






‘ವಿವಿಧ ಬೆಳೆಗಳಲ್ಲಿ ಬೇರು ಹುಳುಗಳ ನಿರ್ವಹಣೆ’ ಕಾರ್ಯಾಗಾರ :
ಬ್ಯಾಟರಾಯನಪುರ : ವಿಶಿಷ್ಠವಾದ ಜೀವನಚಕ್ರ ಹೊಂದಿರುವ ಬೇರು ಹುಳುಗಳು ಶೇಂಗಾ, ಕಬ್ಬು, ಅಡಿಕೆ ಮುಂತಾದ ಬೆಳೆಗಳಲ್ಲಿ ತೀವ್ರ ಆರ್ಥಿಕ ನಷ್ಟವನ್ನು ಉಂಟು ಮಾಡುತ್ತವೆ. ಇವುಗಳನ್ನು ಸಕಾಲದಲ್ಲಿ ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸಿ ಯಶಸ್ವಿಯಾಗಿ ನಿಯಂತ್ರಿಸಬಹುದು ಎಂದು ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಸಂಶೋಧನಾ ನಿರ್ದೇಶಕರಾದ ಡಾ.ಎಚ್.ಎಸ್.ಶಿವರಾಮು ತಿಳಿಸಿದರು.
ಜಿಕೆವಿಕೆ ಆವರಣದಲ್ಲಿ ಅಖಿಲ ಭಾರತ ಮಣ್ಣು ಸಂಧಿಪದಿ ಕೀಟ ಪೀಡೆಗಳ ಸಂಯೋಜಿತ ಪ್ರಾಯೋಜನೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ವಿವಿಧ ಬೆಳೆಗಳಲ್ಲಿ ಬೇರು ಹುಳುಗಳ ನಿರ್ವಹಣೆ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ‘ಬೇರು ಹುಳುಗಳು ತಮ್ಮ ಜೀವಿತಾವಧಿಯ ಬಹುತೇಕ ಸಮಯವನ್ನು ಭೂಮಿಯ ಒಳಗಡೆ ಕಳೆದು, ಬೇಸಿಗೆ ಮಳೆಯಲ್ಲಿ ದುಂಬಿಗಳು ಭೂಮಿಯಿಂದ ಹೊರಬಂದು ಜೀವನ ಚಕ್ರವನ್ನು ಆರಂಭಿಸುತ್ತವೆ. ಈ ವೇಳೆಯಲ್ಲಿಯೇ ರೈತರು ಒಟ್ಟಾಗಿ ದುಂಬಿಗಳನ್ನು ಹಿಡಿಯುವುದು ಮತ್ತು ಮರಿ ಹುಳುಗಳನ್ನು ಸೂಕ್ತ ಜೈವಿಕ ಅಥವಾ ಕೀಟನಾಶಕವನ್ನು ಉಪಯೋಗಿಸುವ ಮೂಲಕ ಬೆಳೆಗಳಲ್ಲಿ ಬೇರು ಹುಳುಗಳಿಂದಾಗಿ ಸಂಭವಿಸುವ ನಷ್ಟವನ್ನು ತಗ್ಗಿಸಿ, ಹೆಚ್ಚು ಇಳುವರಿ ಗಳಿಸಲು ಸಾಧ್ಯ ಎಂದರು.
ಕಾರ್ಯಾಗಾರದಲ್ಲಿ ಡಾ.ಡಿ.ರಾಜಣ್ಣ, ಡಾ.ಕೆ.ವಿ.ಪ್ರಕಾಶ್, ಡಾ.ಕೆ.ಎಂ.ಶ್ರೀನಿವಾಸರೆಡ್ಡಿ ತಾಂತ್ರಿಕ ಮಾಹಿತಿ ನೀಡಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಡಾ.ಡಿ.ಜೇಮ್ಲಾ ನಾಯ್ಕ್ ವಹಿಸಿದ್ದು, ಕಾರ್ಯಾಗಾರದಲ್ಲಿ ಡಾ.ತಿಪ್ಪಯ್ಯ, ಡಾ.ಕೆ.ಟಿ.ವಿಜಯಕುಮಾರ್ ಸೇರಿದಂತೆ ಪಾವಗಡ ಮತ್ತು ಮಂಡ್ಯ ಜಿಲ್ಲೆಯ ಸುಮಾರು 60 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
Public power
R Hanumanthu
kogilu layout
Yelahanka
9845085793
7349337989
8050671579