ವರದಿ: ಮುಬಷೀರ್ ಅಹಮದ್

ಬಿಜೆಪಿ ಅಧ್ಯಕ್ಷಗಾದಿಗೆ ನಾಲ್ವರ ಹೆಸರು ಅಹಿಂದ ವರ್ಗಕ್ಕೆ ಕೊಕ್?: ಎಸ್‌ಆರ್‌ಎಸ್ ದೇವರಾಜ್ ತೀವ್ರ ಬೇಸರ

ಚಿಕ್ಕಬಳ್ಳಾಪುರ: ಬಿಜೆಪಿ ಜಿಲ್ಲಾಧ್ಯಕ್ಷಗಾದಿಗೆ ನಾಲ್ಕು ಮಂದಿಯ ಹೆಸರನ್ನು ಹೈಕಮಾಂಡ್‌ಗೆ ಕಳಿಸಿದ್ದಾರೆ ಎನುವ ಸಂಗತಿ ಅಹಿಂದ ನಾಯಕರ ನಡುವೆ ತೀವ್ರ ಬೇಸರಕ್ಕೆ ಕಾರಣವಾಗಿದೆ.

ಅಹಿಂದ ನಾಯಕ ಎಸ್‌ಆರ್‌ಎಸ್ ದೇವರಾಜ್ ಸೇರಿ 5 ಮಂದಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರೂ. ಚುನಾವಣಾ ಉಸ್ತುವಾರಿಯಾದ ಮಾಜಿ ಶಾಸಕ ಎಂ.ರಾಜಣ್ಣ ಅವರ ತಂಡ 4 ಮಂದಿಯ ಪಟ್ಟಿಯನ್ನಷ್ಟೇ ಹೈಕಮಾಂಡ್‌ಗೆ ಕಳಿಸಿದ್ದಾರೆ ಎಂಬುದು ಅದೇ ರೇಸಿನಲ್ಲಿದ್ದ ಅಹಿಂದ ನಾಯಕರು ಮತ್ತು ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.

ಹೌದು ಬಿಜೆಪಿ ಪಕ್ಷದ ನಿಯಮದಂತೆ ಬೂತ್ ಅಧ್ಯಕ್ಷರು ಕೂಡಿ ಮಂಡಲ ಅಧ್ಯಕ್ಷರನ್ನು ಆರಿಸುತ್ತಾರೆ.ಮಂಡಲ ಅಧ್ಯಕ್ಷರು ಜಿಲ್ಲಾ ಮುಖಂಡರು ಸೇರಿ ಜಿಲ್ಲಾಧ್ಯಕ್ಷರನ್ನು ಆರಿಸುವುದು ಈ ಹಿಂದಿನಿoದ ನಡೆದುಕೊಂಡು ಬಂದಿರುವ ಪದ್ಧತಿ.ಆದರೆ ಸುಧಾಕರ್ ಬಿಜೆಪಿಗೆ ಬಂದ ಮೇಲೆ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷದ ಹಿರಿತನ ಕಡೆಗಣಿಸಿ ಈಗಷ್ಟೇ ಪಕ್ಷಕ್ಕೆ ಬಂದವರಿಗೆ, ಪ್ರಬಲ ಸಮುದಾಯಗಳಿಗೆ, ಹಣವುಳ್ಳವರಿಗೆ ಮನ್ನಣೆ ನೀಡುತ್ತಿರುವುದು ನಡೆದಿದೆ.ಈಗಲೂ ಅದೇ ನಡೆದರೆ ಆಶ್ಚರ್ಯವೇನಿಲ್ಲ ಎನ್ನುವುದು ಹಡಸರು ಹೇಳಲು ಇಚ್ಚಿಸದ ಬಿಜೆಪಿ ಮುಖಂಡರ ಮಾತಾಗಿದೆ.
ಮೇಲಾಗಿ ಅಧ್ಯಕ್ಷಗಾದಿಯ ರೇಸಿನಲ್ಲಿ ಪ್ರಬಲ ಆಕಾಂಕ್ಷಿಗಳಾಗಿ ಎಸ್.ಆರ್.ಎಸ್ ದೇವರಾಜ್,ಕಳವಾರ ಪ್ರತಾಪ್, ಸೀಕಲ್ ರಾಮಚಂದ್ರಗೌಡ, ಸಂದೀಪ್‌ರೆಡ್ಡಿ ನಾಮಪತ್ರ ಸಲ್ಲಿಸಿದ್ದು ಚುನಾವಣಾ ಉಸ್ತುವಾರಿ ಈ ಪಟ್ಟಿಯನ್ನು ಹೈಕಮಾಂಡ್‌ಗೆ ಕಳಿಸಿದ್ದಾರೆ ಎನ್ನಲಾಗಿದೆ.

ಆದರೆ ಇತ್ತೀಚೆಗೆ ಜಿಲ್ಲಾಧ್ಯಕ್ಷರ ಆಯ್ಕೆ ಕುರಿತಂತೆ ನಿರ್ಗಮಿತ ಅಧ್ಯಕ್ಷ ರಾಮಲಿಂಗಪ್ಪ ಅವರು ಮಾಧ್ಯವೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಕೇವಲ ನಾಲ್ಕು ಮಂದಿಯ ಹೆಸರನ್ನಷ್ಟೇ ಉಲ್ಲೇಖಿಸಿರುವುದು ಅಹಿಂದ ನಾಯಕರನ್ನು ಕೆರಳಿ ಕೆಂಡವಾಗಿಸಿದೆ.

ಯಾಕೆoದರೆ ಸಂಸದ ಡಾ.ಕೆ.ಸುಧಾಕರ್ ಬಿಜೆಪಿಗೆ ಬಂದ ನಂತರ ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.ಇದಕ್ಕೆ ತುಪ್ಪ ಸುರಿದಂತೆ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ.ಪ್ರಬಲ ಸಮುದಾಯಕ್ಕೆ ಮಣೆ ಹಾಕುತ್ತಿರುವ ಬಿಜೆಪಿ ನಾಯಕರು, ಪಕ್ಷದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ನಿಯಮ ಗಾಳಿಗೆ ತೂರಿ ಜಿಲ್ಲಾಧ್ಯಕ್ಷ ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸಲಾಗಿದೆ ಎಂಬ ದೂರುಗಳು ಪಕ್ಷದ ಕಾರ್ಯಕರ್ತರಿಂದಲೇ ಕೇಳಿಬರುತ್ತಿವೆ.

ಪಕ್ಷನಿಷ್ಠರಿಗೆ ಅನ್ಯಾಯ:

15 ವರ್ಷಗಳಿಗೂ ಹೆಚ್ಚು ಕಾಲದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಎಸ್.ಆರ್.ಎಸ್ ದೇವರಾಜು ಅವರು ಸಹ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಪಕ್ಷದ ನಿಷ್ಠಾವಂತ ಕಾರ್ಯತರಲ್ಲಿ ಒಬ್ಬರು. ಆದರೆ, ಅಹಿಂದ ಎಂಬ ಕಾರಣಕ್ಕೆ ಅವರನ್ನು ಪಟ್ಟಿಯಿಂದ ಕೈಬಿಟ್ಟು, ಅಧಿಕಾರಸ್ಥ ಮುಖಂಡರು ಕೋಕ್ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಿರಿತನದ ಆಧಾರದಲ್ಲಿ ನೋಡುವುದಾದರೆ ಎಸ್‌ಆರ್‌ಎಸ್ ದೇವರಾಜು ಮೊದಲ ಆಧ್ಯತೆಯಾಗಬೇಕು. ಆದರೆ ಜಾತಿ ಬೆಂಬಲ ಇಲ್ಲ ಎಂಬ ಕಾರಣಕ್ಕೆ ಅವರನ್ನು ಪಟ್ಟಿಯಿಂದ ಹೊರಗಿಟ್ಟು, ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂಬ ಚರ್ಚೆಗಳೂ, ಆರೋಪಗಳೂ ಜೋರಾಗಿವೆ.

ರೇಸಿನಲ್ಲಿರದ ಮರಳುಕುಂಟೆ?
ಬಿಜೆಪಿ ಅಧ್ಯಕ್ಷಗಾದಿಯ ರೇಸಿನಲ್ಲಿರದ ಮರಳುಕುಂಟೆ ಕೃಷ್ಣಮೂರ್ತಿ ಹೆಸರು ಪಟ್ಟಿಯಲ್ಲಿ ದಿಢೀರ್ ಎಂದು ಕಾಣಿಸಿಕೊಂಡಿರುವುದು ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದಂತೆ ನಿಷ್ಠಾವಂತ ಕಾರ್ಯಕರ್ತರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.ಅಹಿಂದ ವರ್ಗಗಳ ಕಡೆಗಣನೆ ಸರಿಯಲ್ಲ ಎಂದು ಬೇಸರಿಸಿದ್ದಾರೆ.

ಶಿಸ್ತಿನ ಸಿಪಾಯಿ:
ಎಸ್‌ಆರ್‌ಎಸ್ ದೇವರಾಜ್ ಎಂಬ ಸಿಸ್ತಿನ ಸಿಪಾಯಿ 15 ವರ್ಷಗಳಿಂದ ಪಕ್ಷಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ಇಲ್ಲದ ಸನ್ನಿವೇಶದಲ್ಲಿ ತಿಪ್ಪೇನಹಳ್ಳಿ ಪೋಶೆಟ್ಟಿಹಳ್ಳಿಯನ್ನು ಕಾರ್ಯಕ್ಷೇತ್ರವಾಗಿಸಿಕೊಂಡು ಪಕ್ಷಕ್ಕೆ ಚೈತನ್ಯ ತುಂಬಿದವರು. ಪ್ರತಿವರ್ಷ ತಪ್ಪದೆ ಅಟಲ್‌ಬಿಹಾರಿ ವಾಜಪೇಯಿ ಜಯಂತಿಯನ್ನು ಆಚರಿಸುತ್ತಿದ್ದರು.ಗಣಪತಿ ಹಬ್ಬದಲ್ಲಿ ಯುವಕ ಸಂಘಟನೆಗಳಿಗೆ ಗಣಪತಿ ಮೂರ್ತಿಗಳ ವಿತರಣೆ, ಕೊರೋನಾ ಕಾಲದಲ್ಲಿ ನೆರವು,ತಿರಂಗಾ ಯಾತ್ರೆಯ ಯಶಸ್ಸು ಹೀಗೆ ಹತ್ತು ಹಲವು ಕಾರ್ಯಗಳ ಮೂಲಕ ಬಿಜೆಪಿ ಪಕ್ಷವನ್ನು ಬಲಗೊಳಿಸಿದ್ದಾರೆ.ಅಹಿಂದ ನಾಯಕರಾದ ಎಸ್‌ಆರ್‌ಎಸ್ ದೇವರಾಜ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿ ಅಹಿಂದ ಅವರ್ಗಗಳಿಗೆ ಶಕ್ತಿ ತುಂಬುವ ಕೆಲಸವನ್ನು ಪಕ್ಷದ ಹೈಕಮಾಂಡ್ ಮಾಡಲಿ ಎನ್ನುವುದು ನಿಷ್ಟಾವಂತ ಕಾರ್ಯಕರ್ತರ ಒತ್ತಾಸೆಯಾಗಿದೆ.
ಒಟ್ಟಾರೆಯಾಗಿ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಎಸ್‌ಆರ್‌ಎಸ್ ದೇವರಾಜ್ ಅವರನ್ನೇ ಜಿಲ್ಲಾಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಕಾರ್ಯಕರ್ತರ ಒತ್ತಾಸೆಯಾಗಿದೆ.ಇದೀಗ ಹುಟ್ಟಿಕೊಂಡಿರುವ ಅಸಮಾಧಾನ ಶಮನ ಮಾಡುವ ನಿಟ್ಟಿನಲ್ಲಿ ನಾಯಕರ ಮುಂದಿನ ನಡೆ ಏನಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಬಾಕ್ಸ್..

ಬಿಜೆಪಿ ಶಿಸ್ತಿನ ಪಕ್ಷ, ಕಾರ್ಯಕರ್ತರ ಪಕ್ಷ ಎಂಬುದು ಈಗ ಅಪ್ರಸ್ತುತವಾಗುತ್ತಿದೆಯೇನೋ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ.ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿದವರಲ್ಲಿ ನಾನೂ ಒಬ್ಬ.15 ವರ್ಷಗಳಿಂದ ಪಕ್ಷದ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದ್ದೇನೆ. ಬಿಜೆಪಿಯನ್ನು ಬಲಿಷ್ಟವಾಗಿ ಕಟ್ಟಿದ ನಾನು ಜಿಲ್ಲೆಯ ರಾಜಕಾರಣದಲ್ಲಿ ಸಕ್ರಿಯವಾಗಿದ್ದರೂ ಅಧ್ಯಕ್ಷಗಾದಿ ಆಕಾಂಕ್ಷಿಗಳಲ್ಲಿ ನನ್ನನ್ನು ಪರಿಗಣಿಸದಿರುವುದು ಬೇಸರ ಮೂಡಿಸಿದೆ.

ಎಸ್.ಆರ್.ಎಸ್ ದೇವರಾಜ್ ಅಹಿಂದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ.

Leave a Reply

Your email address will not be published. Required fields are marked *