
ಪಿ.ವಿ.ಸಿ. ಸ್ವಾಭಿಮಾನ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ :
ಯಲಹಂಕ : ಪ್ರಜಾ ವಿಮೋಚನಾ ಚಳವಳಿ(ಸ್ವಾಭಿಮಾನ)ಯ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಮತ್ತು ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಅಯೂಬ್ ಖಾನ್ ಅವರ ನೇತೃತ್ವದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲಾ ಸಮಿತಿ ಹಾಗೂ ಯಲಹಂಕ ತಾಲ್ಲೂಕು ಘಟಕಗಳ ವಿವಿಧ ವಿಭಾಗಗಳಿಗೆ ಶನಿವಾರ ನೂತನ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತು.
ಸಂಘಟನೆಯ ಬೆಂಗಳೂರು ನಗರ ಜಿಲ್ಲಾ ಯುವ ಘಟಕದ ನೂತನ ಅಧ್ಯಕ್ಷರಾಗಿ ಅಭಿಲಾಶ್ ಕುಮಾರ್ ಎಂ., ಗೌರವಾಧ್ಯಕ್ಷರಾಗಿ ಶಿವು ಶಿವಪುರ, ಉಪಾಧ್ಯಕ್ಷರಾಗಿ ಸತೀಶ್ ಕುಮಾರ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಶ್ಯಾಮ್, ಕಾರ್ಯದರ್ಶಿಗಳಾಗಿ ಪ್ರಶಾಂತ್, ಗಣೇಶ್, ಎಂ.ಆರ್.ಮೂರ್ತಿ, ಮಹೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಶಶಿಕುಮಾರ್, ಕಾಡಪ್ಪ, ಗಣೇಶ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಕಾಶ್, ವೆಂಕಟೇಶ್ ಕೆ.ಪಿ., ಸದ್ದಾಂ ಬಾಬುಸಾಪಾಳ್ಯ, ಕಾನೂನು ಸಲಹೆಗಾರರಾಗಿ ಎಸ್.ಆರ್.ರಾಘವೇಂದ್ರ ಆಯ್ಕೆಯಾದರು.
ನೂತನ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಅಯೂಬ್ ಖಾನ್ ಅಭಿನಂದಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ಉಪಾಧ್ಯಕ್ಷ ಶ್ರೀನಿವಾಸ್ ಎಚ್., ಜಿಲ್ಲಾಧ್ಯಕ್ಷ ದೊಡ್ಡರಾಜು ಟಿ.ಸಿ., ಬೆಂ.ನಗರ ಜಿಲ್ಲಾ ಉಪಾಧ್ಯಕ್ಷ ವಸೀಂ ಬೇಗ್, ಯಲಹಂಕ ತಾಲ್ಲೂಕು ಅಧ್ಯಕ್ಷ ಕಾಂತರಾಜು ಬೆಳ್ಳಳ್ಳಿ, ಪ್ರಧಾನ ಕಾರ್ಯದರ್ಶಿ ಕಾರ್ತೀಕ್ ಎಚ್.ಎನ್., ಉಪಾಧ್ಯಕ್ಷ ಮೆಹಬೂಬ್ ಪಾಷಾ, ಸಮಿತಿ ಸದಸ್ಯ ಬಾಬಾಜಾನ್, ಚಳವಳಿಯ ಹಿರಿಯ ಮುಖಂಡ ರಾದ ಮಾರನಾಯಕನಹಳ್ಳಿ ಲಘುಮಯ್ಯ, ಥಣಿಸಂದ್ರದ ಚಂದ್ರು ಸಿ., ಜಾಲ ಹೋಬಳಿ ಅಧ್ಯಕ್ಷ ದಾಸಪ್ಪ, ಮಹಿಳಾ ವಿಮೋಚನಾ ಚಳವಳಿ ತಾಲ್ಲೂಕು ಅಧ್ಯಕ್ಷೆ ಮುನಿಲಕ್ಷ್ಮಮ್ಮ ಸೇರಿದಂತೆ ಇನ್ನಿತರರಿದ್ದರು.