ಧಾರವಾಡ :- ಕನ್ನಡ ಮಾಧ್ಯಮದಲ್ಲಿ ಕಲಿತವರು ಕೂಡ ಐಎಎಸ್ ವೈದ್ಯಕೀಯ ಐಐಟಿ ಹಾಗೂ ವಿಜ್ಞಾನಿಗಳಾಗುತ್ತಾರೆ ಎಂಬುದನ್ನು ಬಿದರ ಬಾಲ್ಕಿಯ ಹಿರೇಮಠ ಸಂಸ್ಥಾನ ಚನ್ನಬಸವ ಗುರುಕುಲ ತೋರಿಸಿಕೊಟ್ಟಿದೆ ಎಂದು ಶ್ರೀ ಮಠದ ಡಾ.ಬಸವಲಿಂಗ ಸ್ವಾಮೀಜಿ ತಿಳಿಸಿದರು.
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ 134 ನೇ ಸಂಸ್ಥಾಪನೆ ದಿನಾಚರಣೆ ಅಂಗವಾಗಿ ಸಿರಿಗನ್ನಡಂ ಗೆಲ್ಗೆ ರಾ.ಹಾ.ದೇಶಪಾಂಡೆ ಪ್ರಶಸ್ತಿಯೊಂದಿಗೆ 50 ಸಾವಿರ ರೂಗಳ ಮೊತ್ತವನ್ನು ಶ್ರೀ ಮಠದ ಪರವಾಗಿ ಸ್ವೀಕರಿಸಿ ಮಾತನಾಡಿದ ಅವರು ಮಠದ ಮೊದಲನೆಯ ಸ್ವಾಮೀಜಿ ಚನ್ನಬಸವ ಪಟ್ಟದೇವರು ತಮ್ಮ ಸಮಯದಲ್ಲಿ ಕನ್ನಡ ಭಾಷೆ ಬೆಳೆಸಲು ಸಾಕಷ್ಟು ಕಷ್ಟಪಟ್ಟಿದ್ದಾರೆ . ಬೀಸು ಕಲ್ಲಿಗೆ ಜೋಳಿಗೆ ಹಾಕಿ ವಾರಕ್ಕೊಮ್ಮೆ ಮನೆ ಮನೆಗೆ ಜೋಳ ಸಂಗ್ರಹಸಿ ಅದರಿಂದ ನಿತ್ಯ ಮಕ್ಕಳಿಗೆ ಪ್ರಸಾದ ಬಡಿಸುತ್ತಿದ್ದರು. ಬೕಿದರ ಭಾಗ ಸೇರಿದಂತೆ ಕರ್ನಾಟಕದಲ್ಲಿ ಕನ್ನಡ ಉಳಿಸಲು ಚನ್ನಬಸವ ಸ್ವಾಮೀಜಿ ಕಾರ್ಯಾ ಮಹತ್ವದ್ದು ಶ್ರೀ ಮಠದ ಕನ್ನಡದ ಸೇವೆಯನ್ನು ಕಿತ್ತೂರು ಕರ್ನಾಟಕ ಭಾಗಕ್ಕೂ ತಲುಪಿಸಿದ್ದ ಕೀರ್ತಿ ಗದಗ ತೋಟದಾರ್ಯ ಮಠದ ಹಿಂದಿನ ಸ್ವಾಮೀಜಿಗೆ ಸಲ್ಲುತ್ತದೆ.ನಿಜಾಮನ ಆಡಳಿತವಿದ್ದಾಗ ಮರಾಠಿ ,ಉರ್ದು ,ಇಂಗ್ಲೀಷ್ ಭಾಷಾ ಪ್ರಬಲದ ಮಧ್ಯೆ ನಮ್ಮ ಗುರುಗಳಾದ ಚನ್ನಬಸವ ಸ್ವಾಮೀಜಿ ಮನೆ ಮನೆಗೆ ಆಲೆದಾಡಿ ಕನ್ನಡದ ಮಕ್ಕಳನ್ನು ಸೃಷ್ಟಿಸಿದ ಹಾಗೂ ಆ ಭಾಗದಲ್ಲಿ ಕನ್ನಡದ ಉಳಿವಿಗೆ ಕಾರಣರಾದವರು.ಅದೇ ಪರಂಪರೆ ಈಗಲೂ ಮುಂದುವರೆದಿದ್ದು ಗುರುಕುಲದಲ್ಲಿ 10ನೇ ತರಗತಿ ವರ್ಗದವರೆಗೂ ಕನ್ನಡ ಮಾಧ್ಯಮದಲ್ಲಿಯೇ ಕಲಿತ ಅದೆಷ್ಟೋ ವಿದ್ಯಾರ್ಥಿಗಳಿಂದು ವಿಜ್ಞಾನಿಗಳಾಗಿದ್ದಾರೆ, ಪೈಲೆಟ್ ಗಳಾಗಿದ್ದಾರೆ ಹಾಗೂ ಐಐಟಿ ಮುಗಿಸಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇದ್ದಾರೆ.ಇಂತಹ ಮಠದ ಸೇವೆ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಶಸ್ತಿ ಪ್ರಧಾನಿ ಮಾಡಿ ಮಾತನಾಡಿದ ಅವರು ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡ ಪ್ರಚಾರ, ಧರ್ಮ ಪ್ರಚಾರ ಹಾಗೂ ಪ್ರವಚನ ಮೂಲಕ ಬಾಲ್ಕಿ ಶ್ರೀಮಠ ಪ್ರಸಿದ್ಧವಾಗಿದೆ.ನಾವು ಮುಖ್ಯಮಂತ್ರಿ ಇದ್ದಾಗ ಈ ಮಠಕ್ಕೆ ರಾಜೋತ್ಸವ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದು ಹೆಮ್ಮೆ ಮೂಡಿಸಿದೆ.ಬಸವಣ್ಣನವರು ಕರ್ಮ ಭೂಮಿಯಲ್ಲಿ ಬಾಲ್ಕಿ ಮಠ ಒಂದು ಉತ್ತಮ ಕೆಲಸ ಮಾಡಿದ್ದು ಶ್ರೀಮಠದ ಎಲ್ಲ ಕನಸುಗಳು ನನಸಾಗಲಿ. ಇಂಗ್ಲಿಷ್ ,ಮರಾಠಿ ಭಾಷಾ ಪ್ರಾಬಲ್ಯವಿದ್ದ ಸಮಯದಲ್ಲಿ ಕನ್ನಡ ಬೆಳೆಸಲು ರಾ ಹ ದೇಶಪಾಂಡೆ ಕಾರ್ಯಾ ಶ್ಲಾಘನೀಯ.
1890 ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದ್ದು ಮುಂದಾಲೋಚನೆ ಮಾಡಿ ಕರ್ನಾಟಕ ಎಂಬ ಶಬ್ದ ಬಳಸಿದ್ದು ಈ ಸಂಘದಿಂದ ಕನ್ನಡಕ್ಕೆ ಮತ್ತಷ್ಟು ಶಕ್ತಿ ತಂದಿದೆ. ಅದನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು ಮತ್ತು ಸರ್ಕಾರ ಸರಿಯಾದ ಅನುದಾನ ನೀಡಬೇಕೆಂದು ಮನವರಿಕೆ ಮಾಡಿದರು.
ನಿಜಾಮರ ಹಾಗೂ ರಜಾಕಾರರ ಹಾವಳಿ ಮಧ್ಯ ಮಠದ ಹೊರಗಡೆ ಉರ್ದು ನಾಮ ಪಲಕ ಹಾಕಿ ಒಳಗಡೆ ಕನ್ನಡ ಕಲಿಸುತ್ತಿದ್ದ ಚನ್ನಬಸವ ಸ್ವಾಮೀಜಿ ಹಾಗೂ ಶ್ರೀಮಠದ ಬಗ್ಗೆ ಅದ್ಭುತವಾಗಿ ಸಂಗ್ರಹಯೋಗ್ಯ ಮಾಹಿತಿಯನ್ನು ಹಿರೇಮಲ್ಲೂರ ಈಶ್ವರನ ಕಾಲೇಜು ಪ್ರಾಚಾರ್ಯ ಶಶಿಧರ್ ತೋಡಕರ ಅವರು ತಮ್ಮ ಭಾಷಣದಲ್ಲಿ ಹೇಳಿದರು.
ವಿಶ್ವೇಶ್ವರ ಹಿರೇಮಠ ಆರಂಭದಲ್ಲಿ ಡಾ. ಗಂಗೂಬಾಯಿ ಹಾನಗಲ್ ಸ್ಮರಣೆ ಮಾಡಿದರು. ರಾ ಹ ದೇಶಪಾಂಡೆ ಕುರಿತು ಡಾ. ಸಂಜೀವ್ ಕುಲಕರ್ಣಿ ಮಾತನಾಡಿದರು.
ಡಾ.ಜಿನದತ್ತ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ,ಚಂದ್ರಕಾಂತ್ ಬೆಲ್ಲದ ,ಶಂಕರ್ ಹಲಗತ್ತಿ , ಶಿವಾನಂದ ಬಾವಿಕಟ್ಟಿ ,ವೀರಣ್ಣ ವಡ್ಡಿನ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಭಾಷೆಯ ಮಹತ್ವಸಾರಿದ ಬಾಲ್ಕಿ ಚನ್ನಬಸವ ಸ್ವಾಮೀಜಿ.


ಧಾರವಾಡ :- ಕನ್ನಡ ಮಾಧ್ಯಮದಲ್ಲಿ ಕಲಿತವರು ಕೂಡ ಐಎಎಸ್ ವೈದ್ಯಕೀಯ ಐಐಟಿ ಹಾಗೂ ವಿಜ್ಞಾನಿಗಳಾಗುತ್ತಾರೆ ಎಂಬುದನ್ನು ಬಿದರ ಬಾಲ್ಕಿಯ ಹಿರೇಮಠ ಸಂಸ್ಥಾನ ಚನ್ನಬಸವ ಗುರುಕುಲ ತೋರಿಸಿಕೊಟ್ಟಿದೆ ಎಂದು ಶ್ರೀ ಮಠದ ಡಾ.ಬಸವಲಿಂಗ ಸ್ವಾಮೀಜಿ ತಿಳಿಸಿದರು.
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ 134 ನೇ ಸಂಸ್ಥಾಪನೆ ದಿನಾಚರಣೆ ಅಂಗವಾಗಿ ಸಿರಿಗನ್ನಡಂ ಗೆಲ್ಗೆ ರಾ.ಹಾ.ದೇಶಪಾಂಡೆ ಪ್ರಶಸ್ತಿಯೊಂದಿಗೆ 50 ಸಾವಿರ ರೂಗಳ ಮೊತ್ತವನ್ನು ಶ್ರೀ ಮಠದ ಪರವಾಗಿ ಸ್ವೀಕರಿಸಿ ಮಾತನಾಡಿದ ಅವರು ಮಠದ ಮೊದಲನೆಯ ಸ್ವಾಮೀಜಿ ಚನ್ನಬಸವ ಪಟ್ಟದೇವರು ತಮ್ಮ ಸಮಯದಲ್ಲಿ ಕನ್ನಡ ಭಾಷೆ ಬೆಳೆಸಲು ಸಾಕಷ್ಟು ಕಷ್ಟಪಟ್ಟಿದ್ದಾರೆ . ಬೀಸು ಕಲ್ಲಿಗೆ ಜೋಳಿಗೆ ಹಾಕಿ ವಾರಕ್ಕೊಮ್ಮೆ ಮನೆ ಮನೆಗೆ ಜೋಳ ಸಂಗ್ರಹಸಿ ಅದರಿಂದ ನಿತ್ಯ ಮಕ್ಕಳಿಗೆ ಪ್ರಸಾದ ಬಡಿಸುತ್ತಿದ್ದರು. ಬೕಿದರ ಭಾಗ ಸೇರಿದಂತೆ ಕರ್ನಾಟಕದಲ್ಲಿ ಕನ್ನಡ ಉಳಿಸಲು ಚನ್ನಬಸವ ಸ್ವಾಮೀಜಿ ಕಾರ್ಯಾ ಮಹತ್ವದ್ದು ಶ್ರೀ ಮಠದ ಕನ್ನಡದ ಸೇವೆಯನ್ನು ಕಿತ್ತೂರು ಕರ್ನಾಟಕ ಭಾಗಕ್ಕೂ ತಲುಪಿಸಿದ್ದ ಕೀರ್ತಿ ಗದಗ ತೋಟದಾರ್ಯ ಮಠದ ಹಿಂದಿನ ಸ್ವಾಮೀಜಿಗೆ ಸಲ್ಲುತ್ತದೆ.ನಿಜಾಮನ ಆಡಳಿತವಿದ್ದಾಗ ಮರಾಠಿ ,ಉರ್ದು ,ಇಂಗ್ಲೀಷ್ ಭಾಷಾ ಪ್ರಬಲದ ಮಧ್ಯೆ ನಮ್ಮ ಗುರುಗಳಾದ ಚನ್ನಬಸವ ಸ್ವಾಮೀಜಿ ಮನೆ ಮನೆಗೆ ಆಲೆದಾಡಿ ಕನ್ನಡದ ಮಕ್ಕಳನ್ನು ಸೃಷ್ಟಿಸಿದ ಹಾಗೂ ಆ ಭಾಗದಲ್ಲಿ ಕನ್ನಡದ ಉಳಿವಿಗೆ ಕಾರಣರಾದವರು.ಅದೇ ಪರಂಪರೆ ಈಗಲೂ ಮುಂದುವರೆದಿದ್ದು ಗುರುಕುಲದಲ್ಲಿ 10ನೇ ತರಗತಿ ವರ್ಗದವರೆಗೂ ಕನ್ನಡ ಮಾಧ್ಯಮದಲ್ಲಿಯೇ ಕಲಿತ ಅದೆಷ್ಟೋ ವಿದ್ಯಾರ್ಥಿಗಳಿಂದು ವಿಜ್ಞಾನಿಗಳಾಗಿದ್ದಾರೆ, ಪೈಲೆಟ್ ಗಳಾಗಿದ್ದಾರೆ ಹಾಗೂ ಐಐಟಿ ಮುಗಿಸಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇದ್ದಾರೆ.ಇಂತಹ ಮಠದ ಸೇವೆ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಶಸ್ತಿ ಪ್ರಧಾನಿ ಮಾಡಿ ಮಾತನಾಡಿದ ಅವರು ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡ ಪ್ರಚಾರ, ಧರ್ಮ ಪ್ರಚಾರ ಹಾಗೂ ಪ್ರವಚನ ಮೂಲಕ ಬಾಲ್ಕಿ ಶ್ರೀಮಠ ಪ್ರಸಿದ್ಧವಾಗಿದೆ.ನಾವು ಮುಖ್ಯಮಂತ್ರಿ ಇದ್ದಾಗ ಈ ಮಠಕ್ಕೆ ರಾಜೋತ್ಸವ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದು ಹೆಮ್ಮೆ ಮೂಡಿಸಿದೆ.ಬಸವಣ್ಣನವರು ಕರ್ಮ ಭೂಮಿಯಲ್ಲಿ ಬಾಲ್ಕಿ ಮಠ ಒಂದು ಉತ್ತಮ ಕೆಲಸ ಮಾಡಿದ್ದು ಶ್ರೀಮಠದ ಎಲ್ಲ ಕನಸುಗಳು ನನಸಾಗಲಿ. ಇಂಗ್ಲಿಷ್ ,ಮರಾಠಿ ಭಾಷಾ ಪ್ರಾಬಲ್ಯವಿದ್ದ ಸಮಯದಲ್ಲಿ ಕನ್ನಡ ಬೆಳೆಸಲು ರಾ ಹ ದೇಶಪಾಂಡೆ ಕಾರ್ಯಾ ಶ್ಲಾಘನೀಯ.
1890 ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದ್ದು ಮುಂದಾಲೋಚನೆ ಮಾಡಿ ಕರ್ನಾಟಕ ಎಂಬ ಶಬ್ದ ಬಳಸಿದ್ದು ಈ ಸಂಘದಿಂದ ಕನ್ನಡಕ್ಕೆ ಮತ್ತಷ್ಟು ಶಕ್ತಿ ತಂದಿದೆ. ಅದನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು ಮತ್ತು ಸರ್ಕಾರ ಸರಿಯಾದ ಅನುದಾನ ನೀಡಬೇಕೆಂದು ಮನವರಿಕೆ ಮಾಡಿದರು.
ನಿಜಾಮರ ಹಾಗೂ ರಜಾಕಾರರ ಹಾವಳಿ ಮಧ್ಯ ಮಠದ ಹೊರಗಡೆ ಉರ್ದು ನಾಮ ಪಲಕ ಹಾಕಿ ಒಳಗಡೆ ಕನ್ನಡ ಕಲಿಸುತ್ತಿದ್ದ ಚನ್ನಬಸವ ಸ್ವಾಮೀಜಿ ಹಾಗೂ ಶ್ರೀಮಠದ ಬಗ್ಗೆ ಅದ್ಭುತವಾಗಿ ಸಂಗ್ರಹಯೋಗ್ಯ ಮಾಹಿತಿಯನ್ನು ಹಿರೇಮಲ್ಲೂರ ಈಶ್ವರನ ಕಾಲೇಜು ಪ್ರಾಚಾರ್ಯ ಶಶಿಧರ್ ತೋಡಕರ ಅವರು ತಮ್ಮ ಭಾಷಣದಲ್ಲಿ ಹೇಳಿದರು.
ವಿಶ್ವೇಶ್ವರ ಹಿರೇಮಠ ಆರಂಭದಲ್ಲಿ ಡಾ. ಗಂಗೂಬಾಯಿ ಹಾನಗಲ್ ಸ್ಮರಣೆ ಮಾಡಿದರು. ರಾ ಹ ದೇಶಪಾಂಡೆ ಕುರಿತು ಡಾ. ಸಂಜೀವ್ ಕುಲಕರ್ಣಿ ಮಾತನಾಡಿದರು.
ಡಾ.ಜಿನದತ್ತ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ,ಚಂದ್ರಕಾಂತ್ ಬೆಲ್ಲದ ,ಶಂಕರ್ ಹಲಗತ್ತಿ , ಶಿವಾನಂದ ಬಾವಿಕಟ್ಟಿ ,ವೀರಣ್ಣ ವಡ್ಡಿನ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *