



ಬಂಗಾರಪೇಟೆ:
ಪಟ್ಟಣದ ಸಹಸ್ರಾರು ಜನತೆಯ ಬಹು ವರ್ಷಗಳ ಕನಸಾಗಿ ಉಳಿದಿದ್ದ ಕನ್ನಡ ಭವನ ನಿರ್ಮಾಣಕ್ಕೆ 2 ಕೋಟಿ ರೂಗಳ ವೆಚ್ಚದಲ್ಲಿ ಮುಂದಿನ ವರ್ಷ ಜನವರಿ ಒಂದರಂದು ಗುದ್ದಲಿ ಪೂಜೆಗೆ ಚಾಲನೆ ನೀಡಲಾಗುವುದು ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ ನಿಯಮಿತ ಅಧ್ಯಕ್ಷರು ಮತ್ತು ಸ್ಥಳೀಯ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ತಾಲ್ಲೂಕು ರಾಷ್ಟ್ರೀಯ ಹಬ್ಬ ಆಚರಣೆ ಸಮಿತಿ ಮತ್ತು ತಾಲ್ಲೂಕು ಆಡಳಿತ ಹಾಗೂ ಪುರಸಭೆ ವತಿಯಿಂದ ಪುರಸಭೆ ಕಚೇರಿ ಆವರಣದಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಲಿಪಿಯಲ್ಲಿ ಪ್ರಥಮ ಬಾರಿಗೆ ರಚಿಸಲ್ಪಟ್ಟಿರುವ ಶಾಸನ ಹಲ್ಮಡಿ ಶಾಸನವಾಗಿದೆ, ಈ ದಿನವನ್ನು ನಾವು ಅರ್ಥಪೂರ್ಣವಾಗಿ ಆಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ, ಕನ್ನಡ ತಾಯಿಯ ಬಗ್ಗೆ ಹರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ನಮ್ಮ ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು ಕನ್ನಡ ಶಾಸ್ತ್ರೀಯ ಸ್ಥಾನಮಾನ ನೀಡಿದ್ದು ಅಂದಿನ ಮನಮೋಹನ್ ಸಿಂಗ್ ಎಂದರು.
ಜನವರಿಯಲ್ಲಿ ಗುದ್ದಲಿ ಪೂಜೆ:
ಮುಂದಿನ ವರ್ಷ ಜನವರಿ 1-1-2025 ರಂದು 2 ಕೋಟಿ ರೂಗಳ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಭೂಮಿ ಗುದ್ದಲಿ ಪೂಜೆ ನೆರವೇರಿಸಿ 1 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ಕನ್ನಡ ರಾಜ್ಯೋತ್ಸವವನ್ನು ಕನ್ನಡ ಭವನದಲ್ಲಿ ಆಚರಣೆ ಮಾಡಲಾಗುವುದು ಹಾಗೂ 1 ಕೋಟಿ ರೂಗಳ ವೆಚ್ಚದಲ್ಲಿ ಪತ್ರಕರ್ತರ ಭವನ, ಲಯನ್ಸ್ ಭವನ ನಿರ್ಮಾಣಕ್ಕೂ ಜನವರಿ 1 ರಂದೇ ಗುದ್ದಲಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಕನ್ನಡ ರಾಜ್ಯೋತ್ಸವ ಜೊತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವವನ್ನು ಸಹ ಆಚರಿಸಲಾಯಿತು ರಾಮಾಯಣವನ್ನು ರಚಿಸಿರುವ ಶ್ರೀ ಮಹರ್ಷಿ ವಾಲ್ಮೀಕಿ ಕುರಿತು ಅನೇಕ ವಿಚಾರಧಾರೆಗಳನ್ನು ಸಭಾ ವೇದಿಕೆಯಲ್ಲಿ ಹಂಚಿಕೊಂಡರು ಶಾಸಕ.ಎಸ್. ಎನ್. ನಾರಾಯಣಸ್ವಾಮಿ, ಈ ವೇಳೆ ವಾಲ್ಮೀಕಿ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ ಮತ್ತು ಸಮುದಾಯದವರು ಇದ್ದರು.
ತಹಸಿಲ್ದಾರ್ ವೆಂಕಟೇಶಪ್ಪ ಮಾತನಾಡಿ ನವಂಬರ್ 1 ರಂದು ಕನ್ನಡ ರಾಜ್ಯೋತ್ಸವ ಬಂತೆಂದರೆ ಇಡೀ ತಿಂಗಳೆಲ್ಲಾ ಹಬ್ಬದ ವಾತಾವರಣ ರಾಜ್ಯದ ಪ್ರತಿಯೊಂದು ಗ್ರಾಮದಿಂದ ಹಿಡಿದು ಗಡಿ ಭಾಗದವರೆಗೂ ನಾನಾ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಾಗಿ ಆಚರಣೆ ಮಾಡಲಾಗುತ್ತದೆ ಕನ್ನಡ ನಾಡಿನ ಕನ್ನಡಾಂಬೆ ಭುವನೇಶ್ವರಿಯ ಸ್ತಬ್ದ ಚಿತ್ರಗಳು, ಮಕ್ಕಳ ವೇಷ ಭೂಷಣಗಳು, ನೃತ್ಯಗಳು, ಡೋಲು ಕುಣಿತ, ಗರಾಡಿ ಕುಣಿತ, ವೀರಗಾಸೆ, ಚಿಲಿಪಿಲಿ ಗೊಂಬೆಗಳು, ಸಾರ್ವಜನಿಕರ ಆಕರ್ಷಣೆಯಾಗಿರುತ್ತದೆ, ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ನಾವು ಪುಣ್ಯವಂತರು ಎಂದರು.
ಇದೇ ವೇಳೆ ಎಸ್ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಸಮಾಜ ಸೇವೆಯಲ್ಲಿ ಉತ್ತಮ ಸೇವೆಗಳಿಸಿದ ಉಪತಹಸಿಲ್ದಾರ್ ಪ್ರಭಾಕರ್, ಪೊಲೀಸ್ ಇಲಾಖೆ ನಾಗೇಶ್, ಪಿ.ಡಿ.ಓ ವಸಂತ್ ಕುಮಾರ್, ಹಿರಿಯ ಪತ್ರಕರ್ತರಾದ ಕಾಂತರಾಜ್, ರಂಗರಾಮಯ್ಯ, ಶಾಲಾ ಶಿಕ್ಷಕರಿಗೆ, ಇತರೆ ಸಮಾಜಸೇವಕರಿಗೆ ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಹಸಿಲ್ದಾರ್ ವೆಂಕಟೇಶಪ್ಪ, ಪುರಸಭೆ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷೆ ಚಂದ್ರವೇಣಿ ಮಂಜುನಾಥ್, ನಿಕಟಪೂರ್ವ ಅಧ್ಯಕ್ಷ ಹಾಲಿ ಸದಸ್ಯ ಕೆ.ಚಂದ್ರಾರೆಡ್ಡಿ, ಶಂಶುದ್ದೀನ್ ಬಾಬು, ಪಾರ್ಥಸಾರಥಿ, ಪರ್ಜಾನ ಸುಹೇಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ಬಿ.ಓ. ಗುರುಮೂರ್ತಿ, ಪಿಡಬ್ಲ್ಯೂಡಿ ರವಿ, ಅಂಜಲಿ ದೇವಿ, ಪ್ರತಿಭಾ, ಶಿವಾರೆಡ್ಡಿ, ಸಿಡಿಪಿಓ ಮುನಿರಾಜು, ಎಇಇ ರವಿಚಂದ್ರನ್, ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಪ್ಪಯ್ಯ ಗೌಡ, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ, ವಾಲ್ಮೀಕಿ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಪುರಸಭೆ ಸದಸ್ಯರಾದ ಅರುಣಾಚಲಂಮಣಿ, ಗಂಗಮ್ಮ, ಷಫೀ, ರಾಕೇಶ್ ಗೌಡ, ಸುನಿಲ್ ಕುಮಾರ್, ಆರೋಗ್ಯ ರಾಜನ್, ಪ್ರಶಾಂತ್, ಎಸ್.ವೆಂಕಟೇಶ, ಪ್ರಭಾಕರ್, ಅಂಜುಮ್, ಸಾಧಿಕ್, ರಫೀಕ್ ಶಾರದಾ ವಿವೇಕಾನಂದ, ರತ್ನಮ್ಮ, ಸೌಂದರ್ಯ ಪ್ರಭಾಕರ್, ಪೊಲೀಸ್ ಇನ್ಸ್ಪೆಕ್ಟರ್ ನಂಜಪ್ಪ, ಆರೋಗ್ಯ ಇಲಾಖೆ ರವಿ, ಕಾರಹಳ್ಳಿ ಗ್ರಾ.ಪಂ.ಅಧ್ಯಕ್ಷ ಎಂ, ನಾರಾಯಣಸ್ವಾಮಿ, ಮಾಜಿ ಉಪಾಧ್ಯಕ್ಷ ಶ್ರೀನಿವಾಸ್, ಚಂದ್ರಕುಮಾರ್, ಸಿ.ಎಂ.ಹರೀಶ್ ಕುಮಾರ್, ಎಲ್.ರಾಮಕೃಷ್ಣಪ್ಪ, ಸಂಜೀವಪ್ಪ, ಆಂಜನೇಯ ಗೌಡ,ಅ.ನಾ. ಹರೀಶ್, ಕನ್ನಡ ಪರ ಸಂಘಟನೆ ಅಧ್ಯಕ್ಷರಾದ ರಾಮ್ ಪ್ರಸಾದ್, ಚಿನ್ನಿ ವೆಂಕಟೇಶ್, ನಾಗರಾಜ್, ಕಣಿಂಬಲೆ ಶ್ರೀನಿವಾಸ್, ಕರವೇ ಚಲಪತಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಸದಸ್ಯರು ಉಪಸ್ಥಿತರಿದ್ದರು.