

ಬಯಲು ಸಿಂಹ ಸುದ್ದಿ:
ಬಂಗಾರಪೇಟೆ:
ದೇಶದಲ್ಲಿದೇವರನ್ನು ಪ್ರಾರ್ಥನೆಮಾಡುವ ವಿಧಾನಬೇರೆಬೇರೆ ಇರಬಹುದು. ಆದರೆ ದೇವರು ಸರ್ವಾಂತರ್ಯಾಮಿಯಾಗಿದ್ದು, ಎಲ್ಲರಿಗೂ ಒಬ್ಬನೇ. ಹಿಂದು, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಅಣ್ಣ-ತಮ್ಮಂದಿರಂತೆ ಬಾಳ್ವೆ ನಡೆಸುತ್ತಿದ್ದಾರೆ.ಅದರ ಫಲವಾಗಿ ಕರಗ ನಡೆದಾಗಮುಸ್ಲಿಂ, ಉರುಸ್ ನಡೆದಾಗ ಹಿಂದು ಸಮುದಾಯದವರು ಭಾಗವಹಿಸುತ್ತಾರೆ ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ ನಿಯಮಿತ ಅಧ್ಯಕ್ಷರು ಮತ್ತು ಸ್ಥಳೀಯ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಅಜಂ ಮಸೀದಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದು-ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರೂ ಹೀಗೆ ಇರಬೇಕು ಎಂದು ಯಾರೂ ಹೇಳಿಲ್ಲ. ಅವು ನಾವೇ ಮಾಡಿಕೊಂಡ ಭಾವನೆಗಳು. ಎಲ್ಲರೂ ಜೀವಿಸಲು ಇರುವುದು ಒಂದೇ ಭೂಮಿ, ಗಾಳಿ ಮತ್ತು ನೀರು. ಮುಸ್ಲಿಂ ಸಮುದಾಯದ ಮಂತ್ರಿಯಾಗಿದ್ದ ಯು.ಟಿ. ಖಾದರ್ ಅವರು ಅನುದಾನ ಬಿಡುಗಡೆ ಮಾಡಿದ ಫಲವಾಗಿ ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿದ್ದು, ಎಲ್ಲ ಸಮುದಾಯದವರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ನವರು ವಕ್ಸ್ ಆಸ್ತಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡಲು ಹೊರಟಿದ್ದಾರೆ. ರೈತರ ಮತ್ತು ಸರ್ಕಾರಿ ಭೂಮಿಯನ್ನು ವಕ್ಸ್ ಆಸ್ತಿ ಎಂದು ಪಹಣಿಯಲ್ಲಿ ದಾಖಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಬಂಗಾರಪೇಟೆಯಲ್ಲಿ ಯಾವುದೇ ಪ್ರಕರಣ ಕಂಡು ಬಂದಿಲ್ಲ. ಇವೆಲ್ಲವೂ ಬಿಜೆಪಿಯವರ ಕಲ್ಪನೆಯಾಗಿದ್ದು, ಮುಸ್ಲಿಂ ಸಮುದಾಯದ ಮೇಲೆ ಗೂಬೆ ಕೂರಿಸಿ ಹಿಂದುಗಳ ವಿರೋಧಿ ಎಂದು ಬಿಂಬಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಗೋವಿಂದ,ಮುಖಂಡರಾದ ಪಾರ್ಥಸಾರಥಿ, ಡಾ.ತಾಜ್, ಸುಹೇಲ್ ಅಹ್ಮದ್, ಆರೋಗ್ಯ ರಾಜನ್, ಪ್ರಶಾಂತ್ ,ರಫೀಕ್ ಅಹ್ಮದ್, ಲಯನ್ ರಫಿ, ಅಮ್ಬದ್ಖಾನ್, ಸೈಯದ್ ಇದಾಯಿತಲ್ಲ (ಇದ್ದು ಬೈ), ಪತ್ರಕರ್ತ ಯಾಸನ್ ಬೈ, ಮುಬಾರಕ್ ಬೇಗಂ ರಫೀಕ್ ಬೈ ಇತರರಿದ್ದರು.