ರೈತರು ಸಂಘಟಿತ ಹೋರಾಟ ನಡೆಸದಿದ್ದರೆ ರೈತ ಕುಲವೇ ನಾಶವಾಗುತ್ತದೆ

ಸರ್ಕಾರಗಳು ರೈತರ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಾರೆ ರೈತರ ಮೂಗಿಗೆ ತುಪ್ಪ ಸವರುತ್ತಾರೆ ಈ ರೀತಿಯ ಶೋಷಣೆಗಳಿಂದಲೇ ರೈತರ ಆತ್ಮಹತ್ಯೆಗಳಾಗುತ್ತಿವೆ ಸ್ವಾತಂತ್ರ ಬಂದು 75 ವರ್ಷಗಳಾದರೂ ರೈತರ ಶೋಷಣೆ ನಿಂತಿಲ್ಲ ಒಂದು ವರ್ಷ ಕಾಲ ಹೋರಾಟ ಮಾಡಿದರು ರೈತರಿಗೆ ಎಂ ಎಸ್ ಪಿ ಗ್ಯಾರಂಟಿ ಸಿಕ್ಕಿಲ್ಲ ಸಾಲ ಮಾಡಿ ವಿದೇಶಕ್ಕೆ ಹಾರಿ ಹೋಗುವ ಬಂಡವಾಳ ಶಾಹಿಗಳಿಗೆ ಸಾವಿರಾರು ಕೋಟಿ ಸುಲಭ ಸಾಲ ಸಿಗುತ್ತದೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ರೈತರ ಜಮೀನಿಗೆ ಒಂದು ಲಕ್ಷ ಸಾಲ ನೀಡಲು ಸತಾಯಿಸುತ್ತಾರೆ ಇದು ರೈತರ ದೌರ್ಭಾಗ್ಯ ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿ ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗುತ್ತಿದೆ ರೈತರು ಸೇವಕರಾಗುತ್ತಿದ್ದಾರೆ ಇದಕ್ಕಾಗಿ ಸಂಘಟಿತ ಹೋರಾಟದ ಅನಿವಾರ್ಯತೆ ಇದೆ ಕೆಲವು ರೈತ ಸಂಘಟನೆಗಳು ರಾಜಕೀಯ ಪಕ್ಷಗಳ ಮುಖವಾಡಗಳಾಗಿವೆ ಇದು ಕೂಡ ರೈತರ ದುರ್ಬಲತೆಗೆ ಕಾರಣವಾಗುತ್ತದೆ ರಾಜಕೀಯ ಪಕ್ಷಗಳು ಇಂಥವರನ್ನು ಬಳಸಿ
ರೈತರ ಶೋಷಣೆ ಮಾಡುತ್ತಿದ್ದಾರೆ ಇಂತಹ ಇಬ್ಬಂದಿಗಳ ನೀತಿ ವಿರುದ್ಧ ಹೋರಾಡಲು ಜಾಗೃತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್ ಜಾಗೃತ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು

ರಾಜ್ಯಮಟ್ಟದ ಎರಡು ದಿನಗಳ ಜಾಗೃತ ಕಾರ್ಯಗಾರ ಉದ್ಘಾಟನೆ ಮಾಡಿದ ಬೆಳಗಾವಿಯ ಸಾವಯುವ ಕೃಷಿಕ ಸುರೇಶ್ ಬಿ ದೇಸಾಯಿ ಮಾತನಾಡಿ ಬಸವಣ್ಣನವರ ಅನುಭವ ಮಂಟಪದಲ್ಲಿ ರೈತರಿಗೆ ಸ್ವಾಭಿಮಾನಿ ಸ್ವಾವಲಂಬಿ ಬದುಕು ಕಲಿಸುವ ಕಾರ್ಯಗಾರ ಉದ್ಘಾಟನೆ ಮಾಡುತ್ತಿರುವುದು ರೈತನಾಗಿ ನನಗೆ ಸಂತೋಷದ ಸಂಗತಿಯಾಗಿದೆ ಎಂದರು
ರಾಜ್ಯ ರೈತ ಸಂಘ ರಾಜ್ಯ ಸಂಚಾಲಕ ಪ್ರಸನ್ನಕುಮಾರ್
ರಾಜ್ಯ ಕಬ್ಬು ಬೆಳೆಗಾರ ಸಂಘದ ಕಾರ್ಯಧ್ಯಕ್ಷ ವೀರನಗೌಡ ಪಾಟೀಲ್ ಮಾತನಾಡಿದರು
ಶಿವಲೀಲಾ ಸ್ವಾಗತ ಮಾಡಿದರು
ಪರಶುರಾಮ್ ಎತ್ತಿನ ಗುಡ್ಡ ಕಾರ್ಯಕ್ರಮ ನಿರ್ವಹಿಸಿದರು
150ಕ್ಕೂ ಹೆಚ್ಚು ರಾಜ ಜಿಲ್ಲಾ ತಾಲೂಕು ಪದಾಧಿಕಾರಿಗಳು ಭಾಗವಹಿಸಿದರು.

ವರದಿ,, ಮುಜಮೀಲ ಜರ್ಮನ್
ಬಾಗಲಕೋಟ್

25-7-23 ಕೂಡಲಸಂಗಮ

ರೈತರು ಸಂಘಟಿತ ಹೋರಾಟ ನಡೆಸದಿದ್ದರೆ ರೈತ ಕುಲವೇ ನಾಶವಾಗುತ್ತದೆ

ಸರ್ಕಾರಗಳು ರೈತರ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಾರೆ ರೈತರ ಮೂಗಿಗೆ ತುಪ್ಪ ಸವರುತ್ತಾರೆ ಈ ರೀತಿಯ ಶೋಷಣೆಗಳಿಂದಲೇ ರೈತರ ಆತ್ಮಹತ್ಯೆಗಳಾಗುತ್ತಿವೆ ಸ್ವಾತಂತ್ರ ಬಂದು 75 ವರ್ಷಗಳಾದರೂ ರೈತರ ಶೋಷಣೆ ನಿಂತಿಲ್ಲ ಒಂದು ವರ್ಷ ಕಾಲ ಹೋರಾಟ ಮಾಡಿದರು ರೈತರಿಗೆ ಎಂ ಎಸ್ ಪಿ ಗ್ಯಾರಂಟಿ ಸಿಕ್ಕಿಲ್ಲ ಸಾಲ ಮಾಡಿ ವಿದೇಶಕ್ಕೆ ಹಾರಿ ಹೋಗುವ ಬಂಡವಾಳ ಶಾಹಿಗಳಿಗೆ ಸಾವಿರಾರು ಕೋಟಿ ಸುಲಭ ಸಾಲ ಸಿಗುತ್ತದೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ರೈತರ ಜಮೀನಿಗೆ ಒಂದು ಲಕ್ಷ ಸಾಲ ನೀಡಲು ಸತಾಯಿಸುತ್ತಾರೆ ಇದು ರೈತರ ದೌರ್ಭಾಗ್ಯ ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿ ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗುತ್ತಿದೆ ರೈತರು ಸೇವಕರಾಗುತ್ತಿದ್ದಾರೆ ಇದಕ್ಕಾಗಿ ಸಂಘಟಿತ ಹೋರಾಟದ ಅನಿವಾರ್ಯತೆ ಇದೆ ಕೆಲವು ರೈತ ಸಂಘಟನೆಗಳು ರಾಜಕೀಯ ಪಕ್ಷಗಳ ಮುಖವಾಡಗಳಾಗಿವೆ ಇದು ಕೂಡ ರೈತರ ದುರ್ಬಲತೆಗೆ ಕಾರಣವಾಗುತ್ತದೆ ರಾಜಕೀಯ ಪಕ್ಷಗಳು ಇಂಥವರನ್ನು ಬಳಸಿ
ರೈತರ ಶೋಷಣೆ ಮಾಡುತ್ತಿದ್ದಾರೆ ಇಂತಹ ಇಬ್ಬಂದಿಗಳ ನೀತಿ ವಿರುದ್ಧ ಹೋರಾಡಲು ಜಾಗೃತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್ ಜಾಗೃತ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು

ರಾಜ್ಯಮಟ್ಟದ ಎರಡು ದಿನಗಳ ಜಾಗೃತ ಕಾರ್ಯಗಾರ ಉದ್ಘಾಟನೆ ಮಾಡಿದ ಬೆಳಗಾವಿಯ ಸಾವಯುವ ಕೃಷಿಕ ಸುರೇಶ್ ಬಿ ದೇಸಾಯಿ ಮಾತನಾಡಿ ಬಸವಣ್ಣನವರ ಅನುಭವ ಮಂಟಪದಲ್ಲಿ ರೈತರಿಗೆ ಸ್ವಾಭಿಮಾನಿ ಸ್ವಾವಲಂಬಿ ಬದುಕು ಕಲಿಸುವ ಕಾರ್ಯಗಾರ ಉದ್ಘಾಟನೆ ಮಾಡುತ್ತಿರುವುದು ರೈತನಾಗಿ ನನಗೆ ಸಂತೋಷದ ಸಂಗತಿಯಾಗಿದೆ ಎಂದರು
ರಾಜ್ಯ ರೈತ ಸಂಘ ರಾಜ್ಯ ಸಂಚಾಲಕ ಪ್ರಸನ್ನಕುಮಾರ್
ರಾಜ್ಯ ಕಬ್ಬು ಬೆಳೆಗಾರ ಸಂಘದ ಕಾರ್ಯಧ್ಯಕ್ಷ ವೀರನಗೌಡ ಪಾಟೀಲ್ ಮಾತನಾಡಿದರು
ಶಿವಲೀಲಾ ಸ್ವಾಗತ ಮಾಡಿದರು
ಪರಶುರಾಮ್ ಎತ್ತಿನ ಗುಡ್ಡ ಕಾರ್ಯಕ್ರಮ ನಿರ್ವಹಿಸಿದರು
150ಕ್ಕೂ ಹೆಚ್ಚು ರಾಜ ಜಿಲ್ಲಾ ತಾಲೂಕು ಪದಾಧಿಕಾರಿಗಳು ಭಾಗವಹಿಸಿದರು.

ವರದಿ,, ಮುಜಮೀಲ ಜರ್ಮನ್
ಬಾಗಲಕೋಟ್

Leave a Reply

Your email address will not be published. Required fields are marked *