ವಿಶೇಷ ಮಕ್ಕಳ ವಸತಿಯುತ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ.

ಬೀದರ: ನಗರದ ಮೈಲೂರ್ ಕ್ರಾಸ್ ಹತ್ತಿರ ಇರುವ ವಿಶೇಷ ಮಕ್ಕಳ ವಸತಿಯುತ ಶಾಲೆಯಲ್ಲಿ ೭೬ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಮೊದಲಿಗೆ ಅತಿಥಿಯವರೊಂದಿಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು. ನಂತರ ಅತಿಥಿಯವರನ್ನು ಸ್ವಾಗತಿಸುತ್ತಾ, ಮೊದಲಿಗೆ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಡಾ. ಬಿ.ಆರ್. ಅಂಬೇಡ್ಕರ ಕಲ್ಚರಲ್ & ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷರಾದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ನವೀನ ವಲ್ಲಾಪೂರೆ ರವರು ಕಾರ್ಯಕ್ರಮವನ್ನುದ್ದೇಶಿಸಿ, ೭೬ನೇ ಗಣರಾಜ್ಯೋತ್ಸವದ ಅಂಗವಾಗಿ ಎಲ್ಲರಿಗೂ ಶುಭಾಷಯಗಳನ್ನು ಕೋರಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಬೀದರ ಜಿಲ್ಲೆಯ ಹಿರಿಯ ಹೋರಾಟಗಾರರು ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಶ್ರೀ ಅನೀಲಕುಮಾರ ಬೆಲ್ದಾರ್ ರವರು ಕಾರ್ಯಕ್ರಮವನ್ನುದ್ದೇಶಿಸಿ ಈ ಒಂದು ಗಣರಾಜ್ಯೋತ್ಸವವನ್ನು ನಾವು ವಿಜೃಂಭಣೆಯಿoದ ಆಚರಿಸುತ್ತಿದ್ದೇವೆ. ಆದರೆ ಈ ಒಂದು ಸ್ವಾತಂತ್ರಗೋಸ್ಕರ ಬಹಳಷ್ಟು ಮಹಾನ/ ಮಹನೀಯರು ದೇಶಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡಿರುತ್ತಾರೆ ಹಾಗೂ ಬಾಬಾ ಸಾಹೇಬ ಅಂಬೇಡ್ಕರ ರವರ ಸಂವಿಧಾನವನ್ನು ಎಲ್ಲರು ಓದುವುದನ್ನು ರೂಢಿ ಮಾಡಿಕೊಳ್ಳಬೇಕು ಹಾಗೂ ವಿಶೇಷ ಮಕ್ಕಳ ವಸತಿಯುತ ಶಾಲೆಯ ಮಕ್ಕಳನ್ನು ಬಹಳ ಪ್ರೀತಿಯಿಂದ ಹಾಗೂ ಗೌರವದಿಂದ ನೋಡಿಕೊಳ್ಳುತ್ತಿರುವ ಎಲ್ಲಾ ಶಿಕ್ಷಕರ ವೃಂದದವರನ್ನು ಧನ್ಯವಾದಗಳನ್ನು ತಿಳಿಸಿದರು ಹಾಗೂ ವಿಶೇಷ ಮಕ್ಕಳನ್ನು ಸಾಮಾನ್ಯ ಮಕ್ಕಳಂತೆ ಇರುವುದಿಲ್ಲ, ಇವರಿಗೆ ವಿಶೇಷ ಕಾಳಜಿಯಿಂದ ನೊಡಿಕೊಳ್ಳುವ ಜವಾಬ್ದಾರಿ ಇರುತ್ತದೆ. ಅದಗೋಸ್ಕರ ಎಲ್ಲಾ ಸಿಬ್ಬಂದಿಯವರ ಸಹಾಯವು ಸಹ ಬಹಳ ಅವಶ್ಯಕವಾಗಿರುತ್ತದೆ ಎಂದು ಮನಮಾತು ಹೇಳಿದರು.
ಮಲಾಕಿ ಮೈಕಲ್ ಯೋಜನಾ ಸಂಯೋಜಕರು ಕಾರ್ಯಕ್ರಮವನ್ನುದ್ದೇಶಿಸಿ, ೭೬ನೇ ಗಣರಾಜ್ಯೋತ್ಸವದ ಕುರಿತು ಮಾತನಾಡುತ್ತಾ, ವಿಶೇಷ ಮಕ್ಕಳ ವಸತಿಯುತ ಶಾಲೆಯ ಮಕ್ಕಳನ್ನು ಗೌರವದಿಂದ ಕಾಣುವಂತೆ ಹೇಳಿದರು ಹಾಗೂ ಎಲ್ಲಾ ಜಾತಿ, ಮತಗಳು ಒಂದು ಎನ್ನುವ ಭಾವನೆಯನ್ನು ಮೂಡಿಸಿರುವ ನಮ್ಮ ಸಂವಿಧಾನವನ್ನು ಗೌರವಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ರೇಣುಕಾ ಆಪ್ತ ಸಮಾಲೋಚಕರು ರವರು ಮಾತನಾಡಿ, ವಿಶೇಷ ಮಕ್ಕಳ ವಸತಿ ಯುತ ಶಾಲೆಯಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟಿರುವ ಮಾನ್ಯರಿಗೆ ಧನ್ಯವಾದಗಳನ್ನು ಕೋರುತ್ತಾ ಹಾಗೂ ೭೬ನೇ ಗಣರಾಜ್ಯೋತ್ಸವದ ಶುಭಾಷಯಗಳನ್ನು ಕೋರುತ್ತಾ, ವಿಶೇಷ ಮಕ್ಕಳನ್ನು ತಂದೆ-ತಾಯಿಯವರು ಶಾಪ ಎನ್ನಲಾರದೇ ದೇವರು ಕೊಟ್ಟ ವರ ಎಂದು ಭಾವಿಸಬೇಕು ಹಾಗೂ ಪೂಜೆ ಭಾವನೆಯಿಂದ ಮಕ್ಕಳನ್ನು ನೋಡುವಂತೆ ಹೇಳಿದರು ಹಾಗೂ ಹೆಣ್ಣು ಮಕ್ಕಳನ್ನು ಗೌರವದಿಂದ ನೋಡಬೇಕು, ಸಮಾನತೆ ಹಕ್ಕನ್ನು ನೀಡಿರುವ ಅನೇಕ ಮಹನ/ ಮಹನೀಯರಲ್ಲಿ ಬಾಬಾ ಸಾಹೇಬ ಅಂಬೇಡ್ಕರ ರವರು ಒಬ್ಬರಾಗಿದ್ದಾರೆ ಹಾಗೂ ಬಾಬಾ ಸಾಹೇಬ ಅಂಬೇಡ್ಕರ ರವರು ಬರೆದಿರುವ ಸಂವಿಧಾನವನ್ನು ಎಲ್ಲರು ಗೌರವಿಸುವಂತೆ ಹೇಳಿದರು. ಹೆಣ್ಣು ಮಕ್ಕಳು ಸಮಾಜ ಸೇವೆಯಲ್ಲಿ ಮುಂದಾಗುವoತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರವೀಣ ವಿಶೇಷ ಮಕ್ಕಳ ಮುಖ್ಯೋಪಾಧ್ಯಾಯರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಗಣರಾಜ್ಯೋತ್ಸವದ ಅಂಗವಾಗಿ ನಾವು ಇಂದು ವಿಶೇಷ ಮಕ್ಕಳ ಶಾಲೆಯಲ್ಲಿ ಕಾರ್ಯಕ್ರಮವನ್ನು ಆಚರಿಸುತ್ತಿದ್ದು, ಬಹಳ ಸಂತೋಷದ ವಿಷಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸುಮನ್, ರೈಚಲ್ ರಾಣಿ, ರೇಖಾ, ಸಂತೋಷ ಸೋನಾರ, ಸಂತೋಷ ಬಿರಾದಾರ, ಮಾರುತಿ ಕಾಂಬಳೆ, ನಾಗನಾಥ, ಸಿಬ್ಬಂದಿ ವರ್ಗದವರು ಹಾಗೂ ಕಾರ್ಯಕ್ರಮ ಕೇಂದ್ರಬಿoದುವಾದ ಸುಮಾರು ವಿಶೇಷ ಮಕ್ಕಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ವಿಜಯಲಕ್ಷ್ಮೀ ಶಿಕ್ಷಕಿ ಮಾಡಿದರು, ಸ್ವಾಗತವನ್ನು ಮೀನಾ ರವರು ನೆರವೇರಿಸಿಕೊಟ್ಟರು.

Leave a Reply

Your email address will not be published. Required fields are marked *