ಯೂತ್ ಕಾಂಗ್ರೇಸ್ ಮುಖಂಡರಿಂದ ಮಾಜಿ ಸಿಎಂ ಗೆ ಮನವಿ
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನಸಭಾ ಮಾಜಿ ಶಾಸಕ, ಕಾಂಗ್ರೇಸ್ ಪಕ್ಷದ ಹಿರಿಯ ರಾಜಕಾರಣಿ ಎಸ್ ಎಂ ಮುನಿಯಪ್ಪನವರಿಗೆ ಹಾಗು ಮಾಜಿ ಡಿ ಸಿ ಸಿ ಅಧ್ಯಕ್ಷರು ನಂದಿ ಎಂ ಆಂಜಿನಪ್ಪನವರಿಗೆ ನಿಗಮ ಮಂಡಳಿ ಅಥವಾ ಎಂ ಎಲ್ ಸಿ ಸ್ಥಾನ ಮಾನಗಳನ್ನ ಕಲ್ಪಿಸಬೇಕೆಂದು ಒತ್ತಾಯಿಸಿ ಯೂತ್ ಕಾಂಗ್ರೇಸ್ ಹಾಗು ಎನ್ ಎಸ್ ಯು ಐ ಮುಖಂಡರು ಶಾಸಕ ಪ್ರದೀಪ್ ಈಶ್ವರ್ ಹಾಗು ಮಾಜಿ ಸಿಎಂ ವೀರಪ್ಪ ಮೊಯಿಲಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮಾಜಿ ಸಿಎಂ ಹಾಗು ಮಾಜಿ ಸಂಸದ ವೀರಪ್ಪಮೊಯಿಲಿ ಯವರ ನಗರದ ಗೃಹ ಕಚೇರಿಯಲ್ಲಿ ಯೂತ್ ಕಾಂಗ್ರೇಸ್ ಸಮಾವೇಶದ ಪೂರ್ವಭಾವಿ ಸಬೆ ಹಮ್ಮಿಕೊಳ್ಳಲಾಗಿತ್ತು.ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯ ಯೂತ್ ಕಾಂಗ್ರೇಸ್ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು ಪದಾದಿಕಾರಿಗಳು ಹಾಜರಾಗಿದ್ದ ಸಬೆಯಲ್ಲಿ ವೀರಪ್ಪ ಮೊಯಿಲಿ ಬಾಗವಹಿಸಿ ಸಮಾವೇಶ ಯಶಸ್ವಿಗೊಳಿಸಲು ಬೇಕಾದ ಸಿದ್ದತೆಗಳಿಗೆ ಸಲಹೆ ಸೂಚನೆ ನೀಡಿದರು.
ಈ ವೇಳೆ ವೀರಪ್ಪಮೊಯಿಲಿ ಮನೆ ಮುಂದೆ ಜಮಾಯಿಸಿದ ತಾಲ್ಲೂಕು ಯೂತ್ ಕಾಂಗ್ರೇಸ್ ಕಾರ್ಯಕರ್ತರು ಮಾಜಿ ಸಿಎಂ ವೀರಪ್ಪ ಮೊಯಿಲಿ ಹಾಗು ಶಾಸಕ ಪ್ರದೀಪ್ ಈಶ್ವರ್ ಗೆ ಮನವಿ ಸಲ್ಲಿಸಿ ಕಾಂಗ್ರೇಸ್ ಪಕ್ಷದ ಗೆಲುವಿಗೆ ರಾತ್ರಿ ಹಗಲು ಶ್ರಮವಹಿಸಿದ ಮಾಜಿ ಶಾಸಕ ಎಸ್ ಎಂ ಮುನಿಯಪ್ಪ ಹಾಗು ಮಾಜಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ನಂದಿ ಎಂ ಆಂಜಿನಪ್ಪಗೆ ಸರ್ಕಾರದಲ್ಲಿ ಹಾಗು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಒತ್ತಾಯಿಸಿದರು
ಯೂತ್ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಮುದಸಿರ್ ಮಾತನಾಡಿ ಒಬ್ಬ ದಲಿತ ನಾಯಕರು,ಕಾಂಗ್ರೇಸ್ ಪಕ್ಷದ ಕಟ್ಟಾಳು ಮಾಜಿ ಶಾಸಕ ಮುನಿಯಪ್ಪ ಈ ಭಾರಿ ಕಾಂಗ್ರೇಸ್ ಗೆಲುವಿಗೆ ಸಾಕಷ್ಟು ಶ್ರಮವಹಿಸಿದ್ದಾರೆ ಯುವಕರನ್ನ ಸಂಘಟಿಸಲು ಸಹಕಾರ ನೀಡಿದ್ದಾರೆ ಹಾಗೆಯೆ ಮಾಜಿ ಜಿಲ್ಲಾಧ್ಯಕ್ಷ ನಂದಿ ಎಂ ಆಂಜಿನಪ್ಪನವರೂ ದುಡಿಮೆ ಮಾಡಿದ್ದಾರೆ ಪಕ್ಷಕ್ಕಾಗಿ ಹಣವೂ ಖರ್ಚು ಮಾಡಿಕೊಂಡಿದ್ದಾರೆ ಮೇಲಾಗಿ ಮಾಜಿ ಸಚಿವ ಸುಧಾಕರ್ ರನ್ನ ಸೋಲಿಸಲು ಬಹಳಷ್ಡು ದುಡಿಮೆ ಮಾಡಿದ್ದಾರೆ ಹಾಗಾಗಿ ಸರ್ಕಾರ ಈ ಇಬ್ಬರು ಮುಖಂಡರಿಗೂ ಸ್ಥಾನಮಾನಗಳನ್ನ ಕಲ್ಪಿಸಬೇಕೆಂದು ಸಿಎಂ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆಶಿ ರಾಜ್ಯ ಯುವ ಮುಖಂಡರಿಗೂ ಜಿಲ್ಲಾಧ್ಯಕ್ಷರಿಗೂ ಮನವಿಬಮಾಡಿದ್ದೇವೆ ಎಂದರು.
ಯುವ ಕಾಂಗೈ ಮಾನವ ಹಕ್ಕುಗಳ ವಿಭಾಗದ ರಾಜ್ಯಾದ್ಯಕ್ಷ ಅಜೆಯ್ ಮಾತನಾಡಿ ಎಸ್ ಎಂ ಮುನಿಯಪ್ಪ ಮತ್ತು ಆಂಜಿನಪ್ಪ ಅವರು ಪಕ್ಷಕ್ಕೆ ಯುವಕರನ್ನ ಸೆಳೆಯಲು ಶ್ರಮವಹಿಸಿದ್ದಾರೆ ಯುವ ಸಂಘಟನೆಗೆ ಒತ್ತು ಕೊಟ್ಟಿದ್ದಾರೆ ಅವರಿಗೆ ಸ್ಥಾನಮಾನ ನೀಡಿದರೆ ಪಕ್ಷವು ಮತ್ತಷ್ಟು ಬಲಗೊಳ್ಳಲಿದೆ ಆ ಮೂಲಕ ಸಂಸತ್ ಚುನಾವಣೆಗೂ ಸಹಾಯವಾಗಲಿದೆ ಎಂದರು.
ಈ ವೇಳೆ ಯುವ ಮುಖಂಡರು ಎಸ್ ಎಂ ಜಗದೀಶ್,ಕುಬೇರ ಅಚ್ಚು,ಮಂಡಿಕಲ್ ಕುಪೇಂದ್ರ,ಸುನಿಲ್,ಮೋಹನ್,ಅರುಣ್, ರಾಜೇಶ್ ಮತ್ತು ಇತರೆ ಮುಖಂಡರು ಇದ್ದರು.
ಮಾಜಿ ಶಾಸಕ ಎಸ್ ಎಂ ಮುನಿಯಪ್ಪ ಗೆ ಸರ್ಕಾರದಲ್ಲಿ ಸ್ಥಾನಮಾನಕ್ಕೆ ಒತ್ತಾಯ
ಯೂತ್ ಕಾಂಗ್ರೇಸ್ ಮುಖಂಡರಿಂದ ಮಾಜಿ ಸಿಎಂ ಗೆ ಮನವಿ
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನಸಭಾ ಮಾಜಿ ಶಾಸಕ, ಕಾಂಗ್ರೇಸ್ ಪಕ್ಷದ ಹಿರಿಯ ರಾಜಕಾರಣಿ ಎಸ್ ಎಂ ಮುನಿಯಪ್ಪನವರಿಗೆ ಹಾಗು ಮಾಜಿ ಡಿ ಸಿ ಸಿ ಅಧ್ಯಕ್ಷರು ನಂದಿ ಎಂ ಆಂಜಿನಪ್ಪನವರಿಗೆ ನಿಗಮ ಮಂಡಳಿ ಅಥವಾ ಎಂ ಎಲ್ ಸಿ ಸ್ಥಾನ ಮಾನಗಳನ್ನ ಕಲ್ಪಿಸಬೇಕೆಂದು ಒತ್ತಾಯಿಸಿ ಯೂತ್ ಕಾಂಗ್ರೇಸ್ ಹಾಗು ಎನ್ ಎಸ್ ಯು ಐ ಮುಖಂಡರು ಶಾಸಕ ಪ್ರದೀಪ್ ಈಶ್ವರ್ ಹಾಗು ಮಾಜಿ ಸಿಎಂ ವೀರಪ್ಪ ಮೊಯಿಲಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮಾಜಿ ಸಿಎಂ ಹಾಗು ಮಾಜಿ ಸಂಸದ ವೀರಪ್ಪಮೊಯಿಲಿ ಯವರ ನಗರದ ಗೃಹ ಕಚೇರಿಯಲ್ಲಿ ಯೂತ್ ಕಾಂಗ್ರೇಸ್ ಸಮಾವೇಶದ ಪೂರ್ವಭಾವಿ ಸಬೆ ಹಮ್ಮಿಕೊಳ್ಳಲಾಗಿತ್ತು.ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯ ಯೂತ್ ಕಾಂಗ್ರೇಸ್ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು ಪದಾದಿಕಾರಿಗಳು ಹಾಜರಾಗಿದ್ದ ಸಬೆಯಲ್ಲಿ ವೀರಪ್ಪ ಮೊಯಿಲಿ ಬಾಗವಹಿಸಿ ಸಮಾವೇಶ ಯಶಸ್ವಿಗೊಳಿಸಲು ಬೇಕಾದ ಸಿದ್ದತೆಗಳಿಗೆ ಸಲಹೆ ಸೂಚನೆ ನೀಡಿದರು.
ಈ ವೇಳೆ ವೀರಪ್ಪಮೊಯಿಲಿ ಮನೆ ಮುಂದೆ ಜಮಾಯಿಸಿದ ತಾಲ್ಲೂಕು ಯೂತ್ ಕಾಂಗ್ರೇಸ್ ಕಾರ್ಯಕರ್ತರು ಮಾಜಿ ಸಿಎಂ ವೀರಪ್ಪ ಮೊಯಿಲಿ ಹಾಗು ಶಾಸಕ ಪ್ರದೀಪ್ ಈಶ್ವರ್ ಗೆ ಮನವಿ ಸಲ್ಲಿಸಿ ಕಾಂಗ್ರೇಸ್ ಪಕ್ಷದ ಗೆಲುವಿಗೆ ರಾತ್ರಿ ಹಗಲು ಶ್ರಮವಹಿಸಿದ ಮಾಜಿ ಶಾಸಕ ಎಸ್ ಎಂ ಮುನಿಯಪ್ಪ ಹಾಗು ಮಾಜಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ನಂದಿ ಎಂ ಆಂಜಿನಪ್ಪಗೆ ಸರ್ಕಾರದಲ್ಲಿ ಹಾಗು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಒತ್ತಾಯಿಸಿದರು
ಯೂತ್ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಮುದಸಿರ್ ಮಾತನಾಡಿ ಒಬ್ಬ ದಲಿತ ನಾಯಕರು,ಕಾಂಗ್ರೇಸ್ ಪಕ್ಷದ ಕಟ್ಟಾಳು ಮಾಜಿ ಶಾಸಕ ಮುನಿಯಪ್ಪ ಈ ಭಾರಿ ಕಾಂಗ್ರೇಸ್ ಗೆಲುವಿಗೆ ಸಾಕಷ್ಟು ಶ್ರಮವಹಿಸಿದ್ದಾರೆ ಯುವಕರನ್ನ ಸಂಘಟಿಸಲು ಸಹಕಾರ ನೀಡಿದ್ದಾರೆ ಹಾಗೆಯೆ ಮಾಜಿ ಜಿಲ್ಲಾಧ್ಯಕ್ಷ ನಂದಿ ಎಂ ಆಂಜಿನಪ್ಪನವರೂ ದುಡಿಮೆ ಮಾಡಿದ್ದಾರೆ ಪಕ್ಷಕ್ಕಾಗಿ ಹಣವೂ ಖರ್ಚು ಮಾಡಿಕೊಂಡಿದ್ದಾರೆ ಮೇಲಾಗಿ ಮಾಜಿ ಸಚಿವ ಸುಧಾಕರ್ ರನ್ನ ಸೋಲಿಸಲು ಬಹಳಷ್ಡು ದುಡಿಮೆ ಮಾಡಿದ್ದಾರೆ ಹಾಗಾಗಿ ಸರ್ಕಾರ ಈ ಇಬ್ಬರು ಮುಖಂಡರಿಗೂ ಸ್ಥಾನಮಾನಗಳನ್ನ ಕಲ್ಪಿಸಬೇಕೆಂದು ಸಿಎಂ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆಶಿ ರಾಜ್ಯ ಯುವ ಮುಖಂಡರಿಗೂ ಜಿಲ್ಲಾಧ್ಯಕ್ಷರಿಗೂ ಮನವಿಬಮಾಡಿದ್ದೇವೆ ಎಂದರು.
ಯುವ ಕಾಂಗೈ ಮಾನವ ಹಕ್ಕುಗಳ ವಿಭಾಗದ ರಾಜ್ಯಾದ್ಯಕ್ಷ ಅಜೆಯ್ ಮಾತನಾಡಿ ಎಸ್ ಎಂ ಮುನಿಯಪ್ಪ ಮತ್ತು ಆಂಜಿನಪ್ಪ ಅವರು ಪಕ್ಷಕ್ಕೆ ಯುವಕರನ್ನ ಸೆಳೆಯಲು ಶ್ರಮವಹಿಸಿದ್ದಾರೆ ಯುವ ಸಂಘಟನೆಗೆ ಒತ್ತು ಕೊಟ್ಟಿದ್ದಾರೆ ಅವರಿಗೆ ಸ್ಥಾನಮಾನ ನೀಡಿದರೆ ಪಕ್ಷವು ಮತ್ತಷ್ಟು ಬಲಗೊಳ್ಳಲಿದೆ ಆ ಮೂಲಕ ಸಂಸತ್ ಚುನಾವಣೆಗೂ ಸಹಾಯವಾಗಲಿದೆ ಎಂದರು.
ಈ ವೇಳೆ ಯುವ ಮುಖಂಡರು ಎಸ್ ಎಂ ಜಗದೀಶ್,ಕುಬೇರ ಅಚ್ಚು,ಮಂಡಿಕಲ್ ಕುಪೇಂದ್ರ,ಸುನಿಲ್,ಮೋಹನ್,ಅರುಣ್, ರಾಜೇಶ್ ಮತ್ತು ಇತರೆ ಮುಖಂಡರು ಇದ್ದರು.