
ಗಣರಾಜ್ಯೋತ್ಸವ ಅಂಗವಾಗಿ ಸಿಎಸ್ಐ ಆಸ್ಪತ್ರೆಯಲ್ಲಿಉಚಿತ ಬಂಜೆತನ ಸಮಾಲೋಚನ ಶಿಬಿರದ ಆಯೋಜನೆ
ಚಿಕ್ಕಬಳ್ಳಾಪುರ:ಗಣರಾಜ್ಯೋತ್ಸವದ ಅಂಗವಾಗಿ ಇಂದು ಸಿಎಸ್ಐ ಆಸ್ಪತ್ರೆಯಲ್ಲಿ ನೋವಾ IVF ಫರ್ಟಿಲಿಟಿ ವತಿಯಿಂದ ಸಿಎಸ್ಐ ಮಿಷನ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಬಂಜೆತನ ಸಮಾಲೋಚನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸುತ್ತಮುತ್ತಲಿನ ಗ್ರಾಮಾಂತರ ಹಾಗೂ ನಗರ ಪ್ರದೇಶದಿಂದ ಹಲವಾರು ದಂಪತಿಗಳು ಈ ಶಿಬಿರದಲ್ಲಿ ಬಂದು ನುರಿತ ವೈದ್ಯರಿಂದ ಸಮಾಲೋಚನೆ ನಡೆಸಿ ಬಂಜೆತನದ ಬಗ್ಗೆ ತಿಳಿದುಕೊಂಡರು.
ನೋವಾ IVF ಫರ್ಟಿಲಿಟಿ ವೈದ್ಯರಾದ ಅಪರ್ಣ ಸುಪ್ರಿಯಾ ಮಾತನಾಡಿ ಬಂಜೆತನಕ್ಕೆ ವಿವಿಧ ಕಾರಣಗಳಿವೆ ಮಕ್ಕಳಾಗದೆ ಇದ್ದವರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಆಗ ಮಾತ್ರ ಬಂಜೆತನದಿಂದ ನಿವಾರಣೆ
ಕಂಡುಕೊಳ್ಳಬಹುದಾಗಿದೆ. ಇಂದಿನ ಶಿಬಿರದಲ್ಲಿ ಬಂಜೆತನಕ್ಕೆ ಕಾರಣಗಳು ಅದರಿಂದ ರಕ್ಷಣೆ ಹಾಗೂ ಅನುಸರಿಸಬೇಕಾದಂತಹ ವಿಧಾನಗಳ ಬಗ್ಗೆ ಕೂಡ ದಂಪತಿಗಳಿಗೆ ಅರಿವು ಮೂಡಿಸಲಾಗುತ್ತಿದೆ ಇಂತಹ ಶಿಬಿರಗಳಲ್ಲಿ ಸಂಕೋಚ ಬಿಟ್ಟು ವೈದ್ಯರೂಂದಿಗೆ ಸಮಾಲೋಚಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಇಂದಿನ ಶಿಬಿರ ಆಯೋಜಿಸಲು ಚಿಕ್ಕಬಳ್ಳಾಪುರ ಸಿಎಸ್ಐ ಆಸ್ಪತ್ರೆ ಸಂಪೂರ್ಣ ಸಹಕಾರ ನೀಡಿದ್ದು ಆಡಳಿತ ಮಂಡಳಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ಸಿಎಸ್ಐ ಆಸ್ಪತ್ರೆ ವೈದ್ಯರಾದ ಡಾ.ರತೀಶ್ ಜಾನ್ಸನ್ ಮಾತನಾಡಿ ಬಂಜೆತನದಿಂದ ಬಳಲುತ್ತಿರುವ ಬಹುತೇಕ ದಂಪತಿಗಳು ಸಮಸ್ಯೆ ಬಗ್ಗೆ ಚರ್ಚಿಸಲು ಸಂಕೋಚ ಪಡುತ್ತಾರೆ ಕೆಲವರು ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಾರೆ ಅಂತಹವರಿಗೆ ಸೂಕ್ತ ವೇದಿಕೆ ಅಂದರೆ ಶಿಬಿರಗಳ ಮುಖಾಂತರ ಬಂಜೆತನ ನಿವಾರಣೆಗೆ ಅನುಸರಿಸಬೇಕಾದಂತಹ ವಿಧಾನಗಳು,ಚಿಕಿತ್ಸೆ ಬಗ್ಗೆ ಇನ್ನೂ ಹಲವಾರು ವಿಧಾನಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ,ಇನ್ನು ಶಿಬಿರದಲ್ಲಿ ತಪಾಸಣೆಗೆ ಮಾಡಿಸಿದ ದಂಪತಿಗಳಿಗೆ ಕಮ್ಮಿ ದರದಲ್ಲಿ ನೋವಾ IVF ಫರ್ಟಿಲಿಟಿ ಚಿಕಿತ್ಸೆ ನೀಡಲು ಮುಂದಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರೈತ ಜನಸೇನ ರಾಜ್ಯದಕ್ಷೆ ಸುಶ್ಮಾ ಶ್ರೀನಿವಾಸ್ ಮಾತನಾಡಿ
ಸಿಎಸ್ಐ ಆಸ್ಪತ್ರೆಯಲ್ಲಿ ಆಯೋಜಿಸಿಲಾಗಿರುವ ಬಂಜೆತನ ಸಮಾಲೋಚನ ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬಂಜೆತನದಿಂದ ಬಳಲುತ್ತಿರುವ ಬಹುತೇಕ ದಂಪತಿಗಳು ಮುಜುಗರಕ್ಕೆ ಒಳಗಾಗಿ ಸುಮ್ಮನೆ ಇರುತ್ತಾರೆ ಅಂತಹವರಿಗೆ ಇಂತಹ ಶಿಬಿರಗಳು ಬಹಳಷ್ಟು ಸಹಕಾರಿಯಾಗಲಿದೆ ಮನೆಯಂತಹ ವಾತಾವರಣದಲ್ಲಿ ನುರಿತ ವೈದ್ಯರು ಬಂಜೆತನದ ಬಗ್ಗೆ ಪ್ರತಿ ವಿಷಯ ವಿಸ್ತಾರದಲ್ಲಿ ತಿಳಿಸುತ್ತಿದ್ದು ಚಿಕಿತ್ಸೆ ಮಾಡಿಸಲು ತಯಾರಿರುವ ದಂಪತಿಗಳಿಗೆ ಕಮ್ಮಿ ದರದಲ್ಲಿ ಚಿಕಿತ್ಸೆ ನೀಡಲು ನೋವಾ IVF ಫರ್ಟಿಲಿಟಿ ಮುಂದಾಗಿದ್ದು ಸಂತೋಷಕರ ಸಂಗತಿ ಎಂದರು.
ಈ ಸಂದರ್ಭದಲ್ಲಿ ಸಿಎಸ್ಐ
ಆಸ್ಪತ್ರೆ ಸ್ವಾಮಿ ದಾಸ್, ಅರುಣ್ ಕುಮಾರ್,ಸುರೇಶ್,ಶಶಿಕುಮಾರ್ ಮತ್ತು ಇತರರು ಹಾಜರಿದ್ದರು.