ಚಿಂತಾಮಣಿ: ತಾಲೂಕಿನ ಕಸಬಾ ಹೋಬಳಿ ಮೈಲಾಂಡ್ಲಹಳ್ಳಿ ಗ್ರಾಮದ ಸರ್ವೆ ನಂ:44 ರ 4 ಎಕೆರೆ 17 ಗುಂಟೆ ಜಮೀನಿನ ಪೈಕಿ 5 ಗುಂಟೆ ಜಮೀನು ವಿಕಲಚೇತನ ಅಂಜಿನಪ್ಪ ಬಿನ್ ನಾರಾಯಣಪ್ಪ ಗಡದಾಸನಹಳ್ಳಿ ಎಂಬುವರ ಹೆಸರಿನಲ್ಲಿ ಖಾತೆ ಇದ್ದು ಜಮೀನು ಮೂರು ಮತ್ತು ಒಂಬತ್ತು ಕಾಲಂ ತಾಳೆ ಬರುತ್ತಿಲ್ಲದೇ ಇರುವು ಕಾರಣ ಸರ್ವೆ ಮಾಡಲು ಉಪ ವಿಭಾಗಾಧಿಕಾರಿ, ತಾಲೂಕ್ ದಂಡಾಧಿಕಾರಿಗಳಿಗೆ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಲಿಖಿತ ಮೂಲಕ ಹಲವು ಬಾರಿ ಅರ್ಜಿಗಳನ್ನು ಸಲ್ಲಿಸಿದರು ಅಧಿಕಾರಿಗಳು ಕ್ಯಾರೆ ಎನ್ನದೆ ಇರುವ ಕಾರಣ ವಿಕಲಚೇತನ ಆಂಜನಪ್ಪ ಪ್ರತಿನಿತ್ಯ ತಾಲೂಕು ಕಚೇರಿಗೆ ಅಲೆದಾಡಿಸುತ್ತಿರುವ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿ ಅಧಿಕಾರಿಗಳು ಕೆಲಸ ಮಾಡಿಕೊಡದೆ ಇದ್ದ ಸಂದರ್ಭದಲ್ಲಿ ತಾಲೂಕ್ ಕಚೇರಿ ಆವರಣದಲ್ಲೇ ವಿಷಾ ಕುಡಿಯುತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಕಸಬಾ ಹೋಬಳಿ ಮೈಲಾಂಡ್ಲಹಳ್ಳಿ ಗ್ರಾಮದ ಸರ್ವೆ ನಂ:44 ರಲ್ಲಿ ವಿಕಲಚೇತನ ಅಂಜಿನಪ್ಪ ರವರ ತಾಯಿ ಮನೆಮ್ಮ ಕೊಂ ನಾರಾಯಣಪ್ಪ ರವರಿಂದ ಪುತ್ರನಾದ ಅಂಜಿನಪ್ಪ ನವರಿಗೆ 05 ಗುಂಟೆ ಜಮೀನು ಪಾವತಿ ಯಾಗಿದ್ದು ತಮ್ಮ ಜಮೀನನ್ನು ಅಳತೆ ಮಾಡಿ ಗುರುತಿಸಿ ಕೊಡಿ ಎಂದು ಅಧಿಕಾರಿಗಳಿಗೆ ಲಿಖಿತ ಮೂಲಕ ಅರ್ಜಿಗಳನ್ನು ಸಲ್ಲಿಸುತ್ತಿದ್ದರು ಸರ್ವೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅಳತೆ ಮಾಡಿ ಜಮೀನು ಗುರುತಿಸಿ ಕೊಡದೆ ಪ್ರತಿನಿತ್ಯ ತಾಲ್ಲೂಕ್ ಕಚೇರಿಗೆ ವಿಕಲಚೇತನ ಆಂಜಿಪ್ಪ ನವರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಅಧಿಕಾರಿಗಳ ನಡತೆ ಬಗ್ಗೆ ಅವರು ಹಿಡಿಶಾಪ ಹಾಕಿದ್ದಾರೆ.
ಅದಲ್ಲದೆ ಉಳಿದ ಖಾತೆದಾರರು ತಮ್ಮ ಜಮೀನಿನಲ್ಲಿ ಪ್ರವೇಶ ಮಾಡಲು ಅವಕಾಶ ಮಾಡಿಕೊಡದೆ ತೊಂದರೆ ನೀಡುತ್ತಿದ್ದಾರೆ ಎಂದು ಅವರು ದೂರಿದರು.
ಈ ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತಿಕೊಂಡು ಕೂಡಲೆ ಜಮೀನನ್ನು ಅಳತೆ ಮಾಡಿ ಗುರುತಿಸಿ ಕೊಡಬೇಕೆಂದು ವಿಕಲಚೇತನ ಆಂಜಿನಪ್ಪ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವಿಕಲಚೇತನ ವ್ಯಕ್ತಿಯ ಪಹಣಿ ತಿದ್ದುಪಡಿ ಮಾಡಲು ಅಲೆದಾಡಿಸುತ್ತಿರುವ ಅಧಿಕಾರಿಗಳು

ಚಿಂತಾಮಣಿ: ತಾಲೂಕಿನ ಕಸಬಾ ಹೋಬಳಿ ಮೈಲಾಂಡ್ಲಹಳ್ಳಿ ಗ್ರಾಮದ ಸರ್ವೆ ನಂ:44 ರ 4 ಎಕೆರೆ 17 ಗುಂಟೆ ಜಮೀನಿನ ಪೈಕಿ 5 ಗುಂಟೆ ಜಮೀನು ವಿಕಲಚೇತನ ಅಂಜಿನಪ್ಪ ಬಿನ್ ನಾರಾಯಣಪ್ಪ ಗಡದಾಸನಹಳ್ಳಿ ಎಂಬುವರ ಹೆಸರಿನಲ್ಲಿ ಖಾತೆ ಇದ್ದು ಜಮೀನು ಮೂರು ಮತ್ತು ಒಂಬತ್ತು ಕಾಲಂ ತಾಳೆ ಬರುತ್ತಿಲ್ಲದೇ ಇರುವು ಕಾರಣ ಸರ್ವೆ ಮಾಡಲು ಉಪ ವಿಭಾಗಾಧಿಕಾರಿ, ತಾಲೂಕ್ ದಂಡಾಧಿಕಾರಿಗಳಿಗೆ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಲಿಖಿತ ಮೂಲಕ ಹಲವು ಬಾರಿ ಅರ್ಜಿಗಳನ್ನು ಸಲ್ಲಿಸಿದರು ಅಧಿಕಾರಿಗಳು ಕ್ಯಾರೆ ಎನ್ನದೆ ಇರುವ ಕಾರಣ ವಿಕಲಚೇತನ ಆಂಜನಪ್ಪ ಪ್ರತಿನಿತ್ಯ ತಾಲೂಕು ಕಚೇರಿಗೆ ಅಲೆದಾಡಿಸುತ್ತಿರುವ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿ ಅಧಿಕಾರಿಗಳು ಕೆಲಸ ಮಾಡಿಕೊಡದೆ ಇದ್ದ ಸಂದರ್ಭದಲ್ಲಿ ತಾಲೂಕ್ ಕಚೇರಿ ಆವರಣದಲ್ಲೇ ವಿಷಾ ಕುಡಿಯುತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಕಸಬಾ ಹೋಬಳಿ ಮೈಲಾಂಡ್ಲಹಳ್ಳಿ ಗ್ರಾಮದ ಸರ್ವೆ ನಂ:44 ರಲ್ಲಿ ವಿಕಲಚೇತನ ಅಂಜಿನಪ್ಪ ರವರ ತಾಯಿ ಮನೆಮ್ಮ ಕೊಂ ನಾರಾಯಣಪ್ಪ ರವರಿಂದ ಪುತ್ರನಾದ ಅಂಜಿನಪ್ಪ ನವರಿಗೆ 05 ಗುಂಟೆ ಜಮೀನು ಪಾವತಿ ಯಾಗಿದ್ದು ತಮ್ಮ ಜಮೀನನ್ನು ಅಳತೆ ಮಾಡಿ ಗುರುತಿಸಿ ಕೊಡಿ ಎಂದು ಅಧಿಕಾರಿಗಳಿಗೆ ಲಿಖಿತ ಮೂಲಕ ಅರ್ಜಿಗಳನ್ನು ಸಲ್ಲಿಸುತ್ತಿದ್ದರು ಸರ್ವೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅಳತೆ ಮಾಡಿ ಜಮೀನು ಗುರುತಿಸಿ ಕೊಡದೆ ಪ್ರತಿನಿತ್ಯ ತಾಲ್ಲೂಕ್ ಕಚೇರಿಗೆ ವಿಕಲಚೇತನ ಆಂಜಿಪ್ಪ ನವರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಅಧಿಕಾರಿಗಳ ನಡತೆ ಬಗ್ಗೆ ಅವರು ಹಿಡಿಶಾಪ ಹಾಕಿದ್ದಾರೆ.
ಅದಲ್ಲದೆ ಉಳಿದ ಖಾತೆದಾರರು ತಮ್ಮ ಜಮೀನಿನಲ್ಲಿ ಪ್ರವೇಶ ಮಾಡಲು ಅವಕಾಶ ಮಾಡಿಕೊಡದೆ ತೊಂದರೆ ನೀಡುತ್ತಿದ್ದಾರೆ ಎಂದು ಅವರು ದೂರಿದರು.
ಈ ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತಿಕೊಂಡು ಕೂಡಲೆ ಜಮೀನನ್ನು ಅಳತೆ ಮಾಡಿ ಗುರುತಿಸಿ ಕೊಡಬೇಕೆಂದು ವಿಕಲಚೇತನ ಆಂಜಿನಪ್ಪ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *