ಹೊಸಕೋಟೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಪಟೈಟಿಸ್ ಲಸಿಕೆ ಹಾಕುವುದರ ಮೂಲಕ” ವಿಶ್ವ ಹೆಪಟೈಟಿಸ್ ದಿನಾಚರಣೆ” ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ " ವಿಶ್ವ ಹೆಪಟೈಟಿಸ್ ದಿನಾಚರಣೆ " ಯನ್ನು ಜಿಲ್ಲಾ ಕ್ಷಯ ರೋಗ ನಿರ್ಮೂಲನ ಅಧಿಕಾರಿಗಳು ಮತ್ತು ತಾಲೂಕು ನೋಡಲು ಅಧಿಕಾರಿಗಳಾದ ಡಾ. ನಾಗೇಶ್ ರವರ ಅಧ್ಯಕ್ಷತೆಯಲ್ಲಿ ಜ್ಯೋತಿ ಬೆಳಗಿಸಿ, ಹೆಪಟೈಟಿಸ್ ಕುರಿತಂತ ಸರ್ಕಾರಿ ಕರಪತ್ರಗಳನ್ನು ಬಿಡುಗಡೆ ಮಾಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಆಗತಾನೇ ಹುಟ್ಟಿದ ನವಜಾತ ಶಿಶುವಿಗೆ ಹೆಪಟೈಟಿಸ್ ಲಸಿಕೆ ಹಾಕುವುದರ ಮೂಲಕ ಸಾಂಕೇತಿಕವಾಗಿ ಮತ್ತು ಅರ್ಥಗರ್ಭಿತವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಗುರುರಾಜ್ ರವರು ನಿರೂಪಿಸಿದರು. ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ವೀಣಾ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಸತೀಶ್, ಮಕ್ಕಳ ತಜ್ಞರಾದ ಡಾ. ಸೌಮ್ಯ, ಶಸ್ತ್ರಚಿಕಿತ್ಸಕರಾದ ಡಾ. ಮೋಹನ್ ದಾಸ್ , ಇ ಏನ್ ಟಿ ತಜ್ಞರಾದ ಡಾ. ರವಿಶಂಕರ್, ನೇತ್ರ ತಜ್ಞರಾದ ಡಾ.ಮಂಜುನಾಥ ಸ್ವಾಮಿ,ದಂತ ವೈದ್ಯರಾದ ಡಾ. ಮಾಲಿನಿ , ಕೀಲು ಮತ್ತು ಮೂಳೆ ತಜ್ಞರಾದ ಡಾ. ರಾಘವೇಂದ್ರ, ತಾಲೂಕು ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಗುರುರಾಜ್, ಹಿರಿಯ ಫಾರ್ಮಸಿ ಅಧಿಕಾರಿಗಳಾದ ಶ್ರೀಮತಿ ಅರ್ಚನಾ, ಶ್ರೀಮತಿ ಸೌಭಾಗ್ಯ, ಶ್ರೀಮತಿ ಸುಷ್ಮಾ ತಾಲೂಕು ಕ್ಷಯರೋಗ ಘಟಕದ ಶ್ರೀ ಸುದೀಪ್, ಶ್ರೀ ಪ್ರಭಾಕರ್, ಸಾರ್ವಜನಿಕ ಆಸ್ಪತ್ರೆಯ ಮೆಟ್ರಾನ್ ಶ್ರೀಮತಿ ಮೇರಿ, ಆಪ್ತ ಸಮಾಲೋಚಕರಾದ ಶ್ರೀಮತಿ ಅಂಬಿಕಾ , ಶುಶ್ರೂಷಕ ಅಧಿಕಾರಿ ಶ್ರೀಮತಿ ಕನಕ ಸೇರಿದಂತೆ ಇತರೆ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.

Leave a Reply

Your email address will not be published. Required fields are marked *