” ಹಸಿರೇ ಉಸಿರು”
— ಡಾ.ಶರಣಪ್ಪ ಕೊಟಗಿ
“”””””””””””””””””””””””””””””””””
ಹುಬ್ಬಳ್ಳಿ :-ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪದ ಆವರಣದಲ್ಲಿ ಹುಬ್ಬಳ್ಳಿಯ
ಶ್ರೀಯಾ ಫೌಂಡೇಶನ್ ವತಿಯಿಂದ ಸಸಿ ನೆಡುವ ಮುಖಾಂತರ ವಿಶ್ವ ಪ್ರಕೃತಿ ಸಂರಕ್ಷಣಾ
ದಿನಾಚರಣೆಯನ್ನು ಆಚರಿಸಲಾಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಷ್ಟ್ರಾಧ್ಯಕ್ಷರಾದ ಡಾ.ಶರಣಪ್ಪ ಕೊಟಗಿಯವರು ಸಸಿ ನೆಟ್ಟು ಹಸಿರೇ ನಮ್ಮ ಉಸಿರಾಗಬೇಕೆಂದರೆ ನಾವು ಪರಿಸರವನ್ನು ಬೆಳಿಸುವದು
ಅದನ್ನು ರಕ್ಷಿಸುವದು ಬಹಳೇ ಮುಖ್ಯ ,ಪ್ರಕೃತಿಯನ್ನು ನಾವು ರಕ್ಷಿಸಿದರೆನಮ್ಮನ್ನು ಪ್ರಕೃತಿ ರಕ್ಷಿಸುತ್ತದೆ. ಎಂದು ಹೇಳಿದರು. ಇದೇಸಂದರ್ಭದಲ್ಲಿ ಶ್ರೀಯಾ ಪೌಂಡೇಶನದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಶಾಂತಣ್ಣಕಡಿವಾಲ, ಜಂಗಮಾಭಿವೃದ್ಧಿ
ಸಂಸ್ಥೆಯ ಗೌರವಾಧ್ಯಕ್ಷಾ ಆರ್ ಎಂ ಹಿರೇಮಠ, ನಿವೃತ್ತ ಯೋಧರಾದ ಎಂ ಎಚ್
ಚಳ್ಳಮರದ ಹಾಗೂ ಶ್ರೀಯಾ ಪೌಂಡೇಶನದ ರಾಜ್ಯಾಧ್ಯಕ್ಷ ವಿ ಜಿ ಪಾಟೀಲ ,ಕಲ್ಯಾಣ ಮಂಟಪದ ವ್ಯವಸ್ಥಾಪಕ ಗದಿಗೆಯ್ಯ ಹಿರೇಮಠ ಹಾಗೂ ಇತರರು ಉಪಸ್ಥಿತರಿದ್ದರು.