ಜಿಗಣಿ ಬಿ.ಎನ್ ಗೋವಿಂದರಾಜ್/ರಾಜ ಶೇಖರ್ ರವರಿಗೆ ಪ್ರತಿಷ್ಠಿತ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ .

ಸಮಾಜ ಸೇವೆ ಮತ್ತು ಮಕ್ಕಳ ಚಲನಚಿತ್ರ ನಿರ್ಮಾಣ ಅನನ್ಯ ಸಾಧನೆಯನ್ನು ಗುರುತಿಸಿ ಆನೇಕಲ್ ತಾ ಜಿಗಣಿಯ ಸಮಾಜ ಸೇವಕರು ಚಲನಚಿತ್ರ ನಿರ್ಮಾಪಕರಾದ ಬಿ.ಎನ್ ಗೋವಿಂದರಾಜು / ರಾಜಶೇಖರ್ ರವರಿಗೆ ಬೆಂಗಳೂರು ಪ್ರೆಸ್ ಕ್ಲಬ್ ಆಡಳಿತ ಮಂಡಳಿ ಮತ್ತು ಆಯ್ಕೆ ಸಮಿತಿ ಗುರುತಿಸಿ ಕರ್ನಾಟಕದ ಹೆಮ್ಮೆ , ಪ್ರತಿಷ್ಠಿತ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ ಯನ್ನು ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಸಚಿವರಾದ ಎನ್. ಚೆಲುವರಾಯಸ್ವಾಮಿ ಮತ್ತು ಕೆ.ಎಚ್ ಮುನಿಯಪ್ಪ ರವರು ರಾಜಶೇಖರ್ ರವರಿಗೆ ಇಂದು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
ಸಮಾಜ ಸೇವಕರು ಹಾಗೂ ಚಲನಚಿತ್ರ ನಿರ್ಮಾಪಕರು ಆದ ಇವರು ಸಾವಿರಾರು ಜನರಿಗೆ ಅನ್ನ ದಾತರು ಎಸ್. ಗ್ರೂಪ್ ಪ್ರೈವೇಟ್ ಲಿಮಿಟೆಡ್ ಖಾಸಗಿ ಭದ್ರತಾ ಸಿಬ್ಬಂದಿ ಸಂಸ್ಥೆಯನ್ನು ಕಟ್ಟಿ ನೂರಾರು ಜನರಿಗೆ ಉದ್ಯೋಗ ಆಸರೆ ಅಲ್ಲದೆ ವೃದ್ಧಾಶ್ರಮ ಅನಾಥಾಶ್ರಮಗಳಿಗೆ ಕಳೆದ ಎರಡು ಮೂರು ದಶಕಗಳಿಂದ ಸಹಾಯ ಧನ ಅನ್ನದಾನ , ಬಡವರಿಗೆ ಸರ್ಕಾರಿ ಶಾಲಾ ಹಾಗೂ ಅಂಗವಿಕಲರಿಗೆ ಪ್ರೋತ್ಸಾಹ ಸಹಾಯಧನ ಇನ್ನಿತರ ಸಮಾಜ ಸೇವೆ ಮಾಡುತ್ತಾ ಬರುತ್ತಿರುವ ಮಾದರಿ ಸಮಾಜ ಸೇವಕರು ಬಿ.ಎನ್ ಗೋವಿಂದರಾಜು / ರಾಜ ಶೇಖರ್ ರವರು ಮಕ್ಕಳ ಕನ್ನಡ ಚಲನಚಿತ್ರ ಚಿಣ್ಣರ ಚಂದ್ರ ಎಂಬ ಚಿತ್ರಕ್ಕೆ ದುಬೈನಲ್ಲಿ ,ಅತ್ಯುತ್ತಮ ಮಕ್ಕಳ ಚಲನಚಿತ್ರ ನಿರ್ಮಾಪಕ ಪ್ರಶಸ್ತಿ ಸೇರಿದಂತೆ ಇಂದು ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಕರ್ನಾಟಕದ ಹೆಮ್ಮೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ
ಜಿಗಣಿಯ ರಾಜಶೇಖರ್/ ಬಿ. ಎನ್ ಗೋವಿಂದರಾಜರವರು ರಾಜ್ಯಾದ್ಯಂತ ಎಲೆ ಮರೆ ಕಾಯಿಯಂತೆ ಸಾಮಾಜಿಕ ಕ್ಷೇತ್ರ ಮತ್ತು ಚಲನಚಿತ್ರ ಉದ್ಯಮದಲ್ಲಿ ಸೇವೆ ಸಲ್ಲಿಸುತ್ತಾ ಸಮಾಜಕ್ಕೆ ಮಾದರಿಯಾಗಿದ್ದಾರೆ ಸರಳ ಸ್ವಭಾವ ಸಾಮಾಜಿಕ ಜನಪದ ಚಿಂತನೆ ಇರುವ ಇವರು ಸಣ್ಣ ಬಡವರಿಗು ಮಿಡಿಯುವ ಸಹೃದಯಿ . ಸಾರ್ವಜನಿಕ ವಲಯದಲ್ಲಿ ಹೊರ ಜಗತ್ತಿಗೆ ಕಾಣಿಸದೆ ಸಮಾಜ ಸೇವೆ ಮಾಡುತ್ತಾ ಬರುತ್ತಿರುವ ಇವರ ಈ ಅನನ್ಯ ಸಾಧನೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಈ ಪ್ರಮುಖ ಸಮಯದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಸಚಿವರುಗಳಾದ ಎನ್. ಚೆಲುವರಾಯಸ್ವಾಮಿ ಕೆ.ಎಚ್ ಮುನಿಯಪ್ಪ. ಪ್ರೆಸ್ ಕ್ಲಬ್ ಅಧ್ಯಕ್ಷರಾದ ಆರ್ .ಶ್ರೀಧರ್ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಬೆಳ್ಳಿತಟ್ಟೆ ಉಪಾಧ್ಯಕ್ಷರಾದ ಮೋಹನ್ ಕುಮಾರ್ ಬಿ.ಎನ್ ಕಾರ್ಯದರ್ಶಿಗಳಾದ ಮಂಜುನಾಥ್ ಜಿ.ವೈ ಜಂಟಿ ಕಾರ್ಯದರ್ಶಿ ಧರಣೆಶ್ ಬಿ. ಎನ್ ಸೇರಿದಂತೆ ಆಡಳಿತ ಮಂಡಳಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರು ಪತ್ರಕರ್ತ ಮಿತ್ರರು ಈ ಪ್ರಮುಖ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವರದಿ ಕುಮಾರಸ್ವಾಮಿ ಎಸ್.ಎಂ

Leave a Reply

Your email address will not be published. Required fields are marked *