ಐಸಿಎಆರ್-ನಿವೇದಿ ಸಂಸ್ಥೆಯ ವತಿಯಿಂದ ಸ್ವಚ್ಛತಾ ಪಖ್ವಾಡಾ ಕಾರ್ಯಕ್ರಮ :

ಯಲಹಂಕ : ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ದಿಸೆಯಲ್ಲಿ ಡಿ.16ರಿಂದ 31ರವರೆಗೆ ನಡೆಯಲಿ ರುವ ಸ್ವಚ್ಛತಾ ಪಖ್ವಾಡಾ ಅಭಿಯಾನದ ಅಂಗವಾಗಿ ‘ರಾಷ್ಟ್ರೀಯ ಪಶುರೋಗ ಸೋಂಕುಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ'(ICAR- NIVEDI)ಯ ವತಿಯಿಂದ ದಿಬ್ಬೂರು ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿಜ್ಞಾನಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಶಾಲಾ ಮಕ್ಕಳಿಗೆ ಸ್ವಚ್ಛತೆ, ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಜಾಗೃತಿ ಮೂಡಿಸಿದರು.

ಈ ಉಪಕ್ರಮದ ಪ್ರಯುಕ್ತ ಸ್ವಚ್ಛತೆಯ ಮಹತ್ವ ಕುರಿತ ಕಿರುನಾಟಕ ಪ್ತದರ್ಶಿಸುವ ಮೂಲಕ ವಿದ್ಯಾರ್ಥಿಗಳಿಗೆ ಸ್ವಚ್ಛತೆ, ನೈರ್ಮಲ್ಯ, ಕಸ ವಿಂಗಡಣೆ ಮತ್ತು ಆರೋಗ್ಯ ಕುರಿತು ಅರಿವು ಮೂಡಿಸಲಾಯಿತು.

ಇದೇ ಸಂದರ್ಭದಲ್ಲಿ ಐಸಿಎಆರ್-ನಿವೇದಿ ಸಂಸ್ಥೆಯ ವಿಜ್ಞಾನಿಗಳಾದ ಡಾ.ನಾರಾಯಣನ್, ಡಾ.ಚೇತನ್ ಕುಮಾರ್, ಡಾ.ಸತೀಶ್ ಗೌಡ, ಡಾ.ಪುನೀತ್ ರಾಜ್, ಡಾ.ಪ್ರೇಮ್ ಕಿಶೋರ್, ಸಂಶೋಧನಾ ವಿದ್ಯಾರ್ಥಿಗಳಾದ ಓಂಕಲ್ಯಾಣ್, ಮಹೇಶ್ ಕುಮಾರ್, ವರ್ಷಿತಾ, ಐಶ್ವರ್ಯ, ದಿಬ್ಬೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ರಾಮಮೂರ್ತಿ, ಸಹಶಿಕ್ಷಕಿ ಸಿ.ಎ.ಗೀತಾ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳಿದ್ದರು.

Leave a Reply

Your email address will not be published. Required fields are marked *