ಗಣರಾಜ್ಯೋತ್ಸವ ಆಚರಣೆ ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ: ಸಂದೀಪ್.ಬಿ ರೆಡ್ಡಿ ಹೇಳಿಕೆ.
ಸ್ವಚ್ಛತೆಯ ಮೂಲಕ ವಿನೂತನವಾಗಿ ನಂದಿ ಬೆಟ್ಟದ ಮೇಲೆ 76ನೇ ಗಣರಾಜ್ಯೋತ್ಸವ ಆಚರಣೆ

ಚಿಕ್ಕಬಳ್ಳಾಪುರ: ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂದೀಪ್.ಬಿ ರೆಡ್ಡಿ ಮಾತನಾಡಿ ೧೯೫೦ ಜನವರಿ ೨೬ರ ದಿನದ ಮಹತ್ವವನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸ್ಮರಣೆ ಮಾಡಬೇಕು.ಈದಿನ ರಜೆ ದೊರೆತರೆ ಸಾಕು ಮಜಾ ಮಾಡೋಣ ಎಂದು ಯೋಜಿಸುವವರ ನಡುವೆ ಚಿಕ್ಕಬಳ್ಳಾಪುರದ ಯುವಕರು ನಂದಿಬೆಟ್ಟದ ಮೇಲೆ ೭೬ನೇ ಗಣರಾಜ್ಯೋತ್ಸವವನ್ನು ಪ್ಲಾಸ್ಟಿಕ್ ಕಸವನ್ನು ಆರಿಸಿ ಪರಿಸರಕ್ಕೆ ಒಳಿತು ಮಾಡುವ ಮೂಲಕ ಆಚರಣೆ ಮಾಡಲು ಬಂದಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಚಿಕ್ಕಬಳ್ಳಾಪುರ ತಾಲೂಕು ನಂದಿ ಬೆಟ್ಟದ ಮೇಲೆ ಭಾನುವಾರು ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ೭೬ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಭಾರತಾಂಬೆ, ಮಹಾತ್ಮಾಗಾಂಧಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್, ಭಗತ್‌ಸಿಂಗ್ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ನಮ್ಮ ದೇಶಕ್ಕೆ ಸ್ವಾತಂತ್ರ ಬಂದು ೭೮ ವರ್ಷ ಕಳೆದರೂ ಮುಕ್ತವಾಗಿ ಎಲ್ಲರೂ ಒಗ್ಗೂಡಿ ನಂದಿಬೆಟ್ಟದ ಮೇಲೆ ಗಣರಾಜ್ಯೋತ್ಸವ ಆಚರಿಸಲು ಕೂಡ ಆಗುತ್ತಿಲ್ಲ.ತೊಂದರೆ ಕೊಡುವ ಜನ ಎಲ್ಲಾ ಕಾಲಕ್ಕೂ ಇದ್ದೇ ಇರುತ್ತಾರೆ.ಅಡ್ಡಿ ಆತಂಕ ಎದುರಿಸಿದ ಮಹಾತ್ಮಾಗಾಂಧೀ,ಅoಬೇಡ್ಕರ್ ವೀರಸಾವರ್ಕರ್, ನನ್ನ ಆದರ್ಶ,ಭಗತ್‌ಸಿಂಗ್ ಅವರಿಗೆ ಕೂಡ ಇವನ್ನೆಲ್ಲಾ ಮೆಟ್ಟಿನಿಂತು ದೇಶಪ್ರೇಮಕ್ಕಾಗಿ ಹೋರಾಟ ಮುನ್ನಡೆಸಿದ ಪರಿಣಾಮ ೧೯೪೭ರಂದು ದೇಶ ಬ್ರಿಟೀಷರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಲು ಸಾಧ್ಯವಾಯಿತು.ಅವರನ್ನು ಪೂಜ್ಯನೀಯ ಸ್ಥಾನದಲ್ಲಿಟ್ಟು ಹೀರೋಗಳಾಗಿ ಪೂಜಿಸುವಂತಾಗಿದೆ.ಕುಟುoಬದ ಜತೆಗೆ ದೇಶವನ್ನೂ ಪ್ರೀತಿಸೋಣ ಎಂದರು.

೧೯೪೭ ರಿoದ ಆಚೆಗೆ ನನ್ನ ದೇಶ ಸ್ವತಂತ್ರವಾಗಿ ತನ್ನನ್ನು ತಾನು ಆಳ್ವಿಕೆ ಮಾಡಿಕೊಳ್ಳಲು ಮುಂದಾಯಿತು.ಅoದಿನ ನನ್ನ ನಾಯಕರು ಭಾರತವನ್ನು ಐಕ್ಯತೆಯಿಂದ ಮುನ್ನಡೆಸಲು ಬೇಕಾದ ನಮ್ಮದೇ ಆದ ಸ್ವಂತದ್ದಾದ ಕಾಯ್ದೆ ಕಾನೂನು ಇರಲಿಲ್ಲ. ತಾತ್ಕಾಲಿಕ ಸರಕಾರದ ಮುಖ್ಯಸ್ಥರಾದ ಪ್ರಧಾನಿ ಜವಹರಲಾಲ್ ನೆಹರು ಸರಕಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೈಗೆ ಸಂವಿಧಾನ ರಚಿಸುವ ಜವಾಬ್ದಾರಿ ನೀಡಲಾಯಿತು.ಅವರ ಅವವಿರತ ಶ್ರಮ,ಅಪಾರ ಓದಿನ ಹಿನ್ನೆಲೆಯಲ್ಲಿ ಬರೆದ ಭಾರತೀಯ ಸಂವಿಧಾನವನ್ನು ೧೯೫೦ ಜನವರಿ ೨೬ರಂದು ದೇಶಕ್ಕೆ ಸಮರ್ಪಣೆ ಮಾಡಲಾಯಿತು.ಅಲ್ಲಿಂದೀಚೆಗೆ ರಾಜಪ್ರಭುತ್ವ ನಾಶವಾಗಿ ಗಣತಂತ್ರ ವ್ಯವಸ್ಥೆ ಜಾರಿಗೆ ಬಂದಿತು.ಇಲ್ಲಿoದಾಚೆ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿತು ಅದರ ತಳಹದಿ ಮತ್ತು ಇಟ್ಟಿಗೆಗಳು ನಾವಾಗಿದ್ದೇವೆ.ಇಂತಹ ಸುಧಿನವನ್ನು ಹೆಮ್ಮೆಯಿಂದ ಆಚರಿಸಲು ಕೂಡ ಯುವಜನತೆ ಹಿಂದೆ ಮುಂದೆ ನೋಡುತ್ತಿರುವ ಹೊತ್ತಿನಲ್ಲಿ ಚಿಕ್ಕಬಳ್ಳಾಪುರದ ಯುವಕರು ನೂರಾರು ಸಂಖ್ಯೆಯಲ್ಲಿ ಬೆಳಿಗ್ಗೆ ೬.೩೦ ರಿಂದ ೮.೩೦ರ ತನಕ ಕಸವನ್ನು ಸ್ವಚ್ಚ ಮಾಡುತ್ತಾ ಕಾಲ್ನಡಿಗೆಯಲ್ಲಿ ನಂದಿಬೆಟ್ಟಕ್ಕೆ ಬಂದು ೭೬ನೇ ಗಣರಾಜ್ಯೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿ ಬಂದಿರುವ ಪ್ರತಿಯೊಬ್ಬ ದೇಶಪ್ರೇಮಿ ಯುವಕ ಯುವತಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಅoಬೇಡ್ಕರ್ ಬರೆದ ಸಂವಿಧಾನದ ಆಧಾರದಲ್ಲಿ ನಮ್ಮ ದೇಶದ ಮೊದಲ ಚುನಾಯಿತ ಸರಕಾರ ೧೯೫೦ರಲ್ಲಿ ಜಾರಿಗೆ ಬಂದಿತು.ಇoದಿಗೂ ಕೂಡ ದೇಶವನ್ನು ಸಮರ್ತವಾಗಿ ಮುನ್ನಡೆಸಲು ಇದೇ ಸಂವಿಧಾನ ಆಶ್ರಯವಾಗಿದೆ.ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರಲ್ಲಿ ಕೈಮುಗಿದು ಪ್ರಾರ್ಥಿಸುತ್ತೇನೆ.ನಂದಿಗಿರಿಧಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮುಂದಾಗಬೇಕು.ಇಲ್ಲಿ ಬಂದು ಕಸಕಡ್ಡಿಹಾಕಿ, ಪರಿಸರವನ್ನು ಹಾಳು ಮಾಡುವವರು ನನ್ನ ಪ್ರಕಾರ ನಿಜವಾದ ಭಾರತೀಯರೇ ಅಲ್ಲ.ಈ ದೇಶದ ಪ್ರಕೃತಿ ಪರಿಸರವನ್ನು ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ.ಭಾರತವೆಂದರೆ ಉತ್ತರ ಭಾರತ ಮಾತ್ರವಲ್ಲ.ಬೆಂಗಳೂರು ಮಂಗಳೂರು, ಹೈದರಾಬಾದ್, ಚನೈ ಕಲ್ಕತ್ತ ಮಾತ್ರವಲ್ಲ,ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಪ್ರತಿಯೊಂದು ಭೂಪ್ರದೇಶವೂ ಭಾರತವೇ ಆಗಿದೆ.ಇದರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯವಾಗಬೇಕಿದೆ.ನನ್ನ ಸಣ್ಣ ಕೂಗಿಗೆ ಓಗೊಟ್ಟು ಗಣತಂತ್ರದಿನವನ್ನು ಆಚರಿಸಲು ಬಂದಿರುವ ನೂರಾರು ಮಂದಿ ಯುವಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಸಾಹಿತಿ ವರದರಾಜು ಮಾತನಾಡಿ ಗಣರಾಜ್ಯೋತ್ಸವದ ದಿನದಂದು ನಾಗರೀಕರಿಗೆ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಲು ಶ್ರಮದಾನದ ಮೂಲಕ ಕರೆ ನೀಡಿದ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ೧೯೫೦ ಜನವರಿ ೨೬ರಿಂದ ನಮಗೆ ನಿಜವಾಗಿ ಸ್ವಾತಂತ್ರ ಬಂದ ದಿನ ಎಂದರೆ ತಪ್ಪಲ್ಲ.ಏಕೆಂದರೆ ಆವರೆಗೆ ಬ್ರಿಟೀಷರ ಕುತಂತ್ರಕ್ಕೆ ಒಳಗಾಗಿ ನೂರಾರು ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿದ್ದ ಅನೇಕ ಭಾರತವನ್ನು ಒಗ್ಗೂಡಿಸಿ ಏಕಭಾರತವಾಗಿಸಿದ ಸುಸಂದರ್ಭವೇ ಗಣರಾಜ್ಯೋತ್ಸವ ಆಚರಣೆಯಾಗಿದೆ.ಇಂತಹ ಕಾರ್ಯಕ್ರಮವನ್ನು ನಂದಿಬೆಟ್ಟದ ಮೇಲೆ ಆಚರಿಸಲು ಚಿಕ್ಕಬಳ್ಳಾಪುರದ ಹತ್ತಾರು ಸಂಘಟನೆಗಳು, ಸಮಾಜಸೇವಕರು, ಕ್ರಿಕೆಟ್ ಕ್ಲಬ್ ಸದಸ್ಯರು, ಒಗ್ಗೂಡಿ ಬಂದಿರುವುದು ನೋಡಿದರೆ ಇಡೀ ಭಾರತವೇ ಇಲ್ಲಿ ಸೇರಿದಂತೆ ಭಾಸವಾಗುತ್ತಿದೆ.ಭಾರತ ಎಂದರೆ ಅದೊಂದು ಅಸ್ಮಿತೆ,ಭಾರತಾಂಬೆಯ ಮಕ್ಕಳಾದ ನಾವು ತಾಯಿ ಭಾರತಿಯನ್ನು ಸ್ಮರಿಸುತ್ತಿರುವುದು ಅತ್ಯಂತ ಸಂತೋಷ ತಂದಿದೆ. ನಿಮಗೆಲ್ಲಾ ೭೬ನೇ ಗಣತಂತ್ರದಿನದ ಶುಭಾಶಯಗಳನ್ನು ಕೋರುತ್ತೇನೆ ಎಂದರು.ನಂದಿ ಬೆಟ್ಟದ ಮೇಲೆ ಆಚರಿಸಿದ ಗಣರಾಜ್ಯೋತ್ಸವದಲ್ಲಿ ಪ್ರಾರ್ಥನೆಯನ್ನು ನಾದಸ್ವರದ ಮೂಲಕ ಮಾಡಿದ್ದು ವಿಶೇಷ.ಕಾರ್ಯಕ್ರಮದ ನಂತರ ಪ್ರವಾಸಿಗರೂ ಸೇರಿದಂತೆ 300ಕ್ಕೂ ಹೆಚ್ಚು ಮಂದಿಗೆ ಸಿಹಿವಿತರಣೆ,
ಟೀಷರ್ಟ್ ವಿತರಣೆ, ಲಘುಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಹರೀಶ್ ರೆಡ್ಡಿ, ಜಯಕುಮಾರ್,
ಮಂಜಣ್ಣ,ಜೆಸಿಸಿ ತಂಡದ ನಾಯಕರು, ಆರ್.ಹೆಚ್.ಎಲ್‌ ಸಮೂಹ ಸಂಸ್ಥೆಯ ರಘು ಮತ್ತು ಇತರರು ಉಪಸ್ಥಿತರಿದ್ದರು.

ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಸದಸ್ಯರು 76ನೇ ಗಣರಾಜ್ಯೋತ್ಸವದ ಅಂಗವಾಗಿ ಸುಲ್ತಾನ್‌ಪೇಟೆಯ ನಂದಿಬೆಟ್ಟದ ಬುಡದಿಂದ ಬೆಟ್ಟದ ತುದಿಯವರೆಗೆ ಸ್ವಚ್ಛತೆ ಮಾಡಿದರು. ಸುಮಾರು 250 ಕೆ.ಜಿಯಷ್ಟಯ ಪ್ಲಾಸ್ಟಿಕ್ ಬಾಟಲಿ, ಕವರ್, ಕುರ್ಕುರೆ ಪ್ಯಾಕ್‌ಗಳನ್ನು ಆರಿಸಿ ಚೀಲದಲ್ಲಿ ತುಂಬಿ ಕರ್ನಾಟಕ ಪ್ರವಾಸೋಧ್ಯಮ ಇಲಾಖೆಗೆ ಹಸ್ತಾಂತರಿಸಿ ಇತರರರಿಗೆ ಮಾದರಿಯಾದರು.ಗಣರಾಜ್ಯೋತ್ಸವವನ್ನು ಹೀಗೂ ವಿಭಿನ್ನವಾಗಿ ಮಾಡಬಹುದು ಎಂಬುದನ್ನು ಮಾತಿನಲ್ಲಿ ಹೇಳದೆ ಕೆಲಸದ ಮೂಲಕ ತೋರಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

Leave a Reply

Your email address will not be published. Required fields are marked *