
ಸರ್ಕಾರಿ ನೌಕರ ಸಂಘಕೆ ನೂತನವಾಗಿ ಆಯ್ಕೆಯಾದ ಪ್ರತಿನಿಧಿಗಳಿಗೆ ಸನ್ಮಾನ
ಬೀದರ: ಕರ್ನಾಟಕ ರಾಜ್ಯ ಪ್ರೌಢಶಾಲಾ ಮುಖೋಪಾದ್ಯಯರ ಸಂಘ ಹಾಗೂ ಜಿಲ್ಲಾ ಅನುದಾನಿತ ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಬೀದರ್ನ ಮುಕ್ತಿಮಂದಿರದಲ್ಲಿ ಸರ್ಕಾರಿ ನೌಕರ ಸಂಘಕೆ ನೂತನವಾಗಿ ಆಯ್ಕೆಯಾದ ಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ನೂತನವಾಗಿ ಚುನಾಯಿತರಾದ ರಾಜಶೇಖರ್ ಮಂಗಲಗಿ, ಬಸವರಾಜ್ ಜಕ್ಕ ಪಾಂಡುರoಗ ಬೆಲ್ದಾರ್, ಎಂ ಡಿ ಶಾಹಬೂದಿನ್, ಮನೋಹರ್ ಕಾಶಿ ರವರನ್ನು ಸನ್ಮಾನಿಸಲಾಯಿತು.
ಅನುದಾನಿತ ಪ್ರೌಢಶಾಲೆ ಮುಖ್ಯ ಗುರುಗಳ ಸಂಘದ ಜಿಲ್ಲಾಧ್ಯಕ್ಷರಾದ ವಿಜಯಕುಮಾರ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು , ಮುಖ್ಯ ಅತಿಥಿ ಸ್ಥಾನವನ್ನು ಕರ್ನಾಟಕ ರಾಜ್ಯ ಪ್ರೌಢಶಾಲಾ ಮುಖ್ಯಗುಗಳ ಸಂಘದ ಜಿಲ್ಲಾಧ್ಯಕ್ಷರಾದ ಪ್ರಶಾಂತ ರಾಗ ಅವರು ವಹಿಸಿದ್ದರು ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜಶೇಖರ್ ಮಂಗಲಗಿ ರವರು ಸರ್ಕಾರಿ ಅನುದಾನಿತ ಎಲ್ಲಾ ನೌಕರರ ಹಿತಕ್ಕಾಗಿ ಶ್ರಮಿಸುವುದಾಗಿ ನುಡಿದರು.
ಪಾಂಡುರoಗ ಬಿಲ್ದಾರ್ ಮಾತನಾಡಿ ನನ್ನು 2ನೇ ಬಾರಿಗೆ ನೌಕರ ಸಂಘಕೆ ಆಯ್ಕೆ ಮಾಡಿದ್ದೀರಿ ನಾನು ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ನೌಕರರ ಹಿತ ಕಾಯಲು ಬದ್ಧನಿದ್ದೇನೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸಿದ್ರಾಮ್ ನಿಜಾಂಪುರ ಸ್ವಾಗತಿಸಿದರು, ಲಕ್ಷ್ಮಣ್ ಪೂಜಾರ್ ನಿರೂಪಿಸಿದರು, ಸೈಯದ್ ಸಲಾವುದ್ದೀನ್ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಉಮೇಶ್ ಪಾಟೀಲ್, ಸಂಘಟನಾ ಕಾರ್ಯದರ್ಶಿಗಳಾದ ಪ್ರಲಾದ್ ತಳಗಟ್ಕರ್, ಬಳಿರಾಮ್ ಕುರ್ನಾಳೆ, ಬಾಲಾಜಿ ಪುಲ್ಲೆ, ರಾಜಕುಮಾರ್ ಕುಲಕರ್ಣಿ, ಮಹಮದ್ ಮಿಜ್ಬಾ ಹಾಗೂ ಇನ್ನೂ ಹಲವಾರು ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು