

ಐಸಿಎಆರ್-ನಿವೇದಿ ಸಂಸ್ಥೆಯ ವತಿಯಿಂದ ಸ್ವಚ್ಛತಾ ಪಖ್ವಾಡಾ ಕಾರ್ಯಕ್ರಮ :
ಯಲಹಂಕ : ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ದಿಸೆಯಲ್ಲಿ ಡಿ.16ರಿಂದ 31ರವರೆಗೆ ನಡೆಯಲಿ ರುವ ಸ್ವಚ್ಛತಾ ಪಖ್ವಾಡಾ ಅಭಿಯಾನದ ಅಂಗವಾಗಿ ‘ರಾಷ್ಟ್ರೀಯ ಪಶುರೋಗ ಸೋಂಕುಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ'(ICAR- NIVEDI)ಯ ವತಿಯಿಂದ ದಿಬ್ಬೂರು ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿಜ್ಞಾನಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಶಾಲಾ ಮಕ್ಕಳಿಗೆ ಸ್ವಚ್ಛತೆ, ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಜಾಗೃತಿ ಮೂಡಿಸಿದರು.
ಈ ಉಪಕ್ರಮದ ಪ್ರಯುಕ್ತ ಸ್ವಚ್ಛತೆಯ ಮಹತ್ವ ಕುರಿತ ಕಿರುನಾಟಕ ಪ್ತದರ್ಶಿಸುವ ಮೂಲಕ ವಿದ್ಯಾರ್ಥಿಗಳಿಗೆ ಸ್ವಚ್ಛತೆ, ನೈರ್ಮಲ್ಯ, ಕಸ ವಿಂಗಡಣೆ ಮತ್ತು ಆರೋಗ್ಯ ಕುರಿತು ಅರಿವು ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಐಸಿಎಆರ್-ನಿವೇದಿ ಸಂಸ್ಥೆಯ ವಿಜ್ಞಾನಿಗಳಾದ ಡಾ.ನಾರಾಯಣನ್, ಡಾ.ಚೇತನ್ ಕುಮಾರ್, ಡಾ.ಸತೀಶ್ ಗೌಡ, ಡಾ.ಪುನೀತ್ ರಾಜ್, ಡಾ.ಪ್ರೇಮ್ ಕಿಶೋರ್, ಸಂಶೋಧನಾ ವಿದ್ಯಾರ್ಥಿಗಳಾದ ಓಂಕಲ್ಯಾಣ್, ಮಹೇಶ್ ಕುಮಾರ್, ವರ್ಷಿತಾ, ಐಶ್ವರ್ಯ, ದಿಬ್ಬೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ರಾಮಮೂರ್ತಿ, ಸಹಶಿಕ್ಷಕಿ ಸಿ.ಎ.ಗೀತಾ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳಿದ್ದರು.