ ಆಡಳಿತ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅನಧಿಕೃತವಾಗಿ ಕುಡಿಯುವ ನೀರಿನ ಮಾರಾಟ. ಕೆರೆ ಪಕ್ಕದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸುವುದು, ಚರಂಡಿಗಳ ಪಕ್ಕದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಿ ನೀರು ಪೂರೈಕೆ ಮಾಡುವವರ ಮೇಲೆ ಕ್ರಮ ಜರಗಿಸಲಾಗುವುದು ಎಂದರು. ಸಾರ್ವಜನಿಕರಿಗೆ ಕುಡಿಯುವ ನೀರು ಮಾರಾಟ ಮಾಡುವವರು ಆ ನೀರು ಕುಡಿಯಲು ಯೋಗ್ಯ ಇದೆಯೇ ಎಂಬುದನ್ನು ಪರೀಕ್ಷೆ ಮಾಡಿಸಿಕೊಳ್ಳಿ, ಯೋಗ್ಯವಲ್ಲದ ನೀರನ್ನು ಕ್ಲೋರಿ ನೀ ಕರೆಸಿ ಮತ್ತು ಕುಡಿಯಲು ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಂಡ ಬಳಿಕವಷ್ಟೇ ಸರೋಜನಿಕರಿಗೆ ಮಾರಾಟ ಮಾಡಬೇಕು . ಒಂದು ವೇಳೆ ಕುಡಿಯುವ ನೀರಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರಿದ್ದಲ್ಲಿ ಅಂತಹ ನೀರಿನ ಘಟಕಗಳ ಮಾಲೀಕರ ಮೇಲೆ ಕ್ರಿಮಿನಲ್ ಮೊ ಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ನಗರದಲ್ಲಿ ಕುಡಿಯುವ ನೀರು ಮಾರಾಟ ಮಾಡುವವರು ತಿಂಗಳಗೊಮ್ಮೆ ನೀರಿನ ಪರೀಕ್ಷೆ ಮಾಡಿಸಿಕೊಳ್ಳಿ ಶೇಕಡ 2.3ರಷ್ಟು ಮಾದರಿಗಳಲ್ಲಿ ಎಸ್ ಎಸ್ ಪಿ ಪಿ ಕಂಡು ಬಂದರೆ ಕುಡಿಯಲು ನೀರು ಯೋಗ್ಯವಾಗಿರುವುದಿಲ್ಲ. ಇಂತಹ ನೀರನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಯೋಗ್ಯವಾಗಿರುವುದಿಲ್ಲ ಆದ್ದರಿಂದ ಅಂತಹ ನೀರನ್ನು ಮಾರಾಟ ಮಾಡಬೇಡಿ ಎಂದು ಹೇಳಿದರು. ನಗರದ ಹಲವು ಬಡಾವಣೆಗಳಲ್ಲಿ ಖಾಸಗಿ ವ್ಯಕ್ತಿಗಳು ನಗರಸಭೆ ಅಥವಾ ಜಲ ಮಂಡಳಿಯಿಂದ ಯಾವುದೇ ಪರವಾನಗಿ ಪಡೆಯದೆ ಆರ್ ಓ ಪ್ಲಾಂಟ್ಗಳನ್ನು ಸ್ಥಾಪಿಸಿಕೊಂಡು ಕುಡಿಯುವ ನೀರನ್ನು ಮಾರಾಟ ಮಾಡುತ್ತಿದ್ದು, ಅಂತಹ ಆರ್ ಓ ಘಟಕಗಳ ವಿರುದ್ಧ ಸಂಬಂಧ ಪಟ್ಟ ಇಲಾಖೆಯವರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸಾರ್ವಜನಿಕರಿಂದ ದೂರುಗಳು ಬಂದಿವೆ ಎಂದರು.

ಸುಂದರ ಸಮಾಜದ ನಿರ್ಮಾಣದಲ್ಲಿ ಶಿಕ್ಷಕಕರ ಪಾತ್ರ ಮಹತ್ವದ್ದು : ಪ್ರೊ.ಬಿ.ಎಸ್.ಬಿರಾದಾರ ಸುಂದರ, ಸ್ವಸ್ಥ, ಸದೃಢ, ಸಮೃದ್ಧ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರರವರು ನುಡಿದರು. ಅವರು ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಆದರ್ಶ ಗುರು ಸದಾ ವಿದ್ಯಾರ್ಥಿಗಳ ಪ್ರೀತಿಗೆ, ಭಕ್ತಿಗೆ ಪಾತ್ರನಾಗಿರುತ್ತಾನೆ. ಕೇವಲ ಸಂಬಳಕ್ಕಾಗಿ ದುಡಿಯುವವ ಗುರುವಲ್ಲ. ಸತತ ಅಭ್ಯಾಸ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ಶ್ರಮಪಡುವವನೇ ನಿಜವಾದ ಗುರು. ಶಿಕ್ಷಕರ ಮೇಲೆ ಮಹತ್ವದ ಜವಾಬ್ದಾರಿಯಿದೆ. ಉತ್ತಮ ಶಿಕ್ಷಕನಿಂದ ಮಾತ್ರ ಸುಂದರ, ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಸ್ವತಃ ತಂದೆ ತಾಯಿಗಳಿಗಿಂತಲೂ ತಮ್ಮ ಅಧ್ಯಾಪಕ, ಗುರುವಿನಲ್ಲಿ ವಿದ್ಯಾರ್ಥಿ ದೃಢವಾದ ನಂಬಿಕೆ ವಿಶ್ವಾಸವಿಟ್ಟಿರುತ್ತಾನೆ. ಹಾಗಾಗಿ ಗುರುವನ್ನು ನಂಬಿ ಜ್ಞಾನಾರ್ಜನೆಗಾಗಿ ಬರುವ ವಿದ್ಯಾರ್ಥಿಗಳನ್ನು ಮಕ್ಕಳಂತೆ ಜ್ಞಾನಧಾರೆಯೆರೆಯುವುದು ಯೋಗ್ಯ ಶಿಕ್ಷಕನ ಕರ್ತವ್ಯ. ಅಂತಹ ಸಮರ್ಥ ಆ ಮೂಲಕ ಗುರುವೆನಿಸಿಕೊಳ್ಳುವವನು ವಿದ್ಯಾರ್ಥಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿರುತ್ತಾನೆ. ಅಂತಹ ಗುರುಗಳ, ಅಧ್ಯಾಪಕರ ಅವಶ್ಯಕತೆಯಿದೆ. ಗುರು ಗುರುವಾಗಿರಬೇಕೇ ವಿನಃ ಲಘುವಾಗಿರಬಾರದು ಎಂದರು. ವೇದಿಕೆಯಲ್ಲಿದ್ದ ಅತಿಥಿಗಳಾಗಿದ್ದ ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯಕರವರು ಮಾತನಾಡುತ್ತ ಶಿಕ್ಷಕರನ್ನು ವಿದ್ಯಾರ್ಥಿಗಳು ಅನುಕರಿಸುತ್ತಾರೆ. ಆದ್ದರಿಂದ ಶಿಕ್ಷಕರು ತಮ್ಮ ನಡೆ, ನುಡಿ, ವೇಶಭೂಷಣದಲ್ಲಿಯೂ ಶಿಸ್ತನ್ನು ಕಾಪಾಡಿಕೊಳ್ಳವುದು ಅವಶ್ಯಕವಾಗಿದೆ ಎಂದರು. ದ್ರೋಣಾಚಾರ್ಯರು ಕೌರವರು ಹಾಗೂ ಪಾಂಡವರೀರ್ವರಿಗೂ ವಿದ್ಯೆ ಧಾರೆಯೆರೆದರು. ಆದರೆ ಈರ್ವರೂ ಅದನ್ನು ಅವರು ಸ್ವೀಕರಿಸಿದ್ದೇ ವಿಭಿನ್ನವೆಂದರು. ವಿದ್ಯೆ ಮಾನವನನ್ನು ಮಹಾಮಾನವನನ್ನಾಗಿ ನಿರ್ಮಿಸಬೇಕೆಂದರು. ವೇದಿಕೆಯಲ್ಲಿ ಸ್ನಾತಕೋತ್ತರ ಕೇಂದ್ರ ಹಾಲಹಳ್ಳಿಯ ವಿಶೇಷಾಧಿಕಾರಿಗಳು ಮಾತನಾಡುತ್ತ ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನ ಪಡೆಯಬೇಕೆಂದರು. ಕಾರ್ಯಕ್ರಮದಲ್ಲಿ ಡಾ.ರಾಮಚಂದ್ರ ಗಣಾಪೂರ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಕು.ಅರ್ಚನಾ, ಮಲ್ಲಯ್ಯಸ್ವಾಮಿ , ಅಧ್ಯಾಪಕರಾದ ಡಾ.ಮಿಲಿನ್, ಡಾ.ಮುಸ್ತಾಖೀನ್‌ರವರು ಮಾತನಾಡಿದರು. ಡಾ.ಅಂಬರೀಶ ವೀರನಾಯಕ ವಂದಿಸಿದರು, ಡಾ.ಶಿವಕುಮಾರ ಸಂಗನ್‌ರವರು ನಿರೂಪಿಸಿದರು.

ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಾ ಗ್ರಾಮದಲ್ಲಿ ತುತ್ತಾಗಿ ಅವಶ್ಯಕತೆ ಇರುವ ಕಾಮಗಾರಿಗಳ ಮಾಹಿತಿ ನೀಡಬೇಕು

ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ತುರ್ತಾಗಿ ಅವಶ್ಯಕತೆ ಇರುವ ಕಾಮಗಾರಿಗಳ ಮಾಹಿತಿ ನೀಡಬೇಕು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕೆ ಮಳೆಗಾಲ ಇರುವ ಕಾರಣ ಸರ್ಕಾರಿ ಶಾಲೆ, ಆಸ್ಪತ್ರೆಗಳ ಕಟ್ಟಡ ಸೋರಿಕೆ ಸಮಸ್ಯೆಗಳನ್ನು ಶೀಘ್ರದಲ್ಲಿ ರೀಪೇರಿ ಪೂರ್ಣಗೊಳಿಸಬೇಕು ನೀರಲಕ್ಷö್ಯ ವಹಿಸಿದರೆ…

ಸುಳ್ಳು ಜಾತಿ ಪ್ರಮಾಣ ಪತ್ರ ಕಾನೂನು ಬಾಹಿರವಾಗಿ ದುರ್ಬಳಕೆ

ಬೀದರ ನಗರದ ಬೋಯಿಗಲ್ಲಿ ನಿವಾಸಿಯಾಗಿರುವ ಶಶಿಕಾಂತ ತಂದೆ ನಾಗೇಂದ್ರರಾವ ಹಿವರೆ ಜಾತಿ ಹಿಂದುಳಿದ ಪ್ರ ವರ್ಗ-1ಕ್ಕೆ ಸೇರಿರುವುದು, ಇವರ ಜನ್ಮ ದಿನಾಂಕ: 08/08/1965 ರಂತೆ ಇರುತ್ತದೆ. ಸರ್ಕಾರಿ ಹಿಂದಿ ಪಾಠ ಶಾಲೆಯ ನೋಂದಣಿ ಪುಸ್ತಕದ ಕ್ರಮ ಸಂಖ್ಯೆ: 708/1971-72 ರ ಜಾತಿ…

ಕೆ.ಆರ್.ಪುರ:

ಜನತಾ ರೈತ ಸಂಘದ ನೂತನ ಕಚೇರಿ ಉದ್ಘಾಟನೆ. ಬೆಂಗಳೂರಿನಲ್ಲಿ ಪ್ರಥಮ ಜನತಾ ರೈತ ಸಂಘದ ನೂತನ ಕಚೇರಿಯನ್ನುರಾಮಮೂರ್ತಿನಗರದಲ್ಲಿ ರಾಜ್ಯಾಧ್ಯಕ್ಷ ಆರ್ ಈರೇಗೌಡ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಆರ್ ಈರೇಗೌಡ ಅವರು ದೇಶದಲ್ಲಿ ಕೃಷಿ ಹಾಗೂ ಕೃಷಿಕರನ್ನು ಕಡೆಗಣಿಸಲಾಗಿದೆ.…

ಕೆ.ಆರ್.ಪುರ:

ಜನತಾ ರೈತ ಸಂಘದ ನೂತನ ಕಚೇರಿ ಉದ್ಘಾಟನೆ. ಬೆಂಗಳೂರಿನಲ್ಲಿ ಪ್ರಥಮ ಜನತಾ ರೈತ ಸಂಘದ ನೂತನ ಕಚೇರಿಯನ್ನುರಾಮಮೂರ್ತಿನಗರದಲ್ಲಿ ರಾಜ್ಯಾಧ್ಯಕ್ಷ ಆರ್ ಈರೇಗೌಡ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಆರ್ ಈರೇಗೌಡ ಅವರು ದೇಶದಲ್ಲಿ ಕೃಷಿ ಹಾಗೂ ಕೃಷಿಕರನ್ನು ಕಡೆಗಣಿಸಲಾಗಿದೆ.…