ಹೊಸಕೋಟೆ: ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಹೊಸಕೋಟೆ ಯಾದ್ಯಂತ ಮುಸ್ಲಿಂ ಭಾಂದವರು ಶ್ರದ್ದೆ ಭಕ್ತಿಯಿಂದ ಆಚರಿಸಿದರು.
ನಗರದ ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳು ಹಬ್ಬದ ಸಂದೇಶ ಸಾರಿ, ಬಕ್ರೀದ್ ಹಬ್ಬದ ಆಚರಣೆ ಹಾಗೂ ದಾನ-ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು.ಪ್ರಾರ್ಥನೆಯ ಬಳಿಕ ಮುಸ್ಲಿಂ ಭಾಂದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಸಮುದಾಯದ ಮುಖಂಡರಾದ ಶೌರತ್, ಜಾವಿದ್ ಪಾಷಾ, ಅಬ್ದುಲ್ ಖಾನ್, ಶಾದಿಕ್ ಪಾಷಾ, ಯಾರಬ್ ಪಾಷಾ, ಅನ್ಸರ್ ,ನಿಸಾರ್, ಸೇರಿದಂತೆ ಹಲವಾರು ಮುಖಂಡರುಗಳು ಭಾಗಿಯಾಗಿದ್ದರು.

ಹುಬ್ಬಳ್ಳಿಯಲ್ಲೂ ಬಕ್ರೀದ್‌ ಆಚರಣೆ

ಹುಬ್ಬಳ್ಳಿ ಅಮರಗೋಳ ಈದ್ಗ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತವಾಗಿ ಸಹಸ್ರಾರು ಮುಸ್ಲಿಂ ಬಾಂಧವರು ವಿಶೇಷವಾದ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯಲ್ಲಿ ಮಳೆರಾಯನ ಆಗಮನಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಾಡಿನ ಮತ್ತು ದೇಶದ ಸಮಸ್ತ ಜನತೆಗೆ ಒಳಿತು ಬಯಸಿ ದೇಶದ ಸಮೃದ್ಧಿ ಉನ್ನತವಾಗಲಿ. ದುರ್ಘಟನೆ ಹಾಗೂ ಅನಾಹುತಗಳಿಂದ ಮೃತಪಟ್ಟವರಿಗೆ ದೇವರು ಶಾಂತಿ ನೀಡಲಿ ಲೋಕ ಕಲ್ಯಾಣಕ್ಕಾಗಿ ಅಲ್ಲಾಹು ಮತ್ತೆ ಧರೆಗಿಳಿದು ಸಮಸ್ತ ಜನತೆಗೂ ಸದ್ಭಕ್ತಿಯನ್ನುಂಟು ಮಾಡಲಿ ಸರ್ವಧರ್ಮಗಳು ಸಹ ಬಾಳ್ವೆ ನೆಲೆಸಲಿ ಎಂದು ದೇವರಲ್ಲಿ ವಿಶೇಷವಾದ ಪ್ರಾರ್ಥನೆ ಸಲ್ಲಿಸಿದರು. ವರದಿ ಎಂ ಆರ್ ನದಾಫ್ ಹುಬ್ಬಳ್ಳಿ

Leave a Reply

Your email address will not be published. Required fields are marked *