
ಹೊಸಕೋಟೆ : ಪ್ರತಿಯೊಬ್ಬರು ದಿನನಿತ್ಯ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಮಾದರಿ ಶಾಲೆ ನಿರ್ಮಾಣವನ್ನು ಮಾಡುವುದಾಗಿ ಬರಸು ಭರವಸೆಯನ್ನು ಶಾಸಕ ಶರತ್ ಬಚ್ಚೇಗೌಡ ನೀಡಿದರು. ನಗರದ ಜಿಕೆಬಿಎಂಎಸ್ ಶಾಲಾ ಆವರಣದಲ್ಲಿ ಸುಮಾರು 1 ಕೋಟಿ 25 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ಬಿ.ಎನ್.ಬಚ್ಚೇಗೌಡ ಡಾ.ಜೋಸೆಫ್ ವಿಜಿ ಅಕಾಡೆಮಿ ನೂತನ ಬ್ಲಾಕ್ (ಕಟ್ಟಡ) ವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಗಾರ್ಡನ್ ಸಿಟಿ ಯುನಿವರ್ಸಿಟಿ ಸಂಸ್ಥೆಯವರು ವಿದ್ಯಾಭ್ಯಾಸಕ್ಕೆ ಉತ್ತಮವಾದ ಯೋಜನೆಯನ್ನು ರೂಪಿಸಿದ್ದಾರೆ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ನಮಗೆ ಸುಂದರವಾದ ಕಟ್ಟಡವನ್ನು ಕಟ್ಟಿಕೊಟ್ಟಿದ್ದಾರೆ ಅವರಿಗೆ ಅನಂತ ಅನಂತ ಧನ್ಯವಾದಗಳು ತಿಳಿಸುತ್ತೇನೆ. ಗಟ್ಟಿ ಮುಟ್ಟಾದ ಪಾಯವನ್ನು ನಮ್ಮ ಪ್ರಾಥಮಿಕ ಶಿಕ್ಷಕರು ಎಲ್ಲರೂ ಸೇರಿ ಮಾಡಬೇಕು, ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲವಾಗುತ್ತದೆ, ಮಕ್ಕಳಿಗೆ ಪುಸ್ತಕವನ್ನು ಓದುವ ಅಭ್ಯಾಸವನ್ನು ತಾವೆಲ್ಲರೂ ಮಾಡಬೇಕು ಎಂದು ಎಲ್ಲಾ ಶಿಕ್ಷಕರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿ.ಎನ್. ಬಚ್ಚೇಗೌಡ ಮಾಜಿ ಸಚಿವರು ಹಾಗೂ ಮಾಜಿ ಲೋಕಸಭಾ ಸದಸ್ಯರು,ಡಾ. ಜೋಸೆಫ್ ವಿ ಜಿ ಕುಲಾಧಿಪತಿ ಗಾರ್ಡನ್ ಸಿಟಿ ಯೂನಿವರ್ಸಿಟಿ ಬೆಂಗಳೂರು,ಡೈರೆಕ್ಟರ್ ಕ್ರಿಷ್ಟೋ ಜೋಸೆಫ್ , ನಗರಸಭಾ ಸದಸ್ಯರು ಶ್ರೀಮತಿ ಗಾಯತ್ರಿ ವಿಜಯಕುಮಾರ್ ಮತ್ತು ಎಸ್ಡಿಎಂಸಿ ಸದಸ್ಯರು ಜಿಕೆಬಿಎಂಎಸ್ ಶಾಲೆ,ಡಿ.ಎಸ್. ರಾಜಕುಮಾರ್ ಗೌರವಾಧ್ಯಕ್ಷರು, ಕೇಶವಮೂರ್ತಿ ಅಧ್ಯಕ್ಷರು, ಯೋಜನಾ ಪ್ರಾಧಿಕಾರ, ಹೊಸಕೋಟೆ ,ಸದಸ್ಯರಾದ ಎಚ್ ಎಮ್ ಸುಬ್ಬರಾಜು ,ತಹಸೀಲ್ದಾರ್ ಸೋಮಶೇಖರ್, ತಾಲ್ಲೂಕು ಪಂಚಾಯಿತಿ ಇಓ ಡಾ. ನಾರಾಯಣ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪದ್ಮನಾಭ, ಜಿಕೆಎಂಎಸ್ ಶಾಲೆಯ ಸ್ಥಳ ಧಾನಿಗಳಾದ ಚಟೇಬಸಪ್ಪನವರ ಮೊಮ್ಮಗ ಶಿವಕುಮಾರ್, ಜಿಕೆಬಿಎಂಎಸ್ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಮಾ ಮುಖ್ಯೋಪಧ್ಯಾಯರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.