ಪಶುಗಳ ರಕ್ಷಣೆ ಹಾಗೂ ರೈತರ ಬದುಕಿಗೆ ದಾರಿ ದೀಪವಾಗಬೇಕಾಗಿದ್ದ ಪಶು ವೈದ್ಯ ಇಲಾಖೆಯ ಉಪನಿರ್ದೇಶಕರು ಮತ್ತು ವೈದ್ಯಾಧಿಕಾರಿಗಳು ಪಶು ಪಾಲನ ಯೋಜನೆಯ ಕೋಟ್ಯಾಂತರ ರೂಪಾಯಿ ಹಣವನ್ನು ಲೂಟಿ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಜಿಲ್ಲಾಧ್ಯಕ್ಷ ಚಿಕ್ಕನಾರಾಯಣ ಗಂಭೀರ ಆರೋಪ ಮಾಡಿದರು.
ಬಂಗಾರಪೇಟೆ ಪಟ್ಟಣದ ಡಾ: ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾ ಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪಶು ವೈದ್ಯ ಇಲಾಖೆ ರೈತರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ ಕುರಿ, ಹಂದಿ, ಹಸು,ಕೋಳಿ ಸಾಕಾಣಿಕೆ ಮತ್ತು ಗೋಶಾಲೆಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿ ಸರ್ಕಾರ ಬಿಡುಗಡೆಗೊಳಿಸಿದೆ ಆದರೆ ಭ್ರಷ್ಟ ಅಧಿಕಾರಿಗಳು ಬಂದ ಹಣವನ್ನು ಲೂಟಿ ಮಾಡಿ ರೈತರ ಬದುಕಿಗೆ ಕಂಟಕ ಪ್ರಾಯವಾಗಿದ್ದಾರೆ.
ರೈತರ ಬಡವರ ಹಣವನ್ನು ನುಂಗಿ ನೀರು ಕುಡಿದ ಅಧಿಕಾರಿ ವರ್ಗ
ಕೋಲಾರ ಜಿಲ್ಲೆಯ ಪಶು ವೈದ್ಯ ಇಲಾಖೆಯ ಉಪನಿರ್ದೇಶಕರಾಗಿ ಕಾರ್ಯನಿರ್ಶಿಸುತ್ತಿರುವ ಗಂಗಾ ತುಳಸಿ ರಾಮ್ ಹಾಗೂ ಸಹಾಯಕ ಉಪ ನಿರ್ದೇಶಕರಾದ ಸುಭಾನ್, ಕೆಜಿಎಫ್ ನ ರವಿಕುಮಾರ್, ಮಾಲೂರಿನ ನಾರಾಯಣಸ್ವಾಮಿ, ಶ್ರೀನಿವಾಸಪುರದ ಮಂಜುನಾಥ್ ರೆಡ್ಡಿ, ಮುಳುಬಾಗಿಲುನ ಅನುರಾಧ ಮತ್ತು ಸರ್ವೇಶ್ ಎಂಬ ಅಧಿಕಾರಿಗಳು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿ ಕೋಟ್ಯಾಂತರ ರೂಪಾಯಿಗಳು ಕೊಳ್ಳೆ ಹೊಡೆದಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ನಿಕಟ ಪೂರ್ವ ಜಿಲ್ಲಾಧಿಕಾರಿ ವೆಂಕಟರಾಜು ರವರಿಗೆ ತನಿಖೆ ನಡೆಸಲು ಮನವಿ ನೀಡಲಾಗಿತ್ತು ಆದರೆ ವೆಂಕಟರಾಜು ರವರ ಆಕಸ್ಮಿಕ ವರ್ಗಾವಣೆ ಕಾರಣ. ಜಿಲ್ಲಾ ಪಂಚಾಯಿತಿ ಕಾರ್ಯನಿರ್ವನಾಧಿಕಾರಿಯಾದ ಯುಕೇಶ್ ಕುಮಾರ್ ರವರಿಗೆ ತನಿಖೆ ನಡೆಸಲು ನಮ್ಮ ಮನವಿಯನ್ನು ವರ್ಗಾಯಿಸಲಾಗಿತ್ತು ಆದರೆ ನ್ಯಾಯ ಒದಗಿಸಬೇಕಾದ ಅಧಿಕಾರಿ ತನಿಖೆ ನಡೆಸದೆ ಮೌನವಾಗಿದ್ದಾರೆ ಹಾಗೂ ಜಿಲ್ಲೆಯಲ್ಲಿರುವ ಅಧಿಕಾರಿಗಳಿಂದ ಮಾಸಿಕ ಇಂತಿಷ್ಟು ಹಣ ಪರ್ಸೆಂಟೇಜ್ ರೂಪದಲ್ಲಿ ಪಡೆಯುವುದರಲ್ಲಿ ಮಗ್ನರಾಗಿದ್ದಾರೆ.
ಪಶುವೈದ್ಯ ಇಲಾಖೆಯನ್ನು ಸರ್ವನಾಶ ಮಾಡಿದ ಸರ್ವೇಶ್
ಮುಳಬಾಗಿಲು ತಾಲ್ಲೂಕಿನ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಸರ್ವೇಶ್ ರವರು ಅಪಾರ ಪ್ರಮಾಣದ ಹಣ ಭ್ರಷ್ಟಾಚಾರ ವಸಿಗಿದ್ದಾರೆ ಇದರೊಂದಿಗೆ ನಿಕಟಪೂರ್ವ ಶಾಸಕರಾದ ಮಾಜಿ ಸಚಿವ ನಾಗೇಶ್ ರವರಿಗೆ 24 ಲಕ್ಷ ರೂಪಾಯಿಗಳನ್ನು ಲಂಚದ ರೂಪದಲ್ಲಿ ಹಣ ಕೊಟ್ಟು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವನಾಧಿಕಾರಿಯಾಗಿ ನೇಮಕವಾಗಿದ್ದಾರೆ. ಈ ಸಂಗತಿಯನ್ನು ಸ್ವತಹ ಸರ್ವೇಶ್ ರವರೆ ತಿಳಿಸಿದ್ದಾರೆ.
ಇದರೊಟ್ಟಿಗೆ ಸರ್ಕಾರಿ ವಾಹನವನ್ನು ತಮ್ಮ ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡು ಪ್ರಯಾಣಿಸುವ ಸಮಯದಲ್ಲಿ ಅಪಘಾತ ಸಂಭವಿಸಿರುತ್ತದೆ ಆದರೆ ತನ್ನ ಅಧಿಕಾರದ ಪ್ರಭಾವ ಬಳಸಿ ಎಫ್ಐಆರ್ ದಾಖಲಿಸದಂತೆ ನೋಡಿಕೊಂಡಿದ್ದಾರೆ.
ಕೆಜಿಎಫ್ ನ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಗಿರೀಶ್, ಲೆಕ್ಕಪರಿಶೋಧಕ ಮನೋಹರ್ ಪಶುಭಾಗ್ಯ ಯೋಜನೆಯ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಬೇಕಾದ ಹಣವನ್ನು ನಕಲಿ ಸಹಿ ಮಾಡುವುದರ ಮೂಲಕ ನುಂಗಿ ನೀರು ಕುಡಿದಿದ್ದಾರೆ. ಕೆಜಿಎಫ್ ತಾಲ್ಲೂಕಿನ ಗುಟ್ಟಹಳ್ಳಿ ಗ್ರಾಮದ ಸರ್ಕಾರಿ ಗೋಶಾಲೆಯಲ್ಲಿ 50 ಹಸುಗಳಿದ್ದು ಲೆಕ್ಕಪತ್ರದಲ್ಲಿ 150ಕ್ಕೂ ಹೆಚ್ಚು ಲೆಕ್ಕ ತೋರಿಸಿ 1 ಕೋಟಿ 50 ಲಕ್ಷ ಹಣ ಲೂಟಿ ಮಾಡಿದ್ದಾರೆ. ಚಂದು ಎಂಬ ಅಧಿಕಾರಿ ಸಾರ್ವಜನಿಕರಿಗೆ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ಹಣ ಪಡೆದು ವಂಚಿಸಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಕೋಲಾರದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಸುವವರೆಗೂ ನಾನು ಬಿಡುವುದಿಲ್ಲ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಯುವ ಘಟಕ. (ಚಿಂಟು) ರಾಮಚಂದ್ರ, ತಾಲ್ಲೂಕು ಅಧ್ಯಕ್ಷ ಚಂದ್ರಪ್ಪ, ಜಿಲ್ಲಾ ಕಾರ್ಮಿಕ ಘಟಕದ ಕಾರ್ಯದರ್ಶಿ ಅಂಬರೀಶ್, ಶ್ರೀನಾಥ್, ಜಿಲ್ಲಾ ಗೌರವಾಧ್ಯಕ್ಷ ಎ. ರಮೇಶ್, ಕಾರ್ಯಕರ್ತರಾದ ಕೃಷ್ಣಮೂರ್ತಿ, ರಮೇಶ ಉಪಸ್ಥಿತರಿದ್ದರು.