ದೇವನಹಳ್ಳಿ: ಬೀರಸಂದ್ರ ಗ್ರಾಮದಲ್ಲಿ ಶ್ರೀ ಅಭಯ ಆಂಜನೇಯ ಸ್ವಾಮಿ, ಶ್ರೀ ಮಾರಮ್ಮ ಮುಂತಾದ ದೇವರುಗಳಿಗೆ ನಿತ್ಯಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಗಳಿಂದ ನಡೆಯುತ್ತಿದ್ದು ಲೋಕ ಕಲ್ಯಾಣ ಪ್ರಾಪ್ತಿಗಾಗಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ಮಂಡಲಪೂಜೆ ಮತ್ತು ಸೀತಾರಾಮ ಕಲ್ಯಾಣೋತ್ಸವ ಕಾರ್ಯವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಊರಿನಲ್ಲಿ ನಾಡಿನಲ್ಲಿ ಸುಖ, ಶಾಂತಿ ನೆಮ್ಮದಿ ಹಾಗೂ ಕಾಲಕಾಲಕ್ಕೆ ಮಳೆ ಬೆಳೆ ಯಿಂದ ಜನ ಜಾನುವಾರುಗಳು ಕೂಡ ಅಭಿವೃದ್ಧಿ ಹೊಂದಿ ಮುಂದುವರೆಯಲು ದೈವ ಕೃಪೆ ಉಂಟಾಗಲು ಇಂತಹ ಧಾರ್ಮಿಕ ಕಾರ್ಯಗಳು ನಡೆಯಬೇಕು, ಎಂದು ಬೀರಸಂದ್ರ ಗ್ರಾಮದ ಧಾರ್ಮಿಕ ಮುಖಂಡ ಸಿದ್ದಲಿಂಗ ಮೂರ್ತಿಯವರು ತಿಳಿಸಿದ್ದಾರೆ.

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದಲ್ಲಿ ಶ್ರೀಅಭಯ ಆಂಜನೇಯ ಸ್ವಾಮಿ ಮಂಡಲ ಅಭಿಷೇಕ ಮಹೋತ್ಸವ ಹಾಗೂ ಶ್ರೀ ಸೀತಾರಾಮ ಕಲ್ಯಾಣೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಗುರುವಾರ ಭಾಗವಹಿಸಿ ಅವರು ಮಾತನಾಡಿದರು.

ದೇಶದ ನಾನಾ ಭಾಗಗಳಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಕಂಡಿರಬಹುದು ಆದರೆ ಬೀರಸಂದ್ರ ಗ್ರಾಮದಲ್ಲಿ ವಿಭಿನ್ನವಾಗಿ ಕೋರೆ ಹಲ್ಲುಗಳಿಂದ ಕೂಡಿದ ಆಂಜನೇಯ ಸ್ವಾಮಿಯ ಪ್ರತಿಮೆಯನ್ನು ಕಾಣಬಹುದಾಗಿದೆ ಇಲ್ಲಿನ ಮತ್ತೊಂದು ವಿಶೇಷವೆಂದರೆ ದೇವರಿಗೆ ಅಭಿಷೇಕ ಮಾಡಿದ ನೀರು ಹೊರ ಹೋಗದೆ. ಅದೆಷ್ಟೇ ನೀರು ಬಳಸಿದರು ಗರ್ಭಗುಡಿಯ ಒಳಗಡೆಯ ರಂದ್ರವೊಂದರಲ್ಲಿ ಹರಿದು ಹೋಗುತ್ತದೆ ಈ ರಂದ್ರದಲ್ಲಿ ಹರಿದು ಹೋಗುವ ನೀರು ಎಲ್ಲಿಗೆ ಹೋಗಿ ಸೇರುತ್ತದೆ ಎಂಬುದನ್ನು ಇದುವರೆಗೂ ಯಾರು ಕಂಡಿಲ್ಲ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಭಗವಂತ ಅವರ ಇಷ್ಟಾರ್ಥಗಳನ್ನು ಪೂರೈಸಿ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವ ನಂಬಿಕೆ ಇಲ್ಲಿನ ಸುತ್ತಮುತ್ತಲಿನಲ್ಲಿ ಜೀವಂತವಾಗಿದೆ, ಗ್ರಾಮದಲ್ಲಿ ಮಹಿಳೆಯರಿಗೆ ಬಳೆ ಶಾಸ್ತ್ರ, ಹೋಮ ಹವನ, ಮೆರವಣಿ ದೇವರುಗಳಿಗೆ  ಗ್ರಾಮದ ಮನೆ- ಮನೆ ಗಳಿಂದ ಪೂಜೆ ಬಳಿಕ ದೇವಾಲಯಕ್ಕೆ ತೆರಳಿ ಎರಡು ದಿನ ನಡೆಯುವ ಕಾರ್ಯಕ್ರಮ ಗುರುವಾರ ಮಹಾ ಮಂಗಳಾರತಿಗಳೊಂದಿಗೆ ಮುಕ್ತಾಯಗೊಳ್ಳುತ್ತದೆ ಎಂದು ತಿಳಿಸಿದರು.

ಬೀರಸಂದ್ರ ಗ್ರಾಮದ ಡೈರಿ ಅಧ್ಯಕ್ಷ ಮುರಳಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ದೇವರುಗಳ ಕಲ್ಯಾಣೋತ್ಸವ ಮಾಡು ವುದರಿಂದ ದುಷ್ಟ ಶಕ್ತಿಗಳು ದೂರವಾಗಿ, ಭಗವಂತ ಆರೋಗ್ಯ ಭಾಗ್ಯ ಕರುಣಿಸುವ ನಂಬಿಕೆ ಊರಿನಲ್ಲಿದೆ ಈ ಧಾರ್ಮಿಕ ಕಾರ್ಯಕ್ರಮ ಈ ಬಾರಿ ಕೆಲ ದಿನ ತಡವಾಗಿ ನಡೆಯುತ್ತಿದೆ. ದೇವರ ಕೆಲಸದಲ್ಲಿ ಗ್ರಾಮಸ್ಥರೆಲ್ಲ ಒಟ್ಟಾಗಿ ಸಹಕಾರ ನೀಡುವುದರ ಮೂಲಕ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತದೆ ಈ ಸಂದರ್ಭದಲ್ಲಿ ದೂರದೂರಿನಲ್ಲಿರುವ ಬಂದುಗಳು ಸಂಬಂಧಿಕರು ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ದೇವರ ಉತ್ಸವ ಪ್ರತಿವರ್ಷ ನಡೆಯುತ್ತದೆ ಆದರೆ ಸೀತಾರಾಮ ಕಲ್ಯಾಣೋತ್ಸವ ಇದೇ ಮೊದಲ ಬಾರಿಗೆ ನಡೆಯುತ್ತಿದೆ, ಎಂದರು. 

ಈ ಸಂದರ್ಭದಲ್ಲಿ ಬೀರಸಂದ್ರ ಗ್ರಾಮದ ಡೈರಿ ಅಧ್ಯಕ್ಷ ಮುರಳಿ, ಆಲೂರು ದುದ್ದನಹಳ್ಳಿ ಗ್ರಾ.ಪಂ.ಸದಸ್ಯರಾದ ಕೃಷ್ಣಮ್ಮ ಯಲ್ಲಪ್ಪ, ಬೈರೇಗೌಡ, ಮುಖಂಡರಾದ ಹನುಮಣ್ಣ, ಮುನೇಗೌಡ, ಬಿಎಲ್.ನಾಗರಾಜು, ರಾಮ ಚಂದ್ರಪ್ಪ, ಕೋಟೆ ಮಂಜುನಾಥ್,  ಜಯರಾಮೇಗೌಡ, ರಾಮಣ್ಣ,  ವೆಂಕಟೇಗೌಡ, ಬಸವರಾಜು, ಮುರಳಿ, ಮುನಿರಾಜು, ರಾಮಾಂಜಿನಪ್ಪ, ಶಿವಕುಮಾರ್ ಆಚಾರ್, ಲಕ್ಷ್ಮಣ್, ರಾಜಣ್ಷ ಮುಂತಾದವರು ಇದ್ದರು .

ಲೋಕ ಕಲ್ಯಾಣಕ್ಕಾಗಿ ಬೀರಸಂದ್ರದಲ್ಲಿ ಆಂಜನೇಯ ಸ್ವಾಮಿ ಮಂಡಲಪೂಜೆ ಮತ್ತು ಸೀತಾರಾಮ ಕಲ್ಯಾಣೋತ್ಸವ ಅದ್ದೂರಿ ಆಚರಣೆ.

ದೇವನಹಳ್ಳಿ: ಬೀರಸಂದ್ರ ಗ್ರಾಮದಲ್ಲಿ ಶ್ರೀ ಅಭಯ ಆಂಜನೇಯ ಸ್ವಾಮಿ, ಶ್ರೀ ಮಾರಮ್ಮ ಮುಂತಾದ ದೇವರುಗಳಿಗೆ ನಿತ್ಯಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಗಳಿಂದ ನಡೆಯುತ್ತಿದ್ದು ಲೋಕ ಕಲ್ಯಾಣ ಪ್ರಾಪ್ತಿಗಾಗಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ಮಂಡಲಪೂಜೆ ಮತ್ತು ಸೀತಾರಾಮ ಕಲ್ಯಾಣೋತ್ಸವ ಕಾರ್ಯವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಊರಿನಲ್ಲಿ ನಾಡಿನಲ್ಲಿ ಸುಖ, ಶಾಂತಿ ನೆಮ್ಮದಿ ಹಾಗೂ ಕಾಲಕಾಲಕ್ಕೆ ಮಳೆ ಬೆಳೆ ಯಿಂದ ಜನ ಜಾನುವಾರುಗಳು ಕೂಡ ಅಭಿವೃದ್ಧಿ ಹೊಂದಿ ಮುಂದುವರೆಯಲು ದೈವ ಕೃಪೆ ಉಂಟಾಗಲು ಇಂತಹ ಧಾರ್ಮಿಕ ಕಾರ್ಯಗಳು ನಡೆಯಬೇಕು, ಎಂದು ಬೀರಸಂದ್ರ ಗ್ರಾಮದ ಧಾರ್ಮಿಕ ಮುಖಂಡ ಸಿದ್ದಲಿಂಗ ಮೂರ್ತಿಯವರು ತಿಳಿಸಿದ್ದಾರೆ.

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದಲ್ಲಿ ಶ್ರೀಅಭಯ ಆಂಜನೇಯ ಸ್ವಾಮಿ ಮಂಡಲ ಅಭಿಷೇಕ ಮಹೋತ್ಸವ ಹಾಗೂ ಶ್ರೀ ಸೀತಾರಾಮ ಕಲ್ಯಾಣೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಗುರುವಾರ ಭಾಗವಹಿಸಿ ಅವರು ಮಾತನಾಡಿದರು.

ದೇಶದ ನಾನಾ ಭಾಗಗಳಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಕಂಡಿರಬಹುದು ಆದರೆ ಬೀರಸಂದ್ರ ಗ್ರಾಮದಲ್ಲಿ ವಿಭಿನ್ನವಾಗಿ ಕೋರೆ ಹಲ್ಲುಗಳಿಂದ ಕೂಡಿದ ಆಂಜನೇಯ ಸ್ವಾಮಿಯ ಪ್ರತಿಮೆಯನ್ನು ಕಾಣಬಹುದಾಗಿದೆ ಇಲ್ಲಿನ ಮತ್ತೊಂದು ವಿಶೇಷವೆಂದರೆ ದೇವರಿಗೆ ಅಭಿಷೇಕ ಮಾಡಿದ ನೀರು ಹೊರ ಹೋಗದೆ. ಅದೆಷ್ಟೇ ನೀರು ಬಳಸಿದರು ಗರ್ಭಗುಡಿಯ ಒಳಗಡೆಯ ರಂದ್ರವೊಂದರಲ್ಲಿ ಹರಿದು ಹೋಗುತ್ತದೆ ಈ ರಂದ್ರದಲ್ಲಿ ಹರಿದು ಹೋಗುವ ನೀರು ಎಲ್ಲಿಗೆ ಹೋಗಿ ಸೇರುತ್ತದೆ ಎಂಬುದನ್ನು ಇದುವರೆಗೂ ಯಾರು ಕಂಡಿಲ್ಲ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಭಗವಂತ ಅವರ ಇಷ್ಟಾರ್ಥಗಳನ್ನು ಪೂರೈಸಿ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವ ನಂಬಿಕೆ ಇಲ್ಲಿನ ಸುತ್ತಮುತ್ತಲಿನಲ್ಲಿ ಜೀವಂತವಾಗಿದೆ, ಗ್ರಾಮದಲ್ಲಿ ಮಹಿಳೆಯರಿಗೆ ಬಳೆ ಶಾಸ್ತ್ರ, ಹೋಮ ಹವನ, ಮೆರವಣಿ ದೇವರುಗಳಿಗೆ  ಗ್ರಾಮದ ಮನೆ- ಮನೆ ಗಳಿಂದ ಪೂಜೆ ಬಳಿಕ ದೇವಾಲಯಕ್ಕೆ ತೆರಳಿ ಎರಡು ದಿನ ನಡೆಯುವ ಕಾರ್ಯಕ್ರಮ ಗುರುವಾರ ಮಹಾ ಮಂಗಳಾರತಿಗಳೊಂದಿಗೆ ಮುಕ್ತಾಯಗೊಳ್ಳುತ್ತದೆ ಎಂದು ತಿಳಿಸಿದರು.

ಬೀರಸಂದ್ರ ಗ್ರಾಮದ ಡೈರಿ ಅಧ್ಯಕ್ಷ ಮುರಳಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ದೇವರುಗಳ ಕಲ್ಯಾಣೋತ್ಸವ ಮಾಡು ವುದರಿಂದ ದುಷ್ಟ ಶಕ್ತಿಗಳು ದೂರವಾಗಿ, ಭಗವಂತ ಆರೋಗ್ಯ ಭಾಗ್ಯ ಕರುಣಿಸುವ ನಂಬಿಕೆ ಊರಿನಲ್ಲಿದೆ ಈ ಧಾರ್ಮಿಕ ಕಾರ್ಯಕ್ರಮ ಈ ಬಾರಿ ಕೆಲ ದಿನ ತಡವಾಗಿ ನಡೆಯುತ್ತಿದೆ. ದೇವರ ಕೆಲಸದಲ್ಲಿ ಗ್ರಾಮಸ್ಥರೆಲ್ಲ ಒಟ್ಟಾಗಿ ಸಹಕಾರ ನೀಡುವುದರ ಮೂಲಕ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತದೆ ಈ ಸಂದರ್ಭದಲ್ಲಿ ದೂರದೂರಿನಲ್ಲಿರುವ ಬಂದುಗಳು ಸಂಬಂಧಿಕರು ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ದೇವರ ಉತ್ಸವ ಪ್ರತಿವರ್ಷ ನಡೆಯುತ್ತದೆ ಆದರೆ ಸೀತಾರಾಮ ಕಲ್ಯಾಣೋತ್ಸವ ಇದೇ ಮೊದಲ ಬಾರಿಗೆ ನಡೆಯುತ್ತಿದೆ, ಎಂದರು. 

ಈ ಸಂದರ್ಭದಲ್ಲಿ ಬೀರಸಂದ್ರ ಗ್ರಾಮದ ಡೈರಿ ಅಧ್ಯಕ್ಷ ಮುರಳಿ, ಆಲೂರು ದುದ್ದನಹಳ್ಳಿ ಗ್ರಾ.ಪಂ.ಸದಸ್ಯರಾದ ಕೃಷ್ಣಮ್ಮ ಯಲ್ಲಪ್ಪ, ಬೈರೇಗೌಡ, ಮುಖಂಡರಾದ ಹನುಮಣ್ಣ, ಮುನೇಗೌಡ, ಬಿಎಲ್.ನಾಗರಾಜು, ರಾಮ ಚಂದ್ರಪ್ಪ, ಕೋಟೆ ಮಂಜುನಾಥ್,  ಜಯರಾಮೇಗೌಡ, ರಾಮಣ್ಣ,  ವೆಂಕಟೇಗೌಡ, ಬಸವರಾಜು, ಮುರಳಿ, ಮುನಿರಾಜು, ರಾಮಾಂಜಿನಪ್ಪ, ಶಿವಕುಮಾರ್ ಆಚಾರ್, ಲಕ್ಷ್ಮಣ್, ರಾಜಣ್ಷ ಮುಂತಾದವರು ಇದ್ದರು .

Leave a Reply

Your email address will not be published. Required fields are marked *