ಪವರ್ ಗ್ರಿಡ್ ಸಂಸ್ಥೆಯ ವತಿಯಿಂದ ಟ್ರ್ಯಾಕ್ಟರ್, ಬೋರ್ ವೆಲ್ ಹಸ್ತಾಂತರ :

ಯಲಹಂಕ : ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿಗೆ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆ ತನ್ನ ಸಾಮಾಜಿಕ ಜವಾಬ್ದಾರಿ ನಿಧಿ(ಸಿಎಸ್ಆರ್)ಯ ಅಡಿಯಲ್ಲಿ 20 ಲಕ್ಷ ರು.ವೆಚ್ಚದಲ್ಲಿ ಕಸ ವಿಲೇವಾರಿಗಾಗಿ ಒಂದು ಟ್ರ್ಯಾಕ್ಟರ್ ಮತ್ತು ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಒಂದು ಬೋರ್ ವೆಲ್ ನ್ನು ಮಂಗಳವಾರ ಹಸ್ತಾಂತರಿಸ ಲಾಯಿತು.

ಪವರ್ ಗ್ರಿಡ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಟಿ.ಆರ್.ಕೃಷ್ಣಕುಮಾರ್ ಅವರು ಶಾಸಕ ಎಸ್ ಆರ್ ವಿಶ್ವನಾಥ್ ಅವರ ಮೂಲಕ ಟ್ರ್ಯಾಕ್ಟರ್ ನ ಕೀ ಯನ್ನು ಸಿಂಗನಾಯಕನಹಳ್ಳಿ ಗ್ರಾ. ಪಂ.ಗೆ ಹಸ್ತಾಂತರಿಸಿದರು.

ಇದೇ ವೇಳೆ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಪವರ್ ಗ್ರಿಡ್ ಸಂಸ್ಥೆ ಕಳೆದ ಹಲವು ವರ್ಷ ಗಳಿಂದ ಸಿಂಗನಾಯಕನಹಳ್ಳಿ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯ ಸಿಎಸ್ಆರ್ ಅಡಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸೇವಾ ಕಾರ್ಯ ಗಳನ್ನು ಕೈಗೊಳ್ಳುತ್ತಾ ಬಂದಿದೆ. ಈ ಬಾರಿ ಗ್ರಾ.ಪಂ. ವ್ಯಾಪ್ತಿಯ ಕಸ ವಿಲೇವಾರಿಗಾಗಿ ಒಂದು ಟ್ರಾಕ್ಟರ್ ಮತ್ತು ಕುಡಿಯವ ನೀರಿನ ಸಮಸ್ಯೆ ನೀಗಿಸಲು ಬೋರ್ ವೆಲ್ ಗಾಗಿ ಬೇಡಿಕೆ ಇಟ್ಟಿದ್ದೆವು, ಪವರ್ ಗ್ರಿಡ್ ಸಂಸ್ಥೆ ಇಂದು ಅವುಗಳನ್ನು ಗ್ರಾ.ಪಂ.ಗೆ ಹಸ್ತಾಂತರಿಸಿದೆ. ಆದರೆ ಪವರ್ ಗ್ರಿಡ್ ಸಂಸ್ಥೆಯಿಂದ ಸಿಂಗನಾಯಕನಹಳ್ಳಿ ಗ್ರಾ.ಪಂ.ಗೆ ಇನ್ನೂ ಹೆಚ್ಚಿನ ನೆರವಿನ ಅಗತ್ಯವಿದೆ.. ವಿಶೇಷವಾಗಿ ಇನ್ನೂ ಐದು ಬೋರ್ ವೆಲ್ ಗಳು, ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳು ಮತ್ತು ಸಿಂಗನಾಯಕನಹಳ್ಳಿ ಗ್ರಾಮದಲ್ಲಿ ಪಾರ್ಕ್ ಒಂದರ ಅಭಿವೃದ್ಧಿಗೆ ನೆರವಿನ ಅಗತ್ಯವಿದೆ, ಪವರ್ ಗ್ರಿಡ್ ಸಂಸ್ಥೆ ಈ ಕಾರ್ಯಗಳಿಗೂ ಸಹ ಶೀಘ್ರವಾಗಿ ನೆರವು ನೀಡಿ ಸಹಕರಿಸಲಿ ಎಂಬುದು ನಮ್ಮ ಮನವಿಯಾಗಿದೆ ಎಂದರು.

ಪವರ್ ಗ್ರಿಡ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಟಿ.ಆರ್. ಕೃಷ್ಣಕುಮಾರ್ ಮಾತನಾಡಿ ‘ಪವರ್ ಗ್ರಿಡ್ ಸಂಸ್ಥೆಯ ವತಿಯಿಂದ ಸಿಎಸ್ಆರ್ ಅಡಿಯಲ್ಲಿ ಕಾಲಕ್ಕೆ ಅನುಗುಣವಾಗಿ ಸೇವಾ ಕಾರ್ಯ ಗಳನ್ನು ಕೈಗೊಳ್ಳಲಾಗುತ್ತಿದ್ದು, ಸಂಸ್ಥೆಯ ವತಿಯಿಂದ ಇಂದು ಸಿಂಗನಾಯಕನಹಳ್ಳಿ ಗ್ರಾ.ಪಂ‌.ಗೆ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಮೂಲಕ ಕಸ ವಿಲೇವಾರಿ ಗಾಗಿ ಒಂದು ಟ್ರ್ಯಾಕ್ಟರ್, ಒಂದು ಬೋರ್ ವೆಲ್ ನ್ನು ಹಸ್ತಾಂತರಿಸ ಲಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾ.ಪಂ‌.ಯ ಅಗತ್ಯತೆಯನ್ನು ನೋಡಿಕೊಂಡು ಪವರ್ ಗ್ರಿಡ್ ವತಿಯಿಂದ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಪವರ್ ಗ್ರಿಡ್ ಸಂಸ್ಥೆಯ ಆಡಳಿತ ವಿಭಾಗದ ಮುಖ್ಯ ವ್ಯವಸ್ಥಾಪಕ ಜಿ.ಎಸ್. ಆರ್.ರಾವ್, ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ತನ್ವೀರ್ ಎಂ., ಹಿರಿಯ ಬಿಜೆಪಿ ಮುಖಂಡ ಎಸ್ ಎನ್ ರಾಜಣ್ಣ, ಸಿಂಗನಾಯಕನ ಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಅಮರಾವತಮ್ಮ, ಉಪಾಧ್ಯಕ್ಷ ಹೇಮಂತ್ ಕುಮಾರ್, ಮಾಜಿ ಅಧ್ಯಕ್ಷರಾದ ಟಿ.ಮುನಿರೆಡ್ಡಿ, ಚಂದ್ರ ಶೇಖರ್, ಮಾಜಿ ಉಪಾಧ್ಯಕ್ಷರಾದ ಎಸ್.ಜಿ. ಪ್ರಶಾಂತ್ ರೆಡ್ಡಿ, ಜೀವಿತಾ ಮುನಿಕೃಷ್ಣ, ಸದಸ್ಯರಾದ ಪದ್ಮಶ್ರೀ ನಾಗರಾಜ್ ರೆಡ್ಡಿ, ಕೆ. ಬಾಬು, ಮಲ್ಲೇಶ್, ಭಾಗ್ಯಕಿರಣ್, ಹರೀಶ್, ಜಿ.ಎಸ್. ಮಂಜುನಾಥ್, ನಂಜೇಗೌಡ, ಚೈತ್ರ ಕೆಂಪೇಗೌಡ, ಪಿಡಿಓ ದಾಮೋದರ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *